ಸಮಾಜದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ-ಡಾ. ಲಮಾಣಿ

KannadaprabhaNewsNetwork |  
Published : Jul 15, 2025, 01:00 AM IST
ಪೊಟೋ-ಪಟ್ಟಣದ ಚನ್ನಮ್ಮನವದಲ್ಲಿ ಕನಕ ನೌಕರರ ಪತ್ತಿನ ಸಹಕಾರಿ  ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಡಾ.ಚಂದ್ರು ಲಮಾಣಿ  ಮಾತನಾಡಿದರು.  | Kannada Prabha

ಸಾರಾಂಶ

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಚನ್ನಮ್ಮ ವನ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕನಕ ನೌಕರರ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯವನ್ನು ಮಹಿಳೆಯರು ಮಾಡುವುದು ಅಗತ್ಯವಾಗಿದೆ. ಶಿಕ್ಷಣವು ಎಲ್ಲ ಶಕ್ತಿ ನೀಡುವ ಸಾಧನವಾಗಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು. ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬ ಒತ್ತಡ ಹೇರುವ ಕಾರ್ಯ ಪಾಲಕರು ಮಾಡಬಾರದು. ಶಿಕ್ಷಣ ಕೊಡಿಸುವ ಕಾರ್ಯದಲ್ಲಿ ಪಾಲಕರು ಮುಂದೆ ಬರಬೇಕು, ಸಮಾಜದ ಸಂಘಟನೆಗೆ ಎಲ್ಲ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಮನಸೂರಿನ ರೇವಣಸಿದ್ಧೇಶ್ವರ ಮಠ ಡಾ. ಬಸವರಾಜ ದೇವರು, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೆ.ಎಚ್. ಭಾರ್ಗವ, ಶಾಂತಪ್ಪ, ಫಕ್ಕೀರಪ್ಪ ಹೆಬಸೂರ, ಹುಲ್ಲೂರಿನ ಅಮೋಘಿಮಠದ ಸಿದ್ದಯ್ಯ ಸ್ವಾಮಿಗಳು ಮಾತನಾಡಿದರು.

ಸಭೆಯಲ್ಲಿ ಎಸ್.ಎಂ. ತಾಯಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ವೇಳೆ ಪುರಸಭೆಯ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ವಿ.ಜಿ. ಪಡಗೇರಿ, ನಿಂಗಪ್ಪ ಬನ್ನಿ, ಶೇಖಣ್ಣ ಕಾಳೆ, ಶಶಿಧರ ರೊಳ್ಳಿ, ರಾಮಣ್ಣ ರಿತ್ತಿ, ಸೋಮಣ್ಣ ಬೆಟಗೇರಿ, ಪರಸಪ್ಪ ಇಮ್ಮಡಿ, ವಿರೇಂದ್ರಗೌಡ ಪಾಟೀಲ, ಎನ್.ಬಿ. ತಳ್ಳಳ್ಳಿ, ಯಲ್ಲಪ್ಪ ಸೂರಣಗಿ, ರಮೇಶ ಹೆಗ್ಗಣ್ಣವರ, ಬಸಣ್ಣ ಹೊಳಲಾಪೂರ, ಅಣ್ಣಪ್ಪ ರಾಮಗೇರಿ, ಮುದಕಪ್ಪ ಗದ್ದಿ, ಜಿ.ಆರ್.ಕೊಪ್ಪದ ಸೇರಿದಂತೆ ಅನೇಕರು ಇದ್ದರು.

ಶಿಕ್ಷಕ ಎನ್.ಎನ್. ಶಿಗ್ಲಿ, ಜಿ.ಎನ್. ಶಿರನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಬಾದಾಮಿ ಪ್ರಾರ್ಥಿಸಿದರು. ಸ್ವಾಗತ ಬಿ.ಎಂ. ಯರಗುಪ್ಪಿ ಸ್ವಾಗತಿಸಿದರು.

PREV

Latest Stories

ಯುಪಿಐ ಅಡಿ ಒಂದೇ ವರ್ಷದಲ್ಲಿ ಹೂವಿನ ವ್ಯಾಪಾರಿಗೆ ₹54 ಲಕ್ಷ!
ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ