- ಪುರಸಭಾ ಸದಸ್ಯ ಮಂಜು ಕೊಡುಗೆ: ಸಮಿತಿ ಅಧ್ಯಕ್ಷ ವೈ.ಅಶೋಕ್
- ವಿವಿಧ ಸಮಾಜಗಳ ಮುಖಂಡರು, ೪೬ ಗ್ರಾಮಗಳ ಗ್ರಾಮಸ್ಥರು ಭಾಗಿ
- - - ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದು ಮಹಾಗಣಪತಿ ಸಮಿತಿಯಿಂದ ಹಾಕಿರುವ ಬೃಹತ್ ಪೆಂಡಾಲ್ನಲ್ಲಿ ೩ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೧೦ ಗಂಟೆಗೆ ಕಲ್ಲೇಶ್ವರ ದೇವಾಲಯದ ಸ್ಥಳದಿಂದ ದುರ್ಗಾಂಬಿಕಾ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ, ಪ್ರತಿಷ್ಠಾಪನೆ, ಪೂಜೆ ನೆರವೇರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ವೈ. ಅಶೋಕ್ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭಾ ಸದಸ್ಯ ಮಂಜು ಎಂಟೂವರೆ ಅಡಿ ಎತ್ತರದ ಗಣೇಶ ಮೂರ್ತಿ ಕೊಡುಗೆ ನೀಡಿದ್ದಾರೆ. ಸನಾತನ ವೇದಿಕೆ, ವೀರ ಸಾವರ್ಕರ್ ಮಹಾದ್ವಾರ, ಬಾಲಗಂಗಾಧರ್ ತಿಲಕ್ ಮಹಾಮಂಟಪ ಎಂದು ಹೆಸರಿಸಲಾಗಿದೆ. ಪ್ರತಿನಿತ್ಯವೂ ವೀಶೇಷ ಪೂಜೆ, ಪ್ರಸಾದ, ಚೌಡೇಶ್ವರಿ ಭಜನಾ ಮಂಡಳಿಯಿಂದ ಭಜನೆ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭೋವಿ ಶಿವು, ಕೆ.ಜಿ. ಲೋಕೇಶ್, ಚಿಟ್ಟಕ್ಕಿ ನಾಗರಾಜ್, ರವಿ, ಹನುಮೇಶಿ, ಕಿರಣ್, ದೇವರಾಜ್, ಸುನೀಲ್, ಹನುಮಗೌಡ, ಧೀರಜ್, ಕರಿಯಪ್ಪ, ನಾಗರಾಜ್, ಶಿ ನಿವಾಸ್ ಮತ್ತಿತರರು ಇದ್ದರು.