ಕನ್ನಡಪ್ರಭ ವಾರ್ತೆ ಬೀದರ್
ನಗರದ ಬೆನಕನಹಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಬುಧವಾರ ಒಪನ್ ಜಿಮ್ಗಳ ಉದ್ಘಾಟನೆ ಹಾಗೂ ಯುಕೆಜಿ 2023-2024 ಬ್ಯಾಚ್ನ ಬೆನಕನಹಳ್ಳಿ, ಶಿವನಗರ ಮತ್ತು ಕುಂಬರವಾಡಾದ 3 ಶಾಖೆಯ ಮಕ್ಕಳಿಗೆ ಯುಕೆಜಿ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಅದೇ ಕ್ಷೇತ್ರದಲ್ಲೆ ಅವರಿಗೆ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸಬೇಕು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ವಿವಿಧ ವಿಭಿನ್ನ ಚಟುವಟಿಕೆಗಳ ಸಹಿತ ಈ ಭಾಗದಲ್ಲಿ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನ್ಪೂರೆ ಮಾತನಾಡಿ, ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಎರಡು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಕ್ಕಳಿಗೆ ಆಟೋಟಗಳ ಜೊತೆಗೆ ಪಾಠ ಕಲಿಸುವ ಗುರಿ ಹೊಂದಿದೆ ಮತ್ತು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಎಸ್ಎ ಇದಕ್ಕೆಂದೆ ಮಾ.16ರಿಂದ ಬೇಸಿಗೆ ಶಿಬಿರ ಕೂಡ ವಿಭಿನ್ನ ಚಟುವಟಿಕೆಗಳೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬಿವಿಬಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಠ್ಠಲ್ ರೆಡ್ಡಿ, ಸಿಆರ್ಪಿ ಮಾಣಿಕ ಪವಾರ, ಮುಖ್ಯಗುರು ಶಿವಕುಮಾರ, ಜ್ಯೋತಿ ರಾಗ, ಪಿಆರ್ಓ ಕಾರಂಜಿ ಸ್ವಾಮಿ, ಫೌಂಡೇಶನ್ ಸ್ಟೇಜ್ ಪ್ರಿನ್ಸಿಪಾಲ್ ಡಾ.ಮನಿಷಾ ಚಾಕೆಡ, ಪಾಲಕರು, ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.