ಕೊಪ್ಪಳ: ಕ್ಷೇತ್ರದಲ್ಲಿ ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕ್ಷೇತ್ರಕ್ಕೆ ಸುಮಾರು 8 ಕೆಪಿಎಸ್ ಶಾಲೆ ತರಲಾಗಿದೆ.ಈಗಾಗಲೇ ಹಿಟ್ನಾಳ, ಹೊಸಳ್ಳಿ, ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಶಾಲಾ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಕಳೆದ 13 ವರ್ಷಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೇವೆ. ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆದಡಿಯಲ್ಲಿ ಅನೇಕ ವಸತಿ ಶಾಲೆ ತರುವ ಕೆಲಸ ಮಾಡಿದ್ದೇವೆ ಎಂದರು.
ಬಂಡಿಹರ್ಲಾಪುರ ವ್ಯಾಪ್ತಿಯಲ್ಲಿ ಜಂಪ್ ಸರ್ವೇ ನಂಬರ್ ಸಮಸ್ಯೆ ಇದ್ದು, ಅದನ್ನು ರೀ ಸರ್ವೇ ಮಾಡಿಸಿ ಅವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ ಅದಕ್ಕೆ ಶೀಘ್ರದಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕರು ರೈತರಿಗೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಉದ್ಯಮಿ ಚಂದ್ರಶೇಖರ ಐ.ಎಲ್.ಸಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಕೆ.ಎಂ.ಸೈಯದ್,ವಿಶ್ವನಾಥ್ ರಾಜೂರು,ಯಂಕಪ್ಪ ಹೊಸಳ್ಳಿ, ಚಂದಕೃಷ್ಣ ಹರ್ಲಾಪುರ, ಕನಕರಾಯ, ನಾಗರಾಜ ಪಠವಾರಿ, ಯಮನೂರಪ್ಪ ಬಸಾಪುರ, ಸೀನಣ್ಣ ಶಿವಪುರ, ಧರ್ಮರಾಜ್ ಕಂಪಸಾಗರ, ಮಲ್ಲು ಪೂಜಾರ್, ಭೀಮಣ್ಣ ಹರ್ಲಾಪುರ, ರೇಣುಕಮ್ಮ ಹರ್ಲಾಪುರ, ಸೋಮಶೇಖರ್ ಹಿಟ್ನಾಳ,ಬಸಣ್ಣ ಅಗಳಕೇರಿ, ಓಬಳೇಶ, ಅಶೋಕ ಹಿಟ್ನಾಳ,ಅಕ್ಬರ್ ಪಲ್ಟಾನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.