ನಗರದ ಮೇಖ್ರಿ ವೃತ್ತದ ಸಮೀಪದ ಭಾರತೀಯ ರಕ್ಷಣೆ ಇಲಾಖೆ ಅಧೀನದ ‘ಪ್ಯಾರಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್’ ಮತ್ತು ‘ಶತ್ರುಜೀತ್ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್’ (ಎಸ್ಎಪಿಪಿಎಸ್-ಪಿಆರ್ಟಿಸಿ) ಸಹಯೋಗದಲ್ಲಿ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಡೆಸ್ಕ್ ಕೊಡುಗೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಮೇಖ್ರಿ ವೃತ್ತದ ಸಮೀಪದ ಭಾರತೀಯ ರಕ್ಷಣೆ ಇಲಾಖೆ ಅಧೀನದ ‘ಪ್ಯಾರಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್’ ಮತ್ತು ‘ಶತ್ರುಜೀತ್ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್’ (ಎಸ್ಎಪಿಪಿಎಸ್-ಪಿಆರ್ಟಿಸಿ) ಸಹಯೋಗದಲ್ಲಿ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಡೆಸ್ಕ್ ಕೊಡುಗೆ ನೀಡಲಾಗಿದೆ. ಸೆಂಟರ್ನ ಬ್ರಿಗೇಡಿಯರ್ ಮತ್ತು ಎಸ್ಎಪಿಪಿಎಸ್-ಪಿಆರ್ಟಿಸಿ ಪೋಷಕರಾದ ಎಸ್.ಎಂ. ಅರ್ಜುನ್ ಸೆಗಾನ್ ಅವರು ಶುಕ್ರವಾರ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಲಾ ಎರಡು ಸೀಟಿನ ಹಲವು ಡೆಸ್ಕ್ಗಳನ್ನು ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಅವರು ಸರ್ಕಾರಿ ಶಾಲೆಯ ಪ್ರತಿಯೊಂದು ತರಗತಿ ತೆರಳಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.
ಭಾರತೀಯ ಸೇನೆಯ ಬ್ರಿಗೇಡಿಯರ್ ಜೊತೆ ಸಂವಹನ ನಡೆಸಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಶತ್ರುಜೀತ್ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್ನ ಕರ್ನಲ್ ಸುರೇಶ್ ಹಾಗೂ ಪ್ರಾಂಶುಪಾಲರಾದ ಅನುಭಾ ಚೌಧರಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.