ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಂಬೇಡ್ಕರ್ ನಗರದ ವಿಜಯ್ ಕುಮಾರ್, ವಿಜಯಪುರ ಜಿಲ್ಲೆಯ ವಿಜಯ್ ಕುಮಾರ್ ಅಲಿಯಾಸ್ ಪವರ್, ಐವರಿಕೋಸ್ಟ್ ದೇಶದ ಅರ್ಮೆಲ್, ಬೆಂಗಳೂರಿನ ಮುನೇಶ್ವರ ಲೇಔಟ್ನ ಇಕ್ರಾಂ ಅಹ್ಮದ್ ಖಾನ್, ಸಾದಿಕ್ವುಲ್ಲಾ, ಮೊಹಮ್ಮದ್ ತಬ್ರೇಜ್, ನೈಜೀರಿಯಾ ದೇಶದ ನ್ಯೂಚೇವುಬೆ ಡೋನಟ್ಸ್ ಅನೀಸ್ ಬಂಧಿತರಾಗಿದ್ದು, ಆರೋಪಿಗಳಿಂದ 203.46 ಗ್ರಾಂ ಎಂಡಿಎಂಎ, 156 ಗ್ರಾಂ ಎಕ್ಸ್ಟೈಸಿ ಹಾಗೂ 18.5 ಕೇಜಿ ಗಾಂಜಾ ಸೇರಿದಂತೆ ₹1.66 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ನಗರದಲ್ಲಿ ಈ ಐವರು ಪ್ರತ್ಯೇಕವಾಗಿ ಡ್ರಗ್ಸ್ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮಹಾರಾಷ್ಟ್ರ ಗಡಿಯ ಕಾಡಲ್ಲಿ ಗಾಂಜಾ ಕೃಷಿ:ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಯ ಅರಣ್ಯದಲ್ಲಿ ನೂರಾರು ಎಕೆರೆಯಲ್ಲಿ ಕೆಲವರು ಗಾಂಜಾ ಬೇಸಾಯ ನಡೆಸಿದ್ದು, ಅಲ್ಲಿಂದ ನಗರದ ಪೆಡ್ಲರ್ಗಳಿಗೆ ಗಾಂಜಾ ಪೂರೈಕೆಯಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಇನ್ಸ್ಪೆಕ್ಟರ್ ವೀರೇಶ್ ತಂಡವು, ವಿಜಯಪುರದ ನಗರದ ಪೆಡ್ಲರ್ಗಳಿಗೆ ಗಾಂಜಾ ಸರಬರಾಜಿಗೆ ಬಂದಾಗ ಗಿರಿನಗರ ಬಳಿ ವಿಜಯ್ ಕುಮಾರ್ ಹಾಗೂ ವಿಜಯ್ ಕುಮಾರ್ನನ್ನು ಬಂಧಿಸಿತು. ಬಳಿಕ ವಿಚಾರಣೆ ವೇಳೆ ಗಾಂಜಾ ಕೃಷಿ ಸಂಗತಿ ಬೆಳಕಿಗೆ ಬಂದಿದೆ. ಈ ಆರೋಪಿಗಳ ಮಾಹಿತಿ ಆಧರಿಸಿ ವಿಜಯಪುರ ಜಿಲ್ಲೆಗೆ ತೆರಳಿ ಕಾರ್ಯಾಚರಣೆ ನಡೆಸಿತು. ಆದರೆ ಪೂರೈಕೆದಾರರು ತಪ್ಪಿಸಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.ಎಸ್ಐಯನ್ನೇ ತಳ್ಳಿ ಪರಾರಿ ಆಗಿದ್ದ ಪೆಡ್ಲರ್:
ಕೆಲ ತಿಂಗಳಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮತ್ತೊಬ್ಬ ವಿದೇಶಿ ಪ್ರಜೆ ಅನೀಸ್ನನ್ನು ಇನ್ಸ್ಪೆಪೆಕ್ಟರ್ ದೀಪಕ್ ತಂಡ ಬಂಧಿಸಿದೆ.