ವಿದ್ಯುತ್ ಅವಘಡ: ಎಲೆಕ್ಟ್ರಾನಿಕ್ಸ್‌ ಉಪಕರಣ ಭಸ್ಮ

KannadaprabhaNewsNetwork |  
Published : Nov 29, 2025, 11:45 PM IST
ಪೊಟೋ ನ.28ಎಂಡಿಎಲ್ 2. ಮುಧೋಳ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ವಿದ್ಯುತ್ ಅವಗಡ ದಿಂದ ಅಂಗಡಿ ಮಾಲಿಕನಿಗೆ ನಷ್ಠ. | Kannada Prabha

ಸಾರಾಂಶ

ವಿದ್ಯುತ್ ಅವಘಡದಿಂದ ಮಟ್ಟಣದ ತರಕಾರಿ ಮಾರುಕಟ್ಟೆ ಸಮೀಪದ ನಗರಸಭೆ ವಾಣಿಜ್ಯ ಮಳಿಗೆಯಲ್ಲಿನ ಹಲವಾರು ಅಂಗಡಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಭಸ್ಮಗೊಂಡು ಅಪಾರ ಹಾನಿ ಸಂಭವಿಸಿದೆ.

ಕನ್ನಡ ಪ್ರಭವಾರ್ತೆ ಮುಧೋಳ

ವಿದ್ಯುತ್ ಅವಘಡದಿಂದ ಮಟ್ಟಣದ ತರಕಾರಿ ಮಾರುಕಟ್ಟೆ ಸಮೀಪದ ನಗರಸಭೆ ವಾಣಿಜ್ಯ ಮಳಿಗೆಯಲ್ಲಿನ ಹಲವಾರು ಅಂಗಡಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಭಸ್ಮಗೊಂಡು ಅಪಾರ ಹಾನಿ ಸಂಭವಿಸಿದೆ.

ಗುರುವಾರ ಬೆಳಗ್ಗೆ ಸ್ಥಳೀಯ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್‌ಫಾರ್ಮರ್‌ನಲ್ಲಿ (ಟಿ.ಸಿ) ಏಕಾಏಕಿ ವಿದ್ಯುತ್ ಏರಿಳಿತವಾಗಿ ಹೆಚ್ಚಿನ ವೋಲ್ಟೇಜ್‌ ಪ್ರವಹಿಸಿದ್ದರಿಂದ ಬಹುತೇಕ ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾ, ಲೈಟ್‌ಗಳು, ರೆಫ್ರಿಜರೇಟರ್‌ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ.

ಘಟನೆಗೆ ಹೆಸ್ಕಾಂನ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿನ ವೈಫಲ್ಯ ಅಥವಾ ನಿರ್ವಹಣೆ ದೋಷ ಕಾರಣ ಎಂದು ಅಂಗಡಿಕಾರರು ಆರೋಪಿಸಿದ್ದು, ತನ್ನ ವೈಫಲ್ಯದಿಂದ ಉಂಟಾದ ಹಾನಿಗೆ ಹೆಸ್ಕಾಂ ಹೊಣೆ ಹೊರಬೇಕು. ಹಾನಿಯಾದ ಉಪಕರಣಗಳಿಗೆ ಕೂಡಲೇ ನಷ್ಟ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಘವೇಂದ್ರ ಜೋರಾಪುರ, ಗಣೇಶ ಹಡಪದ, ಮೋಹನಸಿಂಗ ರಾಠೋಡ್, ರಾಹುಲ್ ತೇಲಿ ಇತರರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರೇಜ್‌ ಮೆಕಾನಿಕ್‌ ಕೊಲೆ ಕೇಸ್‌: 7 ಆರೋಪಿಗಳ ಸೆರೆ
ಪೋಟೋ ಫ್ರೇಮ್‌ನಲ್ಲಿ ಅಡಗಿಸಿಟ್ಟುಸಾಗಿಸುತ್ತಿದ್ದ 37 ಲಕ್ಷದ ಗಾಂಜಾ ಜಪ್ತಿ