ಸೋಮರಡ್ಡಿ ಅಳವಂಡಿ
ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪುರುಷರೂ ಸೀರೆಯುಟ್ಟುಕೊಂಡು ತಲೆ ಎಣಿಕೆ ಮೂಲಕ ಹಾಜರಾತಿ ನೀಡುತ್ತಿರುವುದಕ್ಕೆ ಇ-ಕೆವೈಸಿ ಮೂಲಕ ಬ್ರೇಕ್ ಬೀಳಲಿದೆ. ಖುದ್ದು ಹಾಜರಾತಿ ಪರಿಶೀಲನೆಗೆ ಪ್ರಾಯೋಗಿಕವಾಗಿ ಕೊಪ್ಪಳ ಸೇರಿದಂತೆ ತುಮಕೂರು, ಹಾವೇರಿ, ಕೋಲಾರ, ಹಾಸನದಲ್ಲಿ ಇ-ಕೆವೈಸಿ ಜಾರಿಗೊಳಿಸಲು ಮುಂದಾಗಿದ್ದು ಸೆ.30ರೊಳಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಅ.1ರಿಂದ ಮುಖ ಆಧಾರಿತ (ಇ-ಕೆವೈಸಿ) ಹಾಜರಾತಿ ಜಾರಿಯಾಗಲಿದೆ.
ಈಗಿರುವ ಎನ್ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಜತೆಗೆ ಇ-ಕೆವೈಸಿ ಕಾರ್ಯ ನಿರ್ವಹಿಸಲಿದೆ. ಇದರಿಂದ ನಕಲಿ ಹಾಜರಾತಿಗೆ ಬ್ರೇಕ್ ಬೀಳಲಿದೆ. ಎನ್ಎಂಎಂಎಸ್ನಲ್ಲಿ ಖಾತ್ರಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವವರ ವಿಡಿಯೋ ಮಾಡಿದಾಗ ಎಷ್ಟು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಲೆ ಎಣಿಸಿ ಹಾಜರಾತಿ ಹಾಕಲಾಗುತ್ತಿತ್ತು. ಹೀಗಾಗಿ, ಗೈರಾದ ಮಹಿಳೆಯರ ಪರವಾಗಿ ಪುರುಷರೇ ಸೀರೆಯುಟ್ಟು ಹಾಜರಾತಿ ನೀಡುತ್ತಿದ್ದರು. ಪುರುಷರು ಗೈರಾದರೆ ಅಲ್ಲಿದ್ದವರೇ ನಿಂತು ಹಾಜರಾತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದರು. ಇತ್ತೀಚೆಗೆ ಸೀರೆಯುಟ್ಟು ಹಾಜರಾತಿ ನೀಡಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಂತೆ ಇದೀಗ ಇ-ಕೆವೈಸಿ ಹಾಜರಾತಿಗೆ ಸರ್ಕಾರ ಮುಂದಾಗಿದೆ.ನೋಂದಣಿ ಆರಂಭ:
ಇ-ಕೆವೈಸಿ ಹೊಂದಿರುವ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳುವಾಗ ಆಧಾರ್ ನಂಬರ್ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರ ಮುಖ ಹೊಂದಾಣಿಕೆ ಆದಲ್ಲಿ ಮಾತ್ರ ಎನ್ಎಂಎಂಎಸ್ನಲ್ಲಿ ಪರಿಗಣಿಸಲಾಗುತ್ತಿದೆ. ಈ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ.
---
ಜಿಲ್ಲೆಸಂಖ್ಯೆ
ಹಾವೇರಿ2,89,783
ಹಾಸನ2,96,906
ಕೋಟ್
ಹಾಜರಾತಿಯ ಸತ್ಯಾಸತ್ಯತೆ ಪರಿಶೀಲಿಸಲು ಇ-ಕೆವೈಸಿ ಅ.1ರಿಂದ ಜಾರಿಗೆ ಬರಲಿದೆ.-ದುಂಡಪ್ಪ ತೂರಾದಿ ಇಒ ತಾಪಂ, ಕೊಪ್ಪಳ.