ಕನ್ನಡಪ್ರಭ ವಾರ್ತೆ ಮೈಸೂರು
ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಶಾಲಾ ಆವರಣದಲ್ಲಿ ಮಾತನಾಡಿದ ಅವರು, ನಮ್ಮ ಕಂಪನಿಯ ಸಿಎಸ್ಆರ್ ನಿಧಿಯಿಂದ ಮೂರು ಪ್ರಮುಖ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೌಶಲ್ಯದಡಿ ಮಹಿಳೆಯರ ಸ್ವಯಂ ಉದ್ಯೋಗ, ಯುವಕರಿಗೆ ಮೊಬೈಲ್ ರಿಪೇರಿ ಮತ್ತು ವಿವಿಧ ಯಂತ್ರೋಪಕರಣ ರಿಪೇರಿ ತರಬೇತಿ ನೀಡಲಾಗುತ್ತಿದೆ. ಸಮೀಪದ ಕೆಂಚನಹಳ್ಳಿಯಲ್ಲಿ ವಿವೇಕಾನಂದ ಸಂಸ್ಥೆ ಜೊತೆಗೂಡಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.ಬೆಂಗಳೂರು, ಹೊಸೂರು ಸೇರಿದಂತೆ ಒಟ್ಟು ನಾಲ್ಕು ಕಡೆ ಕೆರೆ ಪುನರುಜ್ಜೀವನ ಯೋಜನೆ ಕೈಗೆತ್ತಿಕೊಂಡು, ಹೊಸೂರಿನಲ್ಲಿ ಉತ್ತಮವಾಗಿ ಕೆರೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕಂಪನಿಯ ಮುಖ್ಯ ಅಧಿಕಾರಿ ಶ್ರೀಧರ್ಮಾತನಾಡಿ, ನಾವು ಒಂದು ಲಕ್ಷ ವೃಕ್ಷ ಅಭಿಯಾನ ಆಯೋಜಿಸಿದ್ದೇವೆ. ಅವುಗಳನ್ನು ಹಲವು ವರ್ಷಗಳವರೆಗೆ ಪೋಷಣೆ ಮಾಡುವ ಜವಾಬ್ದಾರಿಯನ್ನೂ ಹೊತ್ತಿದ್ದೇವೆ. ಇದು ನಮ್ಮ ಬದ್ಧತೆ. ಅಂತೆಯೇ ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ಸೇರಿಂದಂತೆ ಎಲ್ಲೆಲ್ಲಿ ನಾವು ನೆರವು ನೀಡಿದ್ದೇವೆಯೋ ಅಲ್ಲೆಲ್ಲಾ ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ ಎಂದರು.
ಎಚ್.ಡಿ.ಕೋಟೆ, ಸರಗೂರು ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಟೈಟಾನ್ ಎಂಡಿ
ಟೈಟಾನ್ ಕಂಪನಿಯು ಜಿಲ್ಲೆಯಾದ್ಯಂತ ಸಮಗ್ರ ಅಭಿವೃದ್ಧಿ ಕೆಲಸ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ಜೊತೆಗಿನ ಸಹಭಾಗಿತ್ವದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗೆ ಉಭಯ ಸಂಸ್ಥೆಯ ಮುಖ್ಯಸ್ಥರು ಭೇಟಿ ನೀಡಿದ್ದರು.
ಈ ಎರಡೂ ಸಂಸ್ಥೆಗಳು ಜತೆಗೂಡಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಮತ್ತು ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಸುಮಾರು 6,110 ಮಂದಿಯ ಜೀವನದ ಮೇಲೆ ಪರಿಣಾಮ ಬೀರಿದೆ. ಈ ಎರಡೂ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಮಹತ್ತರ ಕೆಲಸ ಮಾಡಿವೆ. ಈ ಪಾಲುದಾರಿಕೆ ಮೂಲಕ ಕಳೆದ 12 ವರ್ಷಗಳಲ್ಲಿ 2,300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರಾಯೋಜಕತ್ವ ಒದಗಿಸಲಾಗಿದೆ.
ವಿವೇಕಾನಂದ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಕೇಂದ್ರವು ಈಗಾಗಲೇ ಶಿಕ್ಷಣ ಸೇವೆಯಲ್ಲಿರುವ ಶಿಕ್ಷಕರಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆಯೋಜಿಸುತ್ತಿದೆ. ಈವರೆಗೆ 114ಕ್ಕೂ ಹೆಚ್ಚು ಮಂದಿ ಈ ಕೋರ್ಸ್ಪೂರ್ಣಗೊಳಿಸಿದ್ದಾರೆ.
ಈ ಕುರಿತು ಮಾತನಾಡಿದ ಟೈಟಾನ್ಕಂಪನಿಯ ಮುಖ್ಯ ಅಧಿಕಾರಿ ಎನ್.ಇ. ಶ್ರೀಧರ್ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ಜತೆಗಿನ ನಮ್ಮ ಸಹಭಾಗಿತ್ವದಿಂದ ಈ ಪ್ರದೇಶದ ಜನ ಸಮೂಹದಲ್ಲಿ ಉತ್ತಮ ಬದಲಾವಣೆಯಾಗಿದೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ನಾವು ಅವರ ಜೀವನವನ್ನು ಬದಲಾವಣೆಯ ಹಾದಿಯಲ್ಲಿ ಕರೆದೊಯ್ಯುವುದರ ಜೊತೆಗೆ ಉತ್ವಲ ಭವಿಷ್ಯ ನಿರ್ಮಿಸುತ್ತಿರುವುದಾಗಿ ಹೇಳಿದರು.
ಶಿಕ್ಷಣ ನೆರವು ಒದಗಿಸುವ ಜೊತೆಗೆ ವಿವೇಕ ಗ್ರಾಮೀಣ ಜೀವನೋಪಾಯ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸಲಾಗಿದೆ. ವಿ.ಎಲ್.ಸಿ ಕೇಂದ್ರದಲ್ಲಿ ಮೊಬೈಲ್ರಿಪೇರಿ ಮತ್ತು ಸರ್ವೀಸ್, ಫ್ಯಾಷನ್ ಡಿಸೈನಿಂಗ್, ಪಂಚಕರ್ಮ ಥೆರಪಿ ಮತ್ತು ಯೋಗ, ಜನರಲ್ ಡ್ಯೂಟಿ ಅಸಿಸ್ಟೆಂಟ್ ಮತ್ತು ಕೃಷಿ ಆಧಾರಿತ ತರಬೇತಿ ಮತ್ತು ಗುಂಪು ಉದ್ದಿಮೆ ಹೀಗೆ ವಿವಿಧ ರೀತಿಯ ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳನ್ನು ನಡೆಸಲಾಗುತ್ತಿದೆ.ಟೈಟಾನ್ನೆರವಿನಿಂದ ವಿಆರ್.ಎಲ್.ಸಿ ಕೇಂದ್ರವು ತನ್ನ ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ 1,666 ವ್ಯಕ್ತಿಗಳಿಗೆ ತರಬೇತಿ ನೀಡಿದೆ. ತರಬೇತಿ ಪಡೆದವರಲ್ಲಿ ಶೇ. 83ರಷ್ಟು ಮಂದಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಲ್ಲಿ ಕಲಿತ ಕೌಶಲ್ಯವನ್ನು ತಮ್ಮ ಜೀವನದಲ್ಲಿ ಬದಲಿಸಲು ಬಳಸಿಕೊಂಡಿದ್ದಾರೆ. ಆರ್ಥಿಕ ವರ್ಷ 24ರಲ್ಲಿ ಈವರೆಗೆ 438 ಮಂದಿ ಪ್ರಶಿಕ್ಷಣಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದು, ಅದರಲ್ಲಿ 257 ಮಂದಿ ಯಶಸ್ವಿಯಾಗಿ ಉದ್ಯೋಗಾವಕಾಶ ಪಡೆದಿದ್ದಾರೆ ಎಂದು ಅವರು ವಿವರಿಸಿದರು.ವಿವೇಕಾನಂದ ಯೂತ್ಮೂವ್ಮೆಂಟ್ನ ಸಿಇಒ ಎಸ್. ಸವಿತಾ ಮಾತನಾಡಿ, ಟೈಟಾನ್ಜತೆಗಿನ ಸಹಭಾಗಿತ್ವದ ಮೂಲಕ ನಾವು ಅನೇಕ ಕಾರ್ಯಕ್ರಮ ನಡೆಸಿದ್ದೇವೆ. ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದ ಸಮುದಾಯಕ್ಕೆ ಉಜ್ವಲ ಭವಿಷ್ಯ ಒದಗಿಸಲಾಗಿದೆ ಎಂದರು.
ಟೈಟಾನ್ರ ಮಾರ್ಚ್ತಿಂಗಳಲ್ಲಿ ಅಣ್ಣೂರು ಹಾಡಿಯಲ್ಲಿ ಬುಡುಕಟ್ಟು ಜನಾಂಗದ ಮಹಿಳೆಯರಿಗಾಗಿ ಚಿಪ್ಸ್ಉತ್ಪಾದನಾ ಘಟಕ ಸ್ಥಾಪಿಸಿದೆ. ಈ ಯೋಜನೆ ಮೂಲಕ ಏಳು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಆದಾಯ ಒದಗಿಸುವ ಕೆಲಸ ಮಾಡಿದೆ ಎಂದು ಅವರು ವಿವರಿಸಿದರು.