ಡಂಬಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ

KannadaprabhaNewsNetwork |  
Published : Mar 08, 2026, 02:15 AM IST
ಪೋಟೊ ಕ್ಯಾಪ್ಸನ್ :ಡಂಬಳ ಗ್ರಾಮ ಪಂಚಾಯತಿ ಆವರಣದಲ್ಲಿ ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರರವರ 6.8 ಅಡಿ ಎತ್ತರದಮೂರ್ತಿ ಅನಾವರಣ ಮಾಡಿದ ರೋಣ ಮತಕ್ಷೇತ್ರದ ಶಾಸಕ‌ಜಿ.ಎಸ್.ಪಾಟೀಲ‌.ಜಗದ್ಗುರು ತೋಂಟದ ನಿಜಗುಣಾನಂದ ಮಹಾಸ್ವಾಮಿಗಳು, ಮೂರ್ತಿಪ್ರತಿಷ್ಠಾನ ಸಮಿತಿ ಅಧ್ಯಕ್ಷ ಮರಿಯಪ್ಪ ಸಿದ್ಧಣ್ಣವರ. | Kannada Prabha

ಸಾರಾಂಶ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಪಂ ಆವರಣದಲ್ಲಿ ವಿಶ್ವಜ್ಞಾನಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ ಅವರ 6.8 ಅಡಿ ಎತ್ತರದ ಮೂರ್ತಿ ಅನಾವರಣ ಮಾಡಲಾಯಿತು.

ಡಂಬಳ: ದೇಶದಲ್ಲಿ ಹಲವು ಧರ್ಮ, ಹಲವು ಜಾತಿ ಇದ್ದರೂ ದೇಶದ ಅಖಂಡತೆ, ಏಕತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಇದ್ದೇವೆ ಎಂದರೆ ಅದಕ್ಕೆಲ್ಲ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಡಮಾಡಿರುವ ಸಂವಿಧಾನವೆ ಕಾರಣ ಎಂದು ರೋಣ ಮತಕ್ಷೇತ್ರದ ಶಾಸಕ‌ ಜಿ.ಎಸ್. ಪಾಟೀಲ‌ ಹೇಳಿದರು.

ಡಂಬಳ ಗ್ರಾಪಂ ಆವರಣದಲ್ಲಿ ವಿಶ್ವಜ್ಞಾನಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ ಅವರ 6.8 ಅಡಿ ಎತ್ತರದ ಮೂರ್ತಿ ಅನಾವರಣ ಮಾಡಿ ಮಾತನಾಡಿದ‌ ಅವರು, ಸಣ್ಞವರು-ದೊಡ್ಡವರು, ಮೇಲು-ಕೀಳು ಎನ್ನುವ ಭಾವನೆ ತೊಡೆದು ಹಾಕಲು ಶ್ರಮಿಸುವ ಮೂಲಕ ಸಮಾನತೆ ತರಲು ಶ್ರಮಿಸಿದರು. ಶಿಕ್ಷಣ ಹೊಂದಿದರೆ ಯಾರೂ ದೊಡ್ಡವರು ಚಿಕ್ಕವರು ಇಲ್ಲ, ಶಿಕ್ಷಣವೆ ದೊಡ್ಡ ಶಕ್ತಿಯಾಗಿದೆ ಎಂದರು. ಗ್ರಾಪಂನಿಂದ ಹಿಂದಿನ 29 ಗ್ರಾಪಂ ಸದಸ್ಯರ ಮೂಲಕ ನಿರ್ಣಯ ಮತ್ತು ಸಮಿತಿಯ ಎಲ್ಲಾ ಸದಸ್ಯರು ಅವಿರತ ಶ್ರಮದಿಂದ ಗ್ರಾಮ ಪಂಚಾಯಿತಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗಿರುವುದು ಪ್ರಶಂಸನೀಯವಾದದ್ದು ಎಂದು ಹೇಳಿದರು.

ಮುಂಡರಗಿಯ ಬೈಲೂರ ನಿಷ್ಕಲಮಂಟಪ ಜಗದ್ಗುರು ತೋಂಟದ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಬದುಕು-ಬರಹ, ಅವರ ಜ್ಞಾನ ನಮಗೆ ಬೆಳಕಾಗಬೇಕು. ಬುದ್ಧ ತನುವಾಗಬೇಕು, ಬಸವಣ್ಣನವರ ಪ್ರಾಣವಾಗಬೇಕು, ಡಾ. ಬಿ.ಆರ್. ಅಂಬೇಡ್ಕರ್ ಆತ್ಮವಾಗಬೇಕು. ಅಂದಾಗ ಸಮ ಸಮಾಜವಾಗಲು ಸಾಧ್ಯ. ಸಂವಿಧಾನ ದೇಶದ ಪ್ರತಿಯೊಬ್ಬರ ಜೀವಾಳ. ರಾಷ್ಟ್ರದಲ್ಲಿ ಎರಡು ಸಂವಿಧಾಗಳು ಗಟ್ಟಿ ಇವೆ. 12ನೇ ಶತಮಾನದಲ್ಲಿ ಗಟ್ಟಿ ಬೆಳೆಸಿದ ಬಸವಣ್ಣನವರ ಧಾರ್ಮಿಕ ಸಂವಿಧಾನ, ಇನ್ನೊಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಸಂವಿಧಾನ. ಇವುಗಳ ಇರುವಿಕೆ ಉತ್ತಮ ಸಮಾಜಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಸಜ್ಜನತೆಯನ್ನು ಅಳವಡಿಸಿಕೊಳ್ಳಬೇಕಾದರೆ ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಜೀವನ ಅನುಭಾವ ಆಗಬೇಕು ಎಂದರು. ಈ ಭಾಗದಲ್ಲಿ ಆರಂಭವಾಗಲಿರುವ ತೋಟಗಾರಿಕೆ ಕಾಲೇಜಿಗೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರು ಇಡಬೇಕು ಎಂದು ಸಲಹೆ ನೀಡಿದರು.

ಆಡತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ದಮನಿತರ, ಶೋಷಿತರ, ಪರ ಧ್ವನಿಯಾಗಿದ್ದರು. ಡಂಬಳ ಗ್ರಾಮ ಎಸ್ಸಿ ಕಾಲನಿಯವರು ಬದುಕು ಕಟ್ಟಿಕೊಳ್ಳಲು ಮಠದ ಜಮೀನನ್ನು ದಾನವಾಗಿ ನೀಡಿದರು. ಹೀಗೆ ಹಲವಾರು ಸಾಮಾಜಿಕ ಕಾರ್ಯಗಳು ಮಾಡಿದ ಶ್ರೇಯಸ್ಸು ಅವರದಾಗಿದೆ ಎಂದು ಹೇಳಿದರು.

ಎಚ್.ಡಿ. ಪೂಜಾರ ಮಾತನಾಡಿ, ಅಂಬೇಡ್ಕರ್ ಅವರ ತತ್ವಗಳು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಮೂರ್ತಿ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಮರಿಯಪ್ಪ ಸಿದ್ಧಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಿತು.

ಗ್ರಾಪಂ ಮಾಜಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ, ಮಿಥುನಗೌಡ ಪಾಟೀಲ, ಮರತೇಮಪ್ಪ ಆದಮ್ಮನವರ, ಮೋಹನ ಆಲಮೇಲ್ಕರ್, ಎಸ್.ಎನ್. ಬಳ್ಳಾರಿ, ಡಿ.ಜಿ. ಪೂಜಾರ, ಎಚ್.ಡಿ. ಪೂಜಾರ, ಸತೀಶ ಪಾಸಿ, ರಾಮಣ್ಣ ಮೇಗಲಮನಿ, ಮಂಜಯ್ಯಸ್ವಾಮಿ ಅರವಟಗಿಮಠ, ಮಾರುತಿ ಜೋಗದಂಡಕರ, ಸೋಮು ಹೈತಾಪುರ, ಡಿ.ಡಿ. ಮೋರನಾಳ, ಉದಯಕುಮಾರ ಯಲಿವಾಳ, ಮಂಜುನಾಥ ಮೇಗಲಮನಿ, ಮಲ್ಲಪ್ಪ ಯರಾಶಿ, ಗವಿಸಿದ್ಧಪ್ಪ ಹಾದಿಮನಿ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಗವಿಸಿದ್ಧಪ್ಪ ಬಿಸನಳ್ಳಿ, ಮಂಜುನಾಥ ಬಿಸನಳ್ಳಿ, ಮಲ್ಲಿಕಾರ್ಜುನ ಗೌಡಣ್ಣವರ, ಬಸವರಡ್ಡಿ ಬಂಡಿಹಾಳ, ಮುತ್ತು ಹಿರೇಮಠ, ಜಾಕೀರ ಮೂಲಿಮನಿ, ವೆಂಕಟೇಶ ದ್ವಸಲಕೇರಿ, ಬಾಲರಾಜ ಹಾರವರ, ಉಡಚಪ್ಪ ಹಳ್ಳಿಕೇರಿ, ಲಕ್ಷ್ಮಣ ತಗಡಿನಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರೋತ್ಥಾನ ಕಾಮಗಾರಿ ಕಳಪೆ: ಜಿಲ್ಲಾಧಿಕಾರಿಗಳಿಂದ ತನಿಖೆ
ಸ್ಕ್ಯಾನಿಂಗ್‍ ಸೆಂಟರ್‌ಗಳಿಗೆ ನಿಯಮಿತ ಭೇಟಿ ನೀಡಿ