ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟೊಂದು ದೊಡ್ಡ ಜಿಲ್ಲೆಯನ್ನು ನಿಭಾಯಿಸಲು ಯತೀಂದ್ರನಿಗೆ ಸಾಧ್ಯವಿಲ್ಲ. ನಮ್ಮಪ್ಪ ಮಹಾರಾಜರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆಂದ ಯತೀಂದ್ರನಿಂದ ಮೈಸೂರು ಜಿಲ್ಲೆ ನಿಭಾಯಿಸುವುದು ಕಷ್ಟ. ಅನುಭವಿ ತನ್ವೀರ್ ಸೇಠ್ಗೆ ಮಂತ್ರಿ ಸ್ಥಾನ ಕೊಡಬೇಕು ಎಂದರು.
ಹಿಂದುಳಿದ ವರ್ಗಗಳ ವರದಿ ಮೇಲೆ 10 ವರ್ಷ ಮಲಗಿದ್ದ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಕೊನೇ ದಿನ ಆಯೋಗದ ವರದಿ ಸ್ವೀಕರಿಸಿದರು. ಜನರು ಪೆದ್ದರಲ್ಲ. ಸಿದ್ದರಾಮಯ್ಯ ಒಬ್ಬರಿಗೂ ಒಂದು ನಿವೇಶನ ಕೊಡಲಿಲ್ಲ. ಮುಡಾದಲ್ಲಿ 80 ಸಾವಿರ ಅರ್ಜಿಗಳು ವಿಲೇವಾರಿ ಆಗಬೇಕಿದೆ ಎಂದರು.ಸಿದ್ದರಾಮಯ್ಯ ಅವರನ್ನು ಅರಸುಗೆ ಹೋಲಿಕೆ ಮಾಡಿ ಕೆಲವರು ಹೊಗಳುತ್ತಿದ್ದಾರೆ. ಆದರೆ, ಅರಸು ಪಾದದ ಧೂಳಿಗೂ ಸಿದ್ದರಾಮಯ್ಯ ಸಮ ಅಲ್ಲ. 5 ಕೆಜಿ ಅಕ್ಕಿ ಕೊಟ್ಟಿದ್ದನ್ನೇಂದು ಹೇಳುತ್ತಿದ್ದಾರೆ. ಅರಸು 21 ಲಕ್ಷ ಎಕರೆ ಭೂಮಿಯನ್ನು ಹಂಚಿದರು. ನಿಜವಾದ ಅನ್ನರಾಮಯ್ಯ ದೇವರಾಜ ಅರಸು. ಅಕ್ಷರ- ಆರೋಗ್ಯವನ್ನು ಜನರಿಗೆ ತಲುಪಿಸಿದ ಕೀರ್ತಿ ಅರಸುಗೆ ಸಲ್ಲುತ್ತದೆ ಎಂದರು.
ಸಿದ್ದರಾಮಯ್ಯ ಕುರುಬರು ಮತ್ತು ಕರ್ನಾಟಕದ ಮಾಲೀಕನಲ್ಲ, ಬದಲಿಗೆ ಕುರುಬರ ವಿರೋಧಿ. 2013ರಲ್ಲಿ ತಾನೊಬ್ಬನೇ ಮುಖ್ಯಮಂತ್ರಿಯಾಗಿ ಕುರುಬರನ್ನು ಮಂತ್ರಿ ಮಾಡಲಿಲ್ಲ. ಈಗ ಮಗನೊಬ್ಬನೇ ಮಂತ್ರಿ ಆಗಿರಬೇಕು ಎಂಬ ಪುತ್ರ ಮೋಹ ಹೆಚ್ಚಾಗಿದೆ. ಅದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ಕಾವೇರಿ ನೀರು ಹಂಚಿಕೆ ವಿವಾದ ಮತ್ತು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಜನವಿರೋಧಿ. ವಾಟಾಳ್ ನಾಗರಾಜ್ 50 ವರ್ಷಗಳಿಂದ ಬಂದ್ ಮಾಡುತ್ತಿದ್ದಾರೆ ಪ್ರಯೋಜನ ಏನು?. ಕೆಲವು ಕನ್ನಡ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿವೆ. ಅಧಿಕಾರದ ಆಸೆಗೆ ಕೆಲವು ಸಂಘಟನೆಗಳಿವೆ. ಒತ್ತಾಯದಿಂದ ಅಂಗಡಿ ಮುಂಗಟ್ಟು ಮುಚ್ಚಿಸಬಾರದು. ಜನರು ಈ ಬಂದ್ ಅನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು.
ವಿವಾದದ ಸಂದರ್ಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ತಮಿಳುನಾಡು ಸಿಎಂ ವಿಜಯ್ ಸಕಾರಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. ಶಿವಕುಮಾರ್ ರೈತರಿಗೆ ಅಭಯ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಉತ್ತಮ ಆಡಳಿತದ ಮಾದರಿಯಾಗಿದೆ ಎಂದರು.
ಮುಖಂಡರಾದ ಎಂ.ಎನ್. ನಟರಾಜ್, ಬಸವೇಗೌಡ, ಕುಮಾರ್ ಇದ್ದರು.