ಕನ್ನಡಪ್ರಭ ವಾರ್ತೆ ಪಾಂಡವಪುರ
ಇಂದಿನ ಶಿಕ್ಷಣ ಕೇವಲ ಅಂಕ ಆಧಾರಿತವಾಗಿದೆ. ಸಮಾಜದಲ್ಲಿ ಅನಕ್ಷರಸ್ಥರು ಹೆಚ್ಚಾಗಿದ್ದಾರೆ. ಓದಿದವರು ಇಂದು ಅನಕ್ಷರಂತೆ ವರ್ತಿಸುತ್ತಿದ್ದಾರೆ. ಮಕ್ಕಳಿಗೆ ಕೇವಲ ಪುಸ್ತಕವಲ್ಲದೇ ಬೇರೆ ಬೇರೆ ಅವಕಾಶ ಕಲ್ಪಿಸಬೇಕಿದೆ ಎಂದರು.
ರಂಗಭೂಮಿ, ಸಂಗೀತ, ಸಾಹಿತ್ಯ ಕ್ಷೇತ್ರ ಹೀಗೆ ವಿವಿಧ ಆಯಾಮಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಬದಲಾವಣೆಯಾಗುತ್ತಿದೆ. ಅವರು ಸ್ವತಂತ್ರವಾಗಿ ಅನಿಸಿಕೆ ವ್ಯಕ್ತಪಡಿಸಲು ಸಾಧ್ಯವಾಗಿದೆ. ಜೊತೆಗೆ ಅಭಿವ್ಯಕ್ತಿಗೊಳಿಸುವ ಹಾಗೂ ಸ್ವಾತಂತ್ರ್ಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.ನಾನು 37 ವರ್ಷಗಳವರೆಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ್ದು, ಪಾಂಡವಪುರದಲ್ಲಿನ ಗೆಳೆಯರಿಗೆ ಹತ್ತು ಹಲವು ನಾಟಕಗಳನ್ನು ನಿರ್ದೇಶಿಸಿ ಕಲಿಸಿದ್ದೇನೆ. ಅದರಲ್ಲೂ ಕುಂತಿಬೆಟ್ಟದ ಗುಡ್ಡಗಾಡಿನಲ್ಲಿ ನಡೆಸಿದ ಪರಿತ್ಯಕ್ತ ನಾಟಕ ದಾಖಲೆಗೆ ಒಳಗಾಗಿದೆ ಎಂದರು.
ಬಿಜಿಎಸ್ ಶಾಲೆ ಮಕ್ಕಳು ನಡೆಸಿಕೊಟ್ಟ ವಿಜ್ಞಾನ ನಾಟಕ, ಕಲ್ಪನಾ ಚಾವ್ಲಾ ಜೀವನ ಚರಿತ್ರೆ ಕುರಿತ ಮಿನುಗುತಾರೆ ನಾಟಕವು ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಹೊರತುಪಡಿಸಿ ಅದ್ಭುತವಾಗಿ ಮೂಡಿಬಂದಿದೆ. ದೊಡ್ಡವರೇ ತಪ್ಪುಗಳನ್ನು ಮಾಡುವಾಗ ಮಕ್ಕಳ ತಪ್ಪು ಅಷ್ಟೇನೂ ದೊಡ್ಡದೆನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳು ಮತ್ತಷ್ಟು ಯಶಸ್ಸುನ್ನು ಗಳಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಗಣಂಗೂರು ನಂಜೇಗೌಡ, ನಿವೃತ್ತ ಶಿಕ್ಷಕರಾದ ಚಂದ್ರಶೇಖರಯ್ಯ, ಚಪ್ಪರಮನಿ, ಪೋಷಕರಾದ ಮಹೇಶ್, ಎಲ್ ಐಸಿ ಮಂಜು, ಶ್ವೇತಾ, ಜಗದೀಶ್ ಹಾಗೂ ನಾಟಕದಲ್ಲಿ ಅಭಿನಯಿಸಿದ್ದ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ಜನನಿ, ಸುವರ್ಣ ಅವರುಗಳು ನಾಟಕ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ನಾಟಕದಲ್ಲಿ ಅಭಿನಯಿಸಿದ್ದ ಮಕ್ಕಳನ್ನು ಅಭಿನಂದಿಸಲಾಯಿತು.