ಎನ್‌.ಆರ್.ಪುರ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ದೇಣಿಗೆ

KannadaprabhaNewsNetwork |  
Published : Oct 16, 2025, 02:00 AM IST
 ನರಸಿಂಹರಾಜಪುರದ ಅಗ್ರಹಾರದಲ್ಲಿ ಗಾಯಿತ್ರಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಿರುವ ಶ್ರೀ ಶಂಕರ ಬಾರತಿ ಸಭಾ ಭವನಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸ್ವಾಮೀಜಿಗಳು 7.50 ಲಕ್ಷ ರುಪಾಯಿ ಚೆಕ್ ನ್ನು ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಶೃಂಗೇರಿ ಮಠದಿಂದ ಎನ್.ಆರ್.ಪುರ ಅಗ್ರಹಾರದ ಗಾಯಿತ್ರಿ ದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಶಂಕರ ಭಾರತೀ ಸಭಾ ಭವನಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಶೃಂಗೇರಿ ಗುರುಭವನದಲ್ಲಿ ₹7.50 ಲಕ್ಷ ರುಪಾಯಿಗಳ ಚೆಕ್ ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು.

ಶೃಂಗೇರಿ ಮಠದಿಂದ ₹7.50 ಲಕ್ಷ ರು. ಚೆಕ್ ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷಗೆ ಹಸ್ತಾಂತರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿ ಮಠದಿಂದ ಎನ್.ಆರ್.ಪುರ ಅಗ್ರಹಾರದ ಗಾಯಿತ್ರಿ ದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಶಂಕರ ಭಾರತೀ ಸಭಾ ಭವನಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಶೃಂಗೇರಿ ಗುರುಭವನದಲ್ಲಿ ₹7.50 ಲಕ್ಷ ರುಪಾಯಿಗಳ ಚೆಕ್ ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು.

ಈ ಹಿಂದೆ ಅಗ್ರಹಾರದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಗಾಯಿತ್ರಿ ದೇವಿ ಪ್ರತಿಷ್ಟಾಪನೆ, ಕುಂಬಾಭಿಷೇಕ ಹಾಗೂ ಶ್ರೀ ಶಂಕರ ಭಾರತಿ ಸಭಾ ಭವನದ ಶಂಕುಸ್ಥಾಪನೆ ನೇರವೇರಿಸಿದ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳು ತಮ್ಮ ಅನುಗ್ರಹ ಭಾಷಣದಲ್ಲಿ ಶೃಂಗೇರಿ ಶಾರದಾ ಪೀಠದಿಂದ ಶಾರದ ಪ್ರಸಾದ ರೂಪದಲ್ಲಿ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದರು.

ಅದರಂತೆ ಶೃಂಗೇರಿ ಮಠದ ಗುರುಭವನದಲ್ಲಿ ₹7.50 ಲಕ್ಷ ರು. ಚೆಕ್ ನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್, ಕಾರ್ಯದರ್ಶಿ ಎಸ್.ಎನ್.ಅನಂತಪದ್ಮನಾಭ, ತಾಲೂಕು ಬ್ರಾಹ್ಮಣ ಮಹಾ ಸಬಾದ ಅಧ್ಯಕ್ಷ ಕೊನೋಡಿ ಗಣೇಶ್, ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ, ಕಾರ್ಯದರ್ಶಿ ಎಸ್.ಎನ್.ಸುರೇಶ, ಗೌರವಾಧ್ಯಕ್ಷ ಹಾಗೂ ಟ್ರಸ್ಟಿ ಬಿ.ಕೆ.ನಾರಾಯಣಸ್ವಾಮಿ, ಖಜಾಂಚಿ ಅಭಿಷೇಕ್, ಸದಸ್ಯರಾದ ನಾಗಲಕ್ಷ್ಮಿ,ಗೀತಾ, ಶ್ರೀವಲ್ಲಿ, ಟ್ರಸ್ಟ್ ಸದಸ್ಯ ರಮೇಶ ಚಂದ್ರ ಶರ್ಮಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ