ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಹಿರಿಯ ಸಾಹಿತಿಗಳು, ಸಾಂಸ್ಕೃತಿಕ ಸಂಘಟಕರು ಹಾಗೂ ಸಾಹಿತ್ಯ ಪ್ರೇಮಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರ ಪರಂಪರೆ ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನವು ಧಾರ್ಮಿಕ, ಶೈಕ್ಷಣಿಕ ಹಾಗೂ ದಾಸೋಹ ಕ್ಷೇತ್ರಗಳಲ್ಲಿ ನೀಡಿದ ಅನನ್ಯ ಸೇವೆ ಪರಿಗಣಿಸಿ ಮಾತೋಶ್ರೀ ಯವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಇಂದು ನಡೆದ ಹಿರಿಯ ಸಾಹಿತಿಗಳ ಹಾಗೂ ಸಾಹಿತ್ಯ ಸಂಘಟಕರ ಸಭೆಯಲ್ಲಿ, ಸಾಹಿತಿಗಳಾದ ಡಾ.ವಿಜಯಕುಮಾರ್ ಪರುತೆ, ಬಿ ಎಚ್ ನಿರಗೂಡಿ, ಲಿಂಗರಾಜ ಸಿರಗಾಪುರ, ಡಾ. ಆನಂದ ಸಿದ್ಧ ಮಣಿ, ಪ. ಮೀನು ಸಗರ್, ಡಾ ಚಿ ಸಿ ನಿಂಗಣ್ಣ, ಡಾ.ಕೆ ಗಿರಿಮಲ್ಲ, ಡಾ.ನಾಗಪ್ಪ ಗೋಗಿ, ಡಾ ಶರಣಬಸಪ್ಪ ವಡ್ಡನಕೇರಿ, ಅಂಬಾರಾವ್ ಕೋಣೆ, ಬಸಂತ್ ರಾವ್ ಕೊಳಕೂರ, ಎಚ್ ಎಸ್ ಬರಗಾಲಿ, ಪ್ರಸಾದ್ ಪಟ್ಟಣಕರ್, ಸಿದ್ದನಗೌಡ ಪಾಟೀಲ್ ಕಡಣಿ, ಉಮೇಶ್ ಕಣ್ಣಿ, ಸೇರಿ ಅನೇಕರಿದ್ದರು.