ಡಾ. ಕಬ್ಬಿನಾಲೆಗೆ ‘ಆಟ ಸಿರಿಮುಡಿ ಪ್ರಶಸ್ತಿ’

KannadaprabhaNewsNetwork |  
Published : Jul 13, 2025, 01:18 AM IST
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ | Kannada Prabha

ಸಾರಾಂಶ

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ರಚಿಸಿರುವ ‘ತುಳು ಕಾವ್ಯಮೀಮಾಂಸೆ’ ಎಂಬ ವಿಶ್ಲೇಷಣಾತ್ಮಕ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ತುಳು ಸಾಹಿತ್ಯದ ತಾತ್ವಿಕ ಅಧ್ಯಯನ ಹಾಗೂ ವಿಮರ್ಶಾ ಪರಂಪರೆಯಲ್ಲಿ ನವೀನ ದಿಕ್ಕು ನೀಡಿರುವ ಈ ಕೃತಿಯು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಾರ್ಕಳ: ಅಮೆರಿಕದ ತುಳುಸಂಸ್ಥೆ ಆಟ (ATA - American Tulu Association) ನೀಡುವ ‘ಆಟ ಸಿರಿಮುಡಿ ಪ್ರಶಸ್ತಿ- 2025’ಕ್ಕೆ ಪ್ರಸಿದ್ಧ ಭಾಷಾ ತಜ್ಞ, ವಿಮರ್ಶಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಭಾಜನರಾಗಿದ್ದಾರೆ.ಅವರು ರಚಿಸಿರುವ ‘ತುಳು ಕಾವ್ಯಮೀಮಾಂಸೆ’ ಎಂಬ ವಿಶ್ಲೇಷಣಾತ್ಮಕ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ತುಳು ಸಾಹಿತ್ಯದ ತಾತ್ವಿಕ ಅಧ್ಯಯನ ಹಾಗೂ ವಿಮರ್ಶಾ ಪರಂಪರೆಯಲ್ಲಿ ನವೀನ ದಿಕ್ಕು ನೀಡಿರುವ ಈ ಕೃತಿಯು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.75,000 ರು. ನಗದು ಮತ್ತು ಸ್ಮರಣಿಕಾ ಫಲಕವನ್ನು ಒಳಗೊಂಡಿರುವ ಈ ಅಂತಾರಾಷ್ಟ್ರೀಯ ಪುರಸ್ಕಾರವನ್ನು ಆಟ ಸಂಸ್ಥೆಯು ಪ್ರತಿವರ್ಷ ತುಳು ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಸಾಧಕರಿಗೆ ನೀಡುತ್ತದೆ.ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಕಳೆದ ಹಲವು ದಶಕಗಳಿಂದ ತುಳುನಾಡಿನ ಭಾಷಾ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂಶೋಧನೆ ಹಾಗೂ ಸಾಹಿತ್ಯಿಕ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದು, ಈ ಪ್ರಶಸ್ತಿಯ ಮೂಲಕ ಮತ್ತೊಂದು ಉನ್ನತ ಸಾಧನೆ ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು