- ತಾಲೂಕು ಆಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ನುಡಿ ನಮನ
ಕನ್ನಡಪ್ರಭ ವಾರ್ತೆ, ತರೀಕೆರೆತೆರೆಯ ಮೇಲೆ ಮತ್ತು ನಿಜ ಜೀವನದಲ್ಲೂ ಡಾ.ರಾಜ್.ಕುಮಾರ್ ಹೀರೋ ಆಗಿದ್ದರು ಎಂದು ಉಪ ವಿಭಾಗಾಧಿಕಾರಿ
ಡಾ.ಕಾಂತರಾಜ್ ಹೇಳಿದರು.ಗುರುವಾರ ತಾಲೂಕು ಆಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತರೀಕೆರೆ ತಾಲೂಕಿನಿಂದ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ನಡೆದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ರಾಜ್ ಕುಮಾರ್ ಅಪರೂಪದಲ್ಲಿ ಅಪರೂಪದ ನಟರು, ಅವರು ಯಾವುದೇ ಪಾತ್ರದಲ್ಲೂ ಮುಳುಗಿಹೋಗುತ್ತಿದ್ದರು,ಜೀವನಕ್ಕೆ ಬಹಳ ಹತ್ತಿರದ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು, ಅವರ ಸಿನಿಮಾಗಳು ಶೀರ್ಷಿಕೆಗೆ ತಕ್ಕ ಹಾಗೆ ಇರುತ್ತಿತ್ತು ಎಂದರು.
ನೇತ್ರದಾನ ಮಾಡಿದ ಡಾ.ರಾಜ್.ಕುಮಾರ್ ಅವರ ವ್ಯಕ್ತಿತ್ವ ಇತರರಿಗೆ ಆದರ್ಶ. ಡಾ.ರಾಜ್ ಅವರು ಹೆಸರು ಅಜರಾಮರ ಎಂದು ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ ಮಾತನಾಡಿ ಡಾ.ರಾಜ್ ಕುಮಾರ್ ಚಲನಚಿತ್ರಗಳು ಜನರ ಜೀವನಕ್ಕೆ ಹತ್ತಿರವಾಗಿರುತ್ತಿತ್ತು. ಜನರು ಡಾ.ರಾಜ್ ಅವರ ಚಿತ್ರಗಳನ್ನು ನೋಡಿ ಪ್ರಭಾವಿತರಾಗಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು. ಪ್ರತಿ ಚಿತ್ರದಲ್ಲು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು ಎಂದು ಅವರು ಹೇಳಿದರು.
ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಡಾ.ಟಿ.ಎನ್.ಜಗದೀಶ್ ಮಾತನಾಡಿ ಡಾ.ರಾಜ್.ಕುಮಾರ್ ಅವರ ಚಲನಚಿತ್ರಗಳು ಮಾದರಿಯಾಗಿವೆ. ಚಿತ್ರಗಳಲ್ಲಿ ನಟಿಸುತ್ತಿದ್ದರೂ ಸರಳ ವ್ಯಕ್ತಿಯಾಗಿದ್ದರು. ಅವರ ಹೆಸರು ಚಿರಸ್ಥಾಯಿ ಯಾಗಿರುತ್ತದೆ ಎಂದರು.ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಮಾತನಾಡಿ, ರೈತನ ಪಾತ್ರದಿಂದ ಹಿಡಿದು ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ ಡಾ.ರಾಜ್ ಕುಮಾರ್ ಅದ್ಬುತವಾದ ಗಾಯಕರಾಗಿದ್ದರು. ಎಲ್ಲ ಪಾತ್ರಗಳಿಗೂ ಅವರು ತಂದು ಗೌರವ ಕೊಟ್ಟರು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಜಾ.ರಾಜ್ ಅವರ ಜನ್ಮದಿನಾಚರಣೆಯನ್ನು ಇಡೀ ನಾಡೇ ಆಚರಿಸುತ್ತಿದೆ ಎಂದರೆ ಅವರ ನಡೆ ನುಡಿ ಇನ್ನೊಬ್ಬರಿಗೆ ಕಣ್ಬೆಳಕು. ಕನ್ನಡ ನಾಡು ನುಡಿಯ ಬಗ್ಗೆ ಅವರು ಅಪಾರ ಗೌರವವನ್ನು ಹೊಂದಿದ್ದರು. ಅಜರಾಮರ ಎಂದು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ..ಬಿ.ರಾಮಚಂದ್ರಪ್ಪ, ಧರಣೇಶ್, ಉಪನ್ಯಾಸಕ ದಾದಾಪೀರ್, ಚೇತನ್ ಗೌಡ, ಪತ್ರಕರ್ತ ಅನಂತ ನಾಡಿಗ್ ಮತ್ತಿತರರು ಮಾತನಾಡಿದರು.
ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಪುರಸಭಾಧ್ಯಕ್ಷ ಟಿ.ಕೆ.ರಮೇಶ್, ಈಡಿಗ ಸಮಾಜ ಮುಖಂಡರಾದ ಟಿ.ಟಿ.ರಾಘವೇಂದ್ರ, ಟಿ.ಜೆ.ರಂಗನಾಥ್ ,ನವಲೆ ಕುಮಾರ್, ತಹಸೀಲ್ದಾರ್ ವಿಶ್ವಜೀತ್ ಮೇಹತಾ, ಶಿರಸ್ತೆ ದಾರ್ ಕೃಷ್ಣಮೂರ್ತಿ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.25ಕೆಟಿಆರ್.ಕೆ.5ಃ ತರೀಕೆರೆಯಲ್ಲಿ ತಾಲೂಕು ಅಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಡಾ.ರಾಜ್.ಕುಮಾರ್ ಹುಟ್ಟುಹಬ್ಬನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾದಿಕಾರಿ ಡಾ. ಕೆ.ಜೆ.ಕಾಂತರಾಜ್, ಜಯ ಕರ್ನಾಟಕ ಸಂಘಟನೆ ತಾಲೂಕು ಶಾಖೆ ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾ.ಶಾಖೆ ಅಧ್ಯಕ್ಷ ಸಿ.ಆರ್. ಅನಂತಪ್ಪ,ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಮತ್ತಿತರರು ಇದ್ದರು.