ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮುಂಗಾರು ಒಂದೇ ಮಳೆಗೆ ಬಾವಿ ಕುಸಿತದಿಂದ ಬಾವಿ ತುಂಬೆಲ್ಲ ಕಲ್ಲು ಮಣ್ಣಿನಿಂದ ಆವರಿಸಿದೆ. ಸಾಲ ಮಾಡಿ ಕಟ್ಟಿಸಿದ ಬಾವಿ ಇಲ್ಲವಾಗಿದೆ. ಹಣವೂ ಬಾವಿಪಾಲಾಗಿದೆ. ಮುಂದೇನು ಎಂಬ ಚಿಂತೆಯಲ್ಲಿ ರೈತ ಕಂಗಾಲಾಗಿದ್ದಾನೆ. ಬರಗಾಲದ ಸಮಯದಲ್ಲಿ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿತ್ತು. ಆದರೆ ಗಾಳ ಬೀಳುವ ಪ್ರಮಾಣ ಹೆಚ್ಚಾದ ಕಾರಣ ಶಾಶ್ವತ ಪರಿಹಾರ ಕಂಡುಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿ ಬಾವಿಗೆ ತಡೆಗೋಡೆ ನಿರ್ಮಾಣ ಮಾಡಿದ್ದರು. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬಾವಿ ಕುಸಿದು ಮಣ್ಣು ಪಾಲಾಗಿದೆ. ಬಾವಿ ಕುಸಿದಿರುವ ಹಿನ್ನೆಲೆ ಮುಂದೆ ಕೃಷಿಗೆ ನೀರು ಪೂರೈಸುವುದು ಹೇಗೆ ಎಂದು ರೈತ ಚಿಂತಿತರಾಗಿದ್ದಾನೆ.
---------------------ಕೋಟ್.....
ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗುಡ್ಡದ ಕಲ್ಲುಗಳನ್ನು ಬಳಸಿ 110 ಅಡಿ ಆಳದ ಬಾವಿಗೆ 45 ಅಡಿ ಗೋಡೆ ನಿರ್ಮಿಸಿ ಬಾವಿಯ ಸೌಂದರ್ಯದ ಜೊತೆಗೆ ಹೆಚ್ಚಿನ ನೀರು ಸಂಗ್ರಹವಾಗಲು ನಿರ್ಮಾಣ ಮಾಡಲಾಗಿತ್ತು. ಜತೆಗೆ ಬಾವಿಯಲ್ಲಿ ಸುಮಾರು 7.5 ಎಚ್.ಪಿ ಸಾಮರ್ಥ್ಯದ 2 ಮೋಟಾರ್ ಅಳವಡಿಸಿ ಡ್ರಿಪ್ ಮೂಲಕ ಬೆಳೆಗೆ ನೀರುಣಿಸಲು ಮಾಡಿದ ₹65 ಲಕ್ಷ ಮಣ್ಣು ಪಾಲಾಗಿದೆ. ರೈತನ ಬಾಳಿಗೆ ಸರ್ಕಾರದ ಸಹಾಯಹಸ್ತ ಚಾಚಬೇಕು.-ಸಿದ್ದಪ್ಪ ಬೋಜಪ್ಪ ಸಬರಡಗಿ. ಮುಳಸಾವಳಗಿ ಗ್ರಾಮದ ರೈತ.