ವಿದ್ಯುತ್‌ ಸಮಸ್ಯೆ-ಬೆಳಖಂಡ ಗ್ರಾಮಕ್ಕೆ ಹೆಸ್ಕಾಂ ಎಇಇ ಭೇಟಿ

KannadaprabhaNewsNetwork |  
Published : Mar 22, 2025, 02:01 AM IST
ಪೊಟೋ೧೭ಎಸ್.ಆರ್.ಎಸ್೧೦ (ತಾಲೂಕಿನ ಬೆಳಖಂಡ ಗ್ರಾಮಕ್ಕೆ ಹೆಸ್ಕಾಂ ಎಇಇ ನಾಗರಾಜ ಪಾಟೀಲ್ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿದರು.) | Kannada Prabha

ಸಾರಾಂಶ

ಸ್ಥಳೀಯವಾಗಿ ಬರೂರು ಟಿಸಿಯಿಂದ ಬೆಳಖಂಡ ಭಾಗದಲ್ಲಿ ವಿದ್ಯುತ್ ಲೈನ್ ಬಂದಿದ್ದು, ಅದರಿಂದ ಲೋಡ್ ಹೆಚ್ಚಾಗಿ ವೋಲ್ಟೇಜ್ ಡ್ರಾಪ್ ಆಗುತ್ತಿದೆ

ಶಿರಸಿ: ತಾಲೂಕಿನ ಕುಳವೆ ಗ್ರಾಪಂ ವ್ಯಾಪ್ತಿಯ ಬೆಳಖಂಡ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾದ ಪರಿಣಾಮ ಸ್ಥಳಕ್ಕೆ ಹೆಸ್ಕಾಂ ಎಇಇ ನಾಗರಾಜ ಪಾಟೀಲ್ ಬೆಳಖಂಡ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಗ್ರಾಪಂ ಸದಸ್ಯ ಸಂದೇಶ ಭಟ್ಟ ಜತೆಯಲ್ಲಿ ಬೆಳಖಂಡ, ಶೇಡಿಕುಳಿ, ಸೊಪ್ಪಿನ ಮನೆ, ಶಷ್ಣನೆ, ಕಟ್ಟೆಮಕ್ಕಿ ಭಾಗದಲ್ಲಿನ ವಿದ್ಯುತ್ ವೋಲ್ಟೇಜ್ ಡ್ರಾಪ್ ಸಮಸ್ಯೆ ಆಲಿಸಿದ ನಾಗರಾಜ್ ಪಾಟೀಲ್, ನೂತನ ಟಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸ್ಥಳೀಯವಾಗಿ ಬರೂರು ಟಿಸಿಯಿಂದ ಬೆಳಖಂಡ ಭಾಗದಲ್ಲಿ ವಿದ್ಯುತ್ ಲೈನ್ ಬಂದಿದ್ದು, ಅದರಿಂದ ಲೋಡ್ ಹೆಚ್ಚಾಗಿ ವೋಲ್ಟೇಜ್ ಡ್ರಾಪ್ ಆಗುತ್ತಿದೆ. ಇದರಿಂದ ಹೊಸ ಟಿಸಿ ಹಾಕಿದಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಬರೂರು ಅಥವಾ ಬೆಟ್ಟಕೊಪ್ಪ ಭಾಗದಿಂದ ಎಚ್‌ಟಿ ಲೈನ್ ತಂದು ಟಿಸಿ ಅಳವಹಿಸಬಹುದು ಎಂದು ಸಂದೇಶ ಭಟ್ಟ ವಿನಂತಿಸಿದರು.

ಹೊಸ ಟಿಸಿಗಾಗಿ ಅಂದಾಜು ₹೧೫ ಲಕ್ಷ ಅಗತ್ಯವಿದ್ದು, ಅಗತ್ಯ ಪ್ರಸ್ತಾವನೆ ಕಳಿಸುವುದಾಗಿ ಎಇಇ ಭರವಸೆ ನೀಡಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಸ್ಥಳೀಯರಾದ ಎಂ.ಜಿ. ಭಟ್ಟ ಬೆಳಖಂಡ, ಅಶೋಕ ಶೇಟ್, ಮಂಜುನಾಥ ಶೇಟ್, ಗಿರೀಶ ಗೌಡ, ವಿನಾಯಕ ಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ