ಸಿದ್ಧಗಂಗಾ ರೈಲಿನಲ್ಲಿ ಭಾವಾಂತರಂಗ ಕೃತಿ ಬಿಡುಗಡೆ

KannadaprabhaNewsNetwork |  
Published : Feb 20, 2026, 02:00 AM IST
20 HRR. 01 ಸಿದ್ಧಗಂಗಾ ರೈಲಿನಲ್ಲಿ ಕೆ. ನಾಗರಾಜಪ್ಪ ಅವರು ರಚಿಸಿರುವ ಪ್ರೇಮ ಗೀತೆಗಳ ಕವನ ಸಂಕಲನ ಭಾವಾಂತರಂಗ ಪುಸ್ತಕ ಬಿಡುಗಡೆಯ ಸಮಾರಂಭ ನೆರವೇರಿತು.20 HRR. 01 01 Aಪ್ರೇಮ ಗೀತೆಗಳ ಕವನ ಸಂಕಲನ ಭಾವಾಂತರಂಗದ ಕತೃ ನಾಗರಾಜಪ್ಪ | Kannada Prabha

ಸಾರಾಂಶ

ಬೆಳಗಿನ ಸಿದ್ಧಗಂಗಾ ರೈಲಿನ ಡಿ.6 ನಂಬಿನ ಬೋಗಿಯಲ್ಲಿ ಕೆ.ನಾಗರಾಜಪ್ಪ ಅವರು ರಚಿಸಿರುವ ಪ್ರೇಮಗೀತೆಗಳ ಕವನ ಸಂಕಲನ ಭಾವಾಂತರಂಗ ಪುಸ್ತಕವನ್ನು ಗುರುವಾರ ಹರಿಹರದ ರಾಜಶೇಖರ ಮೂರ್ತಿ ನೇತೃತ್ವದ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ವತಿಯಿಂದ ಬಿಡುಗಡೆಗೊಳಿಸಲಾಯಿತು.

- ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ಆಯೋಜನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಬೆಳಗಿನ ಸಿದ್ಧಗಂಗಾ ರೈಲಿನ ಡಿ.6 ನಂಬಿನ ಬೋಗಿಯಲ್ಲಿ ಕೆ.ನಾಗರಾಜಪ್ಪ ಅವರು ರಚಿಸಿರುವ ಪ್ರೇಮಗೀತೆಗಳ ಕವನ ಸಂಕಲನ ಭಾವಾಂತರಂಗ ಪುಸ್ತಕವನ್ನು ಗುರುವಾರ ಹರಿಹರದ ರಾಜಶೇಖರ ಮೂರ್ತಿ ನೇತೃತ್ವದ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ವತಿಯಿಂದ ಬಿಡುಗಡೆಗೊಳಿಸಲಾಯಿತು.

ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ, ಕಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ನಾಗರಾಜಪ್ಪ ಅವರ ಕವನ ಸಂಕಲನವನ್ನು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಕಡೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಮರುಳಸಿದ್ದ ಸ್ವಾಮೀಜಿ ಪುಸ್ತಕ ಬಿಡುಗಡೆ ನೆರವೇರಿಸಿದರು.

ರೈಲಿನಲ್ಲಿ ನಡೆದ ಈ ಸಮಾರಂಭ ಅಧ್ಯಕ್ಷತೆಯನ್ನು ತಾಳಿಕಟ್ಟೆ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಬುದ್ಧಿವಂತರಾದ ಗೋವಿಂದಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇವರೆಲ್ಲರಿಗೂ ಗೌರವ ಸನ್ಮಾನ ಮಾಡಲಾಯಿತು.

ಸಾಂಸ್ಕೃತಿಕ ವೇದಿಕೆ ಸಂಚಾಲಕ ಅಧ್ಯಕ್ಷ ರಾಜಶೇಖರ ಮೂರ್ತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲ ಸಹ ಪ್ರಯಾಣಿಕರು ಹಾಗೂ ಗೆಳೆಯರಿಗೆ ವಂದನೆ ಸಲ್ಲಿಸಿದರು.

- - -

(ಬಾಕ್ಸ್) * ರೈಲಿನ ಪ್ರಯಾಣದ ಮೂಲಕ ಪರಿಚಿತ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಜಶೇಖರಮೂರ್ತಿ ಜಿ.ಎಂ. ಮಾತನಾಡಿ, ಭಾವಾಂತರಂಗ ಕೃತಿಯ ಲೇಖಕ ಕೆ.ನಾಗರಾಜಪ್ಪ ಅವರು ಮೂಲತಃ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆಯವರು. ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಮುಂಬಡ್ತಿ ಹೊಂದಿ ಪ್ರಸ್ತುತ ಕಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ (ಟಿ.ಪಿ.ಒ.) ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕೆ.ನಾಗರಾಜಪ್ಪ ತಮ್ಮ ಕಾಲೇಜು ದಿನಗಳಿಂದ ಅನೇಕ ಕವಿ- ಸಾಹಿತಿಗಳ ಒಡನಾಟದಲ್ಲಿ ಬೆಳೆದು, ತಾವೂ ಅನೇಕ ಪ್ರೇಮ ಕವನಗಳನ್ನು, ಕಾಂದಂಬರಿಗಳನ್ನು, ಶಾಯಿರಿಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಗೊಳಿಸಿದ್ದರು. ಇಂಥ ಸಾಹಿತ್ಯ ಅಭಿರುಚಿಯುಳ್ಳವರು ನನಗೆ ರೈಲಿನ ಪ್ರಯಾಣದ ಮೂಲಕ ಪರಿಚಿತರಾದರು. ನಾನು ಅವರಲ್ಲಿನ ಕವಿಭಾವನೆಗಳನ್ನು ಪರಿಚಯಿಸಿಕೊಂಡು ಇಂಥ ವ್ಯಕ್ತಿಯ ಬರವಣಿಗೆಗೆ ಕಾವ್ಯ ಸಂಕಲನದ ರೂಪ, ಪುಸ್ತಕ ರೂಪದಲ್ಲಿ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ರೈಲಿನಲ್ಲಿ ಪರಿಚಯಿಸಲೇಬೇಕೆಂಬ ಮನಸ್ಸು ಮಾಡಿದೆ ಎಂದು ತಿಳಿಸಿದರು.

- - -

-20HRR.01.ಜೆಪಿಜಿ: ಸಿದ್ಧಗಂಗಾ ರೈಲಿನಲ್ಲಿ ಕೆ.ನಾಗರಾಜಪ್ಪ ರಚಿಸಿರುವ ಪ್ರೇಮಗೀತೆಗಳ ಕವನ ಸಂಕಲನ ಭಾವಾಂತರಂಗ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.-20HRR.01A: ನಾಗರಾಜಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗಾಯತ, ಗಾಣಿಗಕ್ಕೆ ಕಾನೂನಲ್ಲಿ ಪ್ರತ್ಯೇಕ ಗುರುತಿಲ್ಲ: ಕೋರ್ಟ್‌
ಸರ್ಕಾರಿ ಶಾಲೆಗೆ ಉದ್ಯಮಿಯಿಂದ ಪ್ರೊಜೆಕ್ಟರ್, ಧ್ವನಿವರ್ಧಕ ವಿತರಣೆ