ಔರಾದ್‌ ಪಾಲಿಟೆಕ್ನಿಕಲ್ಲಿ ಇಸಿ,ಸಿಎಸ್ ಪ್ರವೇಶ ರದ್ದು

KannadaprabhaNewsNetwork |  
Published : Dec 18, 2025, 01:30 AM IST
ಕ್ಯಾಪ್ಷನ17ಕೆಡಿವಿಜಿ36 ದಾವಣಗೆರೆಯಲ್ಲಿ ಸಿಪಿಐ ಶತಮಾನೋತ್ಸವ ಜಾಥಾಗೆ ಸ್ವಾಗತ ಕಾರ್ಯಕ್ರಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾತಿ ಸುಂದರೇಶ್ ಮಾತನಾಡಿದರು. | Kannada Prabha

ಸಾರಾಂಶ

ABVP Aurad unit protests in front of town college. Organization warns of violent struggle across the state

ಎಬಿವಿಪಿ ಔರಾದ್ ಘಟಕದಿಂದ ಪಟ್ಟಣದ ಕಾಲೇಜು ಎದುರು ಪ್ರತಿಭಟನೆ । ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಔರಾದ್ಕಲ್ಯಾಣ ಕರ್ನಾಟಕದ ಹಿಂದುಳಿದ ಗಡಿಭಾಗದ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಔರಾದ್‌(ಬಾ)ನಲ್ಲಿ 2009-10ರಲ್ಲಿ ಇ ಮತ್ತು ಸಿ ಮತ್ತು ಸಿಎಸ್ ವಿಭಾಗಗಳನ್ನು 60 ಇಂಟೆಕ್‌ಗಳೊಂದಿಗೆ ಪ್ರಾರಂಭಿಸಲಾಗಿರುತ್ತದೆ. ಆದರೆ 2021-22ರ ಶೈಕ್ಷಣಿಕ ಸಾಲಿನಿಂದ ಹಠಾತ್ತಾಗಿ ಎರಡು ವಿಭಾಗಗಳ ಪ್ರವೇಶಾತಿಯನ್ನು ನಿಲ್ಲಿಸಲಾಗಿರುತ್ತದೆ.ಹೊಸ ಅನುಮೋದನೆ ನಿಯಮಗಳ ಪ್ರಕಾರ ಯಾವುದೇ ಒಂದು ವಿಭಾಗದ ಪ್ರವೇಶಾತಿ ಕಡಿಮೆಯಾದಾಗ ಪ್ರವೇಶಾತಿಯನ್ನು ಶೇ.50ರಷ್ಟು ಕಡಿತಗೊಳಿಸಬೇಕಾಗಿರುತ್ತದೆ. ಅಂದರೆ ಇಂಟೆಕ್ ಅನ್ನು 60 ರಿಂದ 30ಕ್ಕೆ ಕಡಿತಗೊಳಿಸಬೇಕಾಗಿರುತ್ತದೆ. ಪ್ರವೇಶಾತಿಯ ಇಂಟೆಕ್ ಕಡಿತಗೊಳಿಸಿದ ನಂತರವೂ ಸತತ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಸುಧಾರಣೆ ಆಗದಿದ್ದ ಕಾರಣ ಶಾಖೆ ಬಂದ್ ಮಾಡಬಹುದಾಗಿರುತ್ತದೆ. ಆದರೆ ಸರ್ಕಾರಿ ಪಾಲಿಟೆಕ್ನಿಕ್ ಔರಾದ್‌(ಬಾ)ನಲ್ಲಿ 60 ಇಂಟೆಕ್ ಇರುವ ಇಸಿ ಹಾಗೂ ಸಿಎಸ್ ವಿಭಾಗಗಳನ್ನು ಏಕಕಾಲಕ್ಕೆ ಸಂಪೂರ್ಣವಾಗಿ ಮುಚ್ಚಿದ್ದಾರೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಹಿಂದುಳಿದ ಗಡಿಭಾಗದ ವಿದ್ಯಾರ್ಥಿಗಳಿಗೆ ಬೇಡಿಕೆಯಲ್ಲಿರುವ ಒಳ್ಳೆಯ ಕೋರ್ಸ್‌ಗಳು ಲಭ್ಯವಿಲ್ಲದೆ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.ಪ್ರಸ್ತುತ ಸರ್ಕಾರಿ ಪಾಲಿಟೆಕ್ನಿಕ್ ಔರಾದ (ಬಾ)ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಹೊಸ ಪ್ರಯೋಗಾಲಯ ಮತ್ತು ತರಗತಿ ಹಾಗೂ ಗ್ರಂಥಾಲಯ ಕಟ್ಟಡಗಳು ನಿರ್ಮಿಸಲಾಗಿ ರುತ್ತದೆ. ಇ&ಸಿ ವಿಭಾಗ ಹಾಗೂ ಸಿ. ಎಸ್ ವಿಭಾಗಗಳನ್ನ ಪುನಃ ಪ್ರಾರಂಭಿಸಲು ಅಗತ್ಯವಿರುವ ಮುಲಭೂತ ಸೌಕರ್ಯಗಳು ಲಭ್ಯವಿದ್ದರೂ ಉಪಯೋಗಕ್ಕೆ ಬಾರದೆ ಸಂಸ್ಥೆಯಲ್ಲಿ ಹಾಗೆಯೇ ಉಳಿದಿರುತ್ತವೆ. ಆದ್ದರಿಂದ ಇಸಿ ವಿಭಾಗ ಹಾಗೂ ಸಿ. ಎಸ್ ವಿಭಾಗಗಳನ್ನು ಪುನಃ ಪ್ರಾರಂಭಿಸುವುದರಿಂದ ಯಾವುದೇ ಮುಲಭೂತ ಸೌಕರ್ಯಗಳ ಅಭಾವ ಹಾಗೂ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ. ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚು. ಕೋರ್ಸ್‌ಗಳನ್ನು ಪ್ರಾರಂಭಿಸಿ ಇರುವ ಮೂಲಭೂತ ಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.

ಏಳು ತಾಲೂಕುಗಳನ್ನು ಹೊಂದಿರುವ ಬೀದರ್‌ ಜಿಲ್ಲೆಯಲ್ಲಿ ಕೇವಲ ಎರಡು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಿದ್ದು, ಅದರಲ್ಲಿಯೂ ಸರ್ಕಾರಿ ಪಾಲಿಟೆಕ್ನಿಕ್ ಔರಾದ್‌(ಬಾ)ನಲ್ಲಿ ಪ್ರಸ್ತುತ ಬೇಡಿಕೆಯಲ್ಲಿರುವ ಮತ್ತು ಹೇರಳ ಉದ್ಯೋಗ ಅವಕಾಶಗಳಿರುವ ಇಸಿ ಮತ್ತು ಸಿಎಸ್ ಇಂಜಿನಿಯರಿಂಗ್ ವಿಭಾಗಗಳನ್ನೇ ಮುಚ್ಚಲಾಗಿದ್ದು, ಇದರಿಂದ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಸಿ ಮತ್ತು ಸಿಎಸ್ ಕೋರ್ಸಗಳು ಪುನರ್ ಪ್ರಾರಂಭಿಸದೆ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ವಿದ್ಯಾರ್ಥಿ ಪರಿಷತ್ ಮುಖಂಡ ಶಿವಶರಣು ಚಾಂಬೊಳೆ ತಿಳಿಸಿದರು ಹೋರಾಟದಲ್ಲಿ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ನಾಗರಾಜ್ ಸುಲ್ತಾನಪುರ. ತಾಲೂಕ ಸಂಚಾಲಕ ನೀತಿನ ಮೂಲಗೆ. ಸುರೇಶ ವರ್ತುಲೆ. ಮಲ್ಲಿಕಾರ್ಜುನ ಟೆಕರಾಜ. ಪ್ರಶಾಂತ ಮೇತ್ರೆ. ಅರುಣ. ರಾಹುಲ್. ಮಹಾದೇವ. ಅಂಕುಶ್ ಶುಭಾಮ್. ತಾಲ್ಲೂಕಿನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.--ಚಿತ್ರ 17ಬಿಡಿಆರ್56ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಔರಾದ(ಬಾ )ಶಾಖೆಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಪರಿಶೀಲಿಸಿದ ಮಹಿಳಾ ಆಯೋಗ
ಮಂಡಕ್ಕಿ-ಅವಲಕ್ಕಿ ಭಟ್ಟಿಗಳಲ್ಲಿ ಮಕ್ಕಳ ದುಡಿಸಿದರೆ ಶಿಕ್ಷೆ