ಕನ್ನಡಪ್ರಭ ವಾರ್ತೆ ಮೇಲುಕೋಟೆ
ಬಡಮಕ್ಕಳ ಶಿಕ್ಷಣಕ್ಕೆ ವೈಯುಕ್ತಿಕ ಕೊಡುಗೆ ನೀಡುತ್ತಿದ್ದ ಮರಿಯಪ್ಪರವರು ಯದಶೈಲಾ ಶಾಲೆ ಸಹಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಸ್ಪೂರ್ತಿನೀಡುತ್ತಿದ್ದರು. ಇಂತಹ ಮಹನೀಯರಿಗೆ ಶ್ರದ್ಧಾಂಜಲಿ-ನುಡಿನಮನ ಸಲ್ಲಿಸಬೇಕಾದ್ದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯ ಎಂದರು.
ಸಾಮಾಜಿಕ ಹೋರಾಟಗಾರ ಈಶಮುರುಳಿ ಮತ್ತು ಮಹೇಶ್ ಗಣ್ಯರ ಆಶಯದಂತೆ ಎಂ.ಮರಿಯಪ್ಪರವರ ನೆನಪಿನಲ್ಲಿ ಬಡಮಕ್ಕಳಿಗೆ ಶೈಕ್ಷಣಿಕ ಕಾರ್ಯವನ್ನು ಪ್ರತಿವರ್ಷ ಮಾಡುತ್ತೇವೆ ಎಂದರು.ಸಭೆಯಲ್ಲಿ ಗಣ್ಯರು, ಅಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಹೋಬಲಮಠದ ಶಶಿಕುಮಾರ್ ಉಚಿತವಾಗಿ ಸಭಾಂಗಣ ನೀಡಿದ್ದರು.
ಬೋರಾಪುರದಲ್ಲಿ ಚಿರತೆ ಬೋನಿಗೆ ಸೆರೆಮದ್ದೂರು:
ತಾಲೂಕಿನ ಬೋರಾಪುರ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಭಾನುವಾರ ಸೆರೆಯಾಗಿದೆ.ಸುಮಾರು 6 ವರ್ಷದ ವಯಸ್ಸಿನ ಗಂಡು ಚಿರತೆ ಗ್ರಾಮದ ಪುಟ್ಟಲಿಂಗಮ್ಮ ತೋಟ ಮತ್ತು ಆಸುಪಾಸಿನ ಜಮೀನುಗಳಲ್ಲಿ ರಾತ್ರಿ ವೇಳೆ ಸಂಚಾರ ಮಾಡುತ್ತಾ ರೈತರಲ್ಲಿ ಆತಂಕ ಸೃಷ್ಟಿಸಿತ್ತು.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಗವಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಬೋನನ್ನು ಇರಿಸಿದ್ದರು. ಭಾನುವಾರ ಮುಂಜಾನೆ ಬೋನಿನಲ್ಲಿದ್ದ ಸತ್ತ ನಾಯಿ ಶವವನ್ನು ತಿನ್ನಲು ಬಂದು ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ವನ್ಯಧಾಮ ಅರಣ್ಯದ ವಶಕ್ಕೆ ಒಪ್ಪಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.