ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸತೀಶ್ ಜಾರಕಿಹೊಳಿ ವಿರುದ್ಧ ಇದು ಎರಡನೇ ದಾಳಿ ಆಗಿದೆ. ಈ ಹಿಂದೆಯೂ ಹಲವು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗಿತ್ತು. ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 1.9 ವರ್ಷದ ಅಂತರದಲ್ಲಿರುವುದರಿಂದ ಇ.ಡಿ ದಾಳಿ ಆಗಿದೆ. ಇದಲ್ಲದೆ ಶೀಘ್ರದಲ್ಲೇ ಆದಾಯ ತೆರಿಗೆ ಮತ್ತು ಸಿಬಿಐ ಅವರೂ ಬರುತ್ತಾರೆ. ಇವರೆಲ್ಲರೂ ಬಂದ ಮೇಲೆ ಅವರ ಬೆನ್ನಲ್ಲೇ ಚುನಾವಣೆಗೆ ಆರು ತಿಂಗಳು ಇರುವಾಗ ಪ್ರಧಾನಮಂತ್ರಿ ಮೋದಿ ಹಾಗೂ ಅಮಿತ್ ಶಾ ಬರುತ್ತಾರೆ. ಇದಕ್ಕೆಲ್ಲ ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಹತಾಶೆಗೊಂಡಿದೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟ, ಒಳಜಗಳದಿಂದ ದಿಕ್ಕು ತೋಚಿದಂತಾಗಿದೆ. ಹೀಗಾಗಿಯೇ ಇ.ಡಿ ಮೂಲಕ ನಮ್ಮ ಅಹಿಂದ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಬದಲಿಗೆ ಪಕ್ಷದ ಎಲ್ಲಾ ನಾಯಕರೂ ಸತೀಶ್ ಜಾರಕಿಹೊಳಿ ಅವರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ಸುರ್ಜೇವಾಲ ಸ್ಪಷ್ಟಪಡಿಸಿದರು.ಡಿ.ಕೆ.ಶಿವಕುಮಾರ್ ಸಹೋದರರು, ಸಿದ್ದರಾಮಯ್ಯ, ಬೈರತಿ ಸುರೇಶ್, ಜಮೀರ್ ಅಹ್ಮದ್ಖಾನ್, ವೀರೇಂದ್ರ ಪಪ್ಪಿ, ಡಾ.ಜಿ. ಪರಮೇಶ್ವರ್, ನಾರಾ ಭರತ್ ರೆಡ್ಡಿ ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿದ್ದಾರೆ.
ಇ.ಡಿ ದಾಖಲಿಸಿದ 8ರಿಂದ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೇವಲ 39 ಪ್ರಕರಣಗಳಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ಬಹುತೇಕ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ದೂರಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮಹಿಳಾ ಸಚಿವರು ಇಲ್ಲದಿರುವುದು ನನ್ನದೇ ತಪ್ಪು. ದೆಹಲಿ ಹೈಕಮಾಂಡ್ನಿಂದ ಆದ ತಪ್ಪಲ್ಲ ಎಂದು ಇದೇ ವೇಳೆ ಸುರ್ಜೇವಾಲ ಹೇಳಿದರು.