ಧರ್ಮಶ್ರೀ, ದಾಟು, ಪರ್ವ, ತಂತು, ಜಲಪಾತ, ನಾಯಿ ನೆರಳು, ಮಂದ್ರ, ಉತ್ತರಕಾಂಡ, ಯಾನ ಹೀಗೆ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಭೈರಪ್ಪ ಅವರ ಕಾದಂಬರಿಗಳು ಓದುಗರಿಗೆ ಹೊಸ ವಿಷಯಗಳನ್ನು ತಿಳಿಸಿ, ಜ್ಞಾನಾರ್ಜನೆಯೊಂದಿಗೆ ಸದಭಿರುಚಿಯ ಮನರಂಜನೆಯನ್ನು ನೀಡುತ್ತವೆ.
ಗದಗ: ಕನ್ನಡ ಕಾದಂಬರಿ ಲೋಕದಲ್ಲಿ ಮರೆಯಲಾಗದ ಹೆಸರು ಡಾ. ಎಸ್.ಎಲ್. ಭೈರಪ್ಪ ಅವರದ್ದು. ತಮ್ಮ ಅಧ್ಯಯನ ಪೂರ್ಣತೆ ಮತ್ತು ಸೃಜನಶೀಲತೆಯಿಂದಾಗಿ ಕನ್ನಡ ಕಾದಂಬರಿ ಲೋಕದ ಅತ್ಯಂತ ಜನಪ್ರಿಯ ಮತ್ತು ಸರ್ವ ಶ್ರೇಷ್ಠ ಕಾದಂಬರಿಕಾರರಾಗಿ ಭೈರಪ್ಪ ಅವರ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಪ್ರಾಚಾರ್ಯೆ ಮುಕ್ತಾ ಉಡುಪಿ ತಿಳಿಸಿದರು.
ಬೆಟಗೇರಿಯ ರಾಜಪುರೋಹಿತ ಅವರ ನಿವಾಸದಲ್ಲಿ ನಡೆದ ಸಾಹಿತ್ಯ ಕಲಾ ವೇದಿಕೆಯ 5ನೇ ಆವೃತ್ತಿಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಡಾ. ಎಸ್.ಎಲ್. ಭೈರಪ್ಪ ಅವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಧರ್ಮಶ್ರೀ, ದಾಟು, ಪರ್ವ, ತಂತು, ಜಲಪಾತ, ನಾಯಿ ನೆರಳು, ಮಂದ್ರ, ಉತ್ತರಕಾಂಡ, ಯಾನ ಹೀಗೆ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಭೈರಪ್ಪ ಅವರ ಕಾದಂಬರಿಗಳು ಓದುಗರಿಗೆ ಹೊಸ ವಿಷಯಗಳನ್ನು ತಿಳಿಸಿ, ಜ್ಞಾನಾರ್ಜನೆಯೊಂದಿಗೆ ಸದಭಿರುಚಿಯ ಮನರಂಜನೆಯನ್ನು ನೀಡುತ್ತವೆ.
ಹೀಗಾಗಿಯೇ ಅವರ ಮೂರು ದಶಕಗಳ ಹಿಂದೆ ರಚಿಸಿದ ಕಾದಂಬರಿಗಳು ಕೂಡಾ ನಿರಂತರ ಪ್ರಸ್ತುತತೆ ಹೊಂದಿವೆ. ಭೈರಪ್ಪ ಅವರು ಇತ್ತೀಚಿಗೆ ನಮ್ಮನ್ನು ಅಗಲಿದರೂ ತಮ್ಮ ಕಾದಂಬರಿಗಳ ಮೂಲಕ ಓದುಗರ ಹೃನ್ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.