ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕಿನ ದ್ವಾರಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾನಂಗಿ ತಾಂಡ ರಾಮುರವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಕಚೇರಿಗೆ ಆಗಮಿಸುವ ರೈತರೊಂದಿಗೆ ಸ್ನೇಹ ಪ್ರೀತಿ-ವಿಶ್ವಾಸದಿಂದ ಸೇವೆ ಮಾಡಿದರೆ ಸಂಘದ ಪ್ರಗತಿ ಸಾಧ್ಯ ಎಂದರು. ದ್ವಾರಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾನಂಗಿ ತಾಂಡ ರಾಮು ಮಾತನಾಡಿ ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನ ಪಡೆದಿದ್ದೇನೆ. ನಿಮ್ಮಗಳ ಪ್ರೀತಿ ವಿಶ್ವಾಸ ಸಹಕಾರ ನನ್ನ ಮೇಲೆ ಸದಾ ಇರಲಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ರೈತರಿಗೆ ಹೆಚ್ಚು ಹೆಚ್ಚು ಸಾಲ ಕೊಡುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸೋಣ. ರೈತ ಮತ್ತು ಗ್ರಾಹಕರ ಸಹಕಾರವೇ ಪತ್ತಿನ ಸಹಕಾರ ಸಂಘಕ್ಕೆ ದೊಡ್ಡ ಶಕ್ತಿ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಿ.ಎಸ್. ಲೋಹಿತ್, ಮಾಜಿ ಅಧ್ಯಕ್ಷ ಎಸ್. ಜಿ.ರಾಜಣ್ಣ, ಮುಖಂಡರಾದ ಲಿಂಗದಹಳ್ಳಿ ಸುಧಾಕರ್ ಗೌಡ, ನಗರಸಭೆ ಸದಸ್ಯ ರಾಮು, ಮಾಜಿ ಸದಸ್ಯ ರಾಘವೇಂದ್ರ, ಮಾಜಿ ಅಧ್ಯಕ್ಷ ಅಂಜಿನಪ್ಪ, ಪಿ. ಬಿ.ಕೃಷ್ಣೇಗೌಡ, ನಟರಾಜು, ಹೇಮಂತಗೌಡ, ಅಶ್ವತಪ್ಪ, ವಿಜಯ್ ಕುಮಾರ್, ತಿಪ್ಪೇಶ್, ಹನುಮಂತ ನಾಯ್ಕ, ಸ್ವಾಮ್ಯ ನಾಯ್ಕ, ಜುಂಜಣ್ಣ, ರಾಮಕೃಷ್ಣ ನಾಯ್ಕ , ನಿಸರ್ಗ ಸುರೇಶ್, ನಿತ್ಯಾನಂದ, ರಾಜಣ್ಣ, ತಿಮ್ಮಣ್ಣ ,ಎಲ್.ಡಿ. ಮಂಜುನಾಥ್, ವನಜಾಕ್ಷಮ್ಮ, ಮಾಣಿಕ್ಯ, ಮೇಲ್ವಿಚಾರಕ ಜನಾರ್ಧನ್, ಕಾರ್ಯದರ್ಶಿ ಕೆ ಈರಣ್ಣ ಸೇರಿದಂತೆ ಹಲವಾರು ಮುಖಂಡರು ರೈತರು ಹಾಜರಿದ್ದರು.