ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರು ಹಸಿವನ್ನು ಕುರಿತು ಚಿಂತನೆ ಮಾಡಿದರೆ ಇವತ್ತು ನಾವೆಲ್ಲರೂ ಇರುತ್ತಿರಲಿಲ್ಲ. ಇಂತಹ ಚಿಂತನ ಶೀಲ ವ್ಯಕ್ತಿತ್ವದ ನಾಯಕರಿಂದ ನಮ್ಮ ದೇಶ ಮುನ್ನೆಡೆಯುತ್ತಿದೆ. ಕಳೆದ ಹೊಸ ಸಂಸತ್ತಿನ ಭವನ ಉದ್ಘಾಟನೆ ಸಮಯದಲ್ಲಿ ಹಂಚಿದ ಸಂವಿಧಾನ ಪ್ರತಿಗಳಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎರಡು ಪದ ತೆಗೆದುಹಾಕಿದ್ದಾರೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಅಂಬೇಡ್ಕರ್ ಅವರು ಸಮಾಜವಾದ, ಧರ್ಮ ನಿರಪೇಕ್ಷತೆ ನಂಬಿದವರು ಎಂದು ಹೇಳಿದರು.ಮಹಿಳಾ ವಿರೋಧ, ಸಮುದಾಯದ ವಿರೋಧಿಗಳಾಗಿ ಇವತ್ತು ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವುದು ನೀವೆಲ್ಲರೂ ಗಮನಿಸಬೇಕು. ಸಂವಿಧಾನ ಜಾರಿಯಾದ ಮೇಲೆ ಹಿಂದೆ ಏನು ನಡೆದಿದೆ ಎಂಬುದು ನಾವೆಲ್ಲ ಅರಿತುಕೊಳ್ಳಬೇಕು ಎಂದು ಹೇಳಿದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮುಖಾಂತರ ರಂಗಮಂದಿರಕ್ಕೆ ತೆರಳಲಾಯಿತು. ಚಿಗರಹಳ್ಳಿಯ ಮರುಳಶಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಜು ವೈ. ಕಂಬಾಗಿ, ನಾಗಣ್ಣ ಬಡಿಗೇರ, ರಾಮಣ್ಣ ಕಲದೇವನಹಳ್ಳಿ, ಯುವರಾಜ ಬಂಡಿ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪೂರ, ಯವಾದಿಗಳಾದ ನಾಗರಾಜ ಲಂಬು, ರಾಹುಲ ಕುಬಕಡ್ಡಿ, ಆನಂದ ಔದಿ, ಅಭಿಷೇಕ ಚಕ್ರವರ್ತಿ, ಶಂಕರ ಚಲವಾದಿ, ಚೇತನ ತೊರವಿ, ಮಹಾಂತೇಶ ರಾಠೋಡ, ಶ್ರೀಧರ ವಾಗೊರೆ, ಯಲ್ಲಪ್ಪ ಕಾಂಬಳೆ, ಚಂದಪ್ಪ ಹರಿಜನ, ಚಂದ್ರು ದ್ಯಾಬೇರಿ, ಶಿವು ಮೇಲಿನಮನಿ, ಸಂಗಮೇಶ ಇರಸೂರ, ವಿಠಲ ಕಡೆಮನಿ, ಚಂದ್ರಶೇಖರ ಮಲಕಣ್ಣವರ, ಭೀಮು ಉತ್ನಾಳ, ವಿಶ್ವನಾಥ ಬನಸೂಡೆ, ದೇವರಾಜ ಹಂಗರಗಿ, ಮಂಜು ಚಲವಾದಿ, ಮಹಿಳಾ ಒಕ್ಕೂಟದ ಸಂಚಾಲಕಿ ಸವಿತಾ ವಗ್ಗರ, ಸುವರ್ಣ ಮಾನಕರ, ಸುನಂದ ದೊಡಮನಿ, ಸಂಗೀತಾ ಮರಾಠಿ, ನಕುಶಾ ಕಾಂಬಳೆ ಅನೇಕರು ಇದ್ದರು.