ಚಿಂಚೋಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

KannadaprabhaNewsNetwork |  
Published : Sep 11, 2024, 01:01 AM ISTUpdated : Sep 11, 2024, 01:02 AM IST
ಚಿಂಚೋಳಿ ಪುರಸಭೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಆನಂದ ಟೈಗರ ಅವರನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಿಂಚೋಳಿ ಸ್ಥಳೀಯ ಪುರಸಭೆ ೧೦ನೇ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಆನಂದ ನಾಗಪ್ಪ ಟೈಗರ ಅಧ್ಯಕ್ಷರಾಗಿ ಮತ್ತು ಸುಲ್ತಾನಬೀ ಖಲೀಲ ಪಟೇಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಸ್ಥಳೀಯ ಪುರಸಭೆ ೧೦ನೇ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಆನಂದ ನಾಗಪ್ಪ ಟೈಗರ ಅಧ್ಯಕ್ಷರಾಗಿ ಮತ್ತು ಸುಲ್ತಾನಬೀ ಖಲೀಲ ಪಟೇಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಆನಂದ ನಾಗಪ್ಪ ಟೈಗರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಲ್ತಾನಬಿ ಖಲೀಲ ಪಟೇಲ ಇಬ್ಬರು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಫಲಿತಾಂಶ ಪ್ರಕಟಿಸಿದರು. ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಚುನಾವಣಾ ಸಿಬ್ಬಂದಿ ಶೋಯಾಬ ಪಟೇಲ ಭಾಗವಹಿಸಿದ್ದರು.

ಪುರಸಭೆ ಒಟ್ಟು೨೩ ಸದಸ್ಯರನ್ನು ಶಾಸಕರು, ಸಂಸದರನ್ನು ಒಳಗೊಂಡು ಒಟ್ಟು ೨೫ ಸದಸ್ಯರ ಪೈಕಿ ಕೇವಲ ೧೮ ಸದಸ್ಯರು, ಬೀದರ ಸಂಸದ ಸಾಗರ ಖಂಡ್ರೆ ಚುನಾವಣೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್, ಜದೇವಿ ಗಡಂತಿ, ಸುಶೀಲಬಾಯಿ ಹುಸೇಬಾಯಿ, ಭೀಮರಾವ ರಾಠೋಡ, ಶಿವಕುಮಾರ ಪೋಚಾಲಿ ಚುನಾವಣೆಯಲ್ಲಿ ಭಾಗವಹಿಸದೇ ಗೈರಾಗಿದ್ದರು.

ಇದರಿಂದಾಗಿ ಕಾಂಗ್ರೆಸ್‌ ಪಕ್ಷದ ಸದಸ್ಯ ಜಗನ್ನಾಥ ಗುತ್ತೆದಾರ ನಾಮಪತ್ರ ಸಲ್ಲಿಸಲು ಪುರಸಭೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸಮಯ ಮುಗಿದಿದೆ ಎಂದು ಬಾಗಿಲಿನಲ್ಲಿಯೇ ಅಧಿಕಾರಿಗಳು, ಪೊಲೀಸರು ತಡೆಯೊಡ್ಡಿದ್ದರಿಂದ ಕೆಲಕಾಲ ಗದ್ದಲ ಉಂಟಾಗಿತ್ತು.

ಕಾಂಗ್ರೆಸ ಕಾರ್ಯಕರ್ತರಿಂದ ವಿಜಯೋತ್ಸವ:

ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದರಿಂದ ಪಟ್ಟಣದಲ್ಲಿ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿಕೊಂಡು ಭಾರಿ ಸಂಭ್ರಮಿಸಿದರು.

ಮವನ್ನು ಆಚರಿಸಿದರು ಸಂಸದ ಸಾಗರ ಖಂಡ್ರೆ, ಕೆಪಿಸಿಸಿ ಉಪಾಧ್ಯಕ್ಷ ಸುಭಾಸ ರಾಠೋಡ,ಮಾಜಿ ಶಾಸಕ ಶರಣಪ್ಪ ಮಟ್ಟೂರ,ಡಿಸಿಸಿ ಬ್ಯಾಂಕ ಅಧ್ಯಕ್ಷ ಸೋಮಶೇಖರ ಗೋನಾಯಕ,ನಾಗೇಶ್ವರರಾವ ಮಾಲಿಪಾಟೀಲ, ಭೀಮರಾವ ತೇಗಲತಿಪ್ಪಿ, ಮಹೆಮೂದ ಪಟೇಲ ಸಾಸರಗಾಂವ, ಡಿಸಿಸಿ ಬ್ಯಾಂಕ ನಿರ್ದೇಶಕ ಅಜೀತ ಪಾಟೀಲ,ಶರಣು ಮೋತಕಪಳ್ಳಿ ಬಸವರಾಜ ಮಲಿ,ರೇವಣಸಿದ್ದಪ್ಪ ಕಟ್ಟಿಮನಿ,ಸಂತೋಷ ಗುತ್ತೆದಾರ,ಮಲ್ಲಿಕಾರ್ಜುನ ಪಾಟೀಲ,ಪವನ ಪಾಟೀಲ,ವೀರಶೆಟ್ಟಿ ಪಾಟೀಲ,ಮಂಜುನಾಥ ಲೇವಡಿ,ರಾಜರೆಡ್ಡಿ, ವೀರಶೆಟ್ಟಿ ಇಮಡಾಪೂರ, ಡಾ.ಅಂಜನಯ್ಯ,ಪುರಸಭೆ ಸದಸ್ಯರು,ಕಾಂಗ್ರೆಸ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಎಲ್ಲ ಸದಸ್ಯರಿಗೆ ಕಾಂಗ್ರೆಸ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ