ಕನ್ನಡಪ್ರಭ ವಾರ್ತೆ ಮಂಡ್ಯಡಾ.ಎಚ್.ಎನ್.ರವೀಂದ್ರ ಅವರದ್ದು ನಿಂತಲ್ಲಿ ನೆಲೆಕಾಣದ ವ್ಯಕ್ತಿತ್ವ. ಸುಸಂಸ್ಕೃತ ಮನೆತನದಿಂದ ಬೆಳೆದುಬಂದು ಉತ್ತಮ ವ್ಯಕ್ತಿತ್ವವನ್ನು ಹೊಂದದೆ ವಿಕೃತ ಮನಸ್ಸನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಟೀಕಿಸಿದರು.
ಕಳೆದ ಸ್ವಾಭಿಮಾನಿ ಚುನಾವಣೆಯಲ್ಲಿ ಹಲವು ನಾಯಕರು ಸುಮಲತಾರವರ ಬಗ್ಗೆ ಮಾತನಾಡಿದಾಗ ನನ್ನ ಅಣ್ಣ ನನ್ನ ಅಂಬಿ, ನನ್ನ ಜಿಲ್ಲೆ ನನ್ನ ಅತ್ತಿಗೆ, ನನ್ನ ತಮ್ಮ ಅಭಿಷೇಕ್, ನನ್ನ ಸ್ವಾಭಿಮಾನಿ ಜಿಲ್ಲೆಯ ಸೊಸೆಯಾದ ಸುಮಲತಾ ಎಂತಲೇ ಮಾತನಾಡಿ ಈಗ ಯಾರನ್ನೋ ಮೆಚ್ಚಿಸಲು ಸುಮಲತಾರವರ ಬಗ್ಗೆ ಅಸಭ್ಯ, ಅತಿರೇಕದ ಮಾತುಗಳನ್ನಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
ಒಂದು ಪಕ್ಷದಲ್ಲಿ ಇದ್ದುಕೊಂಡು ಅದೇ ಪಕ್ಷದ ಧೋರಣೆ ಖಂಡಿಸುವ ನಿಮ್ಮ ಛಲಗಾರಿಕೆಯನ್ನು ಶ್ಲಾಘಿಸುತ್ತೇನೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ಇವರನ್ನು ಕಾಂಗ್ರೆಸ್ ಪಕ್ಷವೇ ದೂರ ಇಟ್ಟಿತಾ ಅಥವಾ ಪಕ್ಷ ದೂರ ತಳ್ಳುವ ಭಯದಿಂದ ತಾವಾಗಿಯೇ ದೂರ ಹೋಗುತ್ತಿದ್ದಾರಾ. ಅದು ಅವರಿಗೆ ಸೇರಿದ ವಿಚಾರ. ರಾಜಕೀಯ ನೆಲೆಗಾಗಿ ಇನ್ನೊಬ್ಬರನ್ನು ಮೆಚ್ಚಿಸುವ ರಾಜಕೀಯ ಮಾತುಗಳು ಡಾ.ರವೀಂದ್ರರವರಿಗೆ ಶೋಭೆ ತರುವುದಿಲ್ಲ. ಸುಮಲತಾ ಅವರ ಬೆನ್ನಿಗೆ ನಿಲ್ಲಲು ಲಕ್ಷಾಂತರ ಅಂಬರೀಶ್ ಅಭಿಮಾನಿಗಳಿದ್ದಾರೆ. ನೀವು ಆಡಿರುವ ಮಾತುಗಳ ಬಗ್ಗೆ ಒಮ್ಮೆ ನೀವೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.