ದಸರಾ ವಿಶೇ಼ಷ: ಪ್ರವಾಸಿಗರ ಗಮನ ಸೆಳೆಯುತ್ತಿರುವ ಪುಷ್ಪ ಪ್ರದರ್ಶನ

KannadaprabhaNewsNetwork |  
Published : Oct 10, 2024, 02:23 AM IST
9ಕೆಎಂಎನ್ ಡಿ21,22,23,24,25 | Kannada Prabha

ಸಾರಾಂಶ

ಪೆಟ್ರೋನಿಯ, ತೊರನಿಯ, ಡೈಲಿಯಾ, ಸಲೈಯಾ, ಮಾರಿಗೋಲ್ಡ್, ಪಿಂಕ್‌ರಾಜಿಯಾ, ಗ್ರೇಯಾ ಸೇರಿದಂತೆ ಇನ್ನೂ ಹಲವು ಬಗೆಯ ಪುಷ್ಟಗಳನ್ನು ಪ್ರದರ್ಶನದಲ್ಲಿ ಬಳಸಲಾಗುತ್ತಿದೆ. ಬಣ್ಣಗಳಿಂದ ಕೂಡಿದ ಗುಲಾಬಿ ಮತ್ತು ಇತರೆ ಲಕ್ಷಾಂತರ ಪುಷ್ಟ ದಳಗಳಿಂದ ಅಲಂಕಾರಿಕ ಪುಷ್ಪಗಳಿಂದ ವಿವಿಧ ಕಲಾಕೃತಿಗಳ ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವ ಪ್ರಸಿದ್ಧ ಕೆಆರ್‌ಎಸ್‌ನ ಬೃಂದಾವನದ ಗಾಜಿನ ಮನೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಬಗೆಯ ಹೂಗಳಿಂದ ಸಿದ್ಧಗೊಂಡಿರುವ ಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ.

ಮೈಸೂರು ಹಾಗೂ ಶ್ರೀರಂಗಪಟ್ಟಣದ ದಸರಾ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಪ್ರವಾಸಿಗರನ್ನು ಸೆಳೆಯಲು ಕಾವೇರಿ ನೀರಾವರಿ ನಿಗಮ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ವಿಶೇಷ ಹೂ ಮತ್ತು ಹೂವಿನ ರೆಂಬೆಗಳಿಂದ ನಿರ್ಮಿಸಿರುವ ಕಲಾಕೃತಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

ಕೆಆರ್‌ಎಸ್ ಬೃಂದಾವನದ ಗಾಜಿನ ಮನೆಯಲ್ಲಿ ವಿವಿಧ ಬಗೆಯ ಪುಷ್ಪ ರಾಶಿಗಳನ್ನು ತಯಾರಿಸಿ ಮೈಸೂರು ದಸರಾ ಹಾಗೂ ಶ್ರೀರಂಗಪಟ್ಟಣ ದಸರಾಕ್ಕೆ ಬರುವ ಪ್ರವಾಸಿಗರ ವೀಕ್ಷಣೆಗೆ ಎಲ್ಲಾ ತರಹದ ಪುಷ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ದಸರಾ ಅಂಗವಾಗಿ ಸುಮಾರು 50 ಮತ್ತು 150 ಅಡಿ ವಿಸ್ತೀರ್ಣವಿರುವ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ಹೆಚ್ಚು ಬಣ್ಣ ಬಣ್ಣಗಳಿಂದ ಆಕರ್ಷಣೀಯವಾಗಿ ಕಾಣಲು ಹೆಚ್ಚಿನ ಪುಷ್ಪಗಳ ಗುಂಚಲುಗಳನ್ನು ತಂದು ಜೋಡಣೆ ಮಾಡಿ ಸುಮಾರು 15 ಸಾವಿರಕ್ಕೂ ಹೆಚ್ಚು ವಿವಿಧ ಹೂ ಕುಂಡಗಳನ್ನು ಅಕರ್ಷಣೀಯವಾಗಿ ಜೋಡಿಸಲಾಗಿದೆ.

ಪೆಟ್ರೋನಿಯ, ತೊರನಿಯ, ಡೈಲಿಯಾ, ಸಲೈಯಾ, ಮಾರಿಗೋಲ್ಡ್, ಪಿಂಕ್‌ರಾಜಿಯಾ, ಗ್ರೇಯಾ ಸೇರಿದಂತೆ ಇನ್ನೂ ಹಲವು ಬಗೆಯ ಪುಷ್ಟಗಳನ್ನು ಪ್ರದರ್ಶನದಲ್ಲಿ ಬಳಸಲಾಗುತ್ತಿದೆ. ಬಣ್ಣಗಳಿಂದ ಕೂಡಿದ ಗುಲಾಬಿ ಮತ್ತು ಇತರೆ ಲಕ್ಷಾಂತರ ಪುಷ್ಟ ದಳಗಳಿಂದ ಅಲಂಕಾರಿಕ ಪುಷ್ಪಗಳಿಂದ ವಿವಿಧ ಕಲಾಕೃತಿಗಳ ನಿರ್ಮಾಣ ಮಾಡಲಾಗಿದೆ.

ಈಗಾಗಲೇ ಪುಷ್ಪಗಳನ್ನು ಜೋಡಿಸಿರುವ ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ಸಿಬ್ಬಂದಿ ಹೂವಿನ ಕುಂಡಗಳ ಜೋಡಿಸಿ, ಪ್ರವಾಸಿಗರ ಕಣ್ಣಿಗೆ ಮುದ ನೀಡುವ, ಆಕರ್ಷಣೆಗೆ ತಕ್ಕಂತೆ ಜೋಡಣೆ ಕಾರ್ಯಕ್ಕೆ ಶ್ರಮವಹಿಸಿರುವುದು ಕಂಡು ಬಂದಿದೆ.

ಪ್ರದರ್ಶನದಲ್ಲಿ ನೀರಿನ ಸಂರಕ್ಷಣೆ, ರೈತ, ಮಳೆ, ಆನೆ, ಪೆಂಗ್ವಿನ್, ಗಿಟಾರ್, ಸಾರೋಟ್ ಸೈಕಲ್, ಹಂಸ ಪಕ್ಷಿ, ಅಣಬೆ ಗುಚ್ಚ, ಕರ್ನಾಟಕ 50ರ ಸಂಭ್ರಮ, ಚಾಮುಂಡಿ ಬೆಟ್ಟ, ಕೃಷ್ಣ ರುಕ್ಮಣಿ, ಶ್ರೀರಂಗನಾಥ ಪ್ರತಿಮೆ, ಟೆಡ್ಡಿಬೇರ್ ಸೇರಿದಂತೆ ವಿವಿಧ ಕಲಾಕೃತಿಗಳು ಮೂಡಿಬಂದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು