ಧಾರವಾಡ:
ಕರ್ನಾಟಕ ಸಾಹಿತ್ಯ ಅಕಾಡೆಮಿ ಧಾರವಾಡದ ರಂಗಾಯಣದಲ್ಲಿ ಆಯೋಜಿಸಿರುವ ಮೂರು ದಿನಗಳ "ಕನ್ನಡ ವಿಚಾರ ಸಾಹಿತ್ಯ ದರ್ಶನ " ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಶೋಕ ತನ್ನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಯಜ್ಞ, ಯಾಗ, ಹೋಮಗಳಲ್ಲಿ ಅಪಾರ ಪ್ರಮಾಣದ ಗೋವು, ಎತ್ತುಗಳನ್ನು ಬಲಿ ಕೊಡುತ್ತಿದ್ದನ್ನು ಕಂಡು ಮಮ್ಮಲ ಮರುಗಿದ್ದ. ಮೇಲಾಗಿ ಹೀಗೆ ಎತ್ತುಗಳನ್ನು ಬಲಿ ಕೊಡುತ್ತಿದ್ದರಿಂದ ಕೃಷಿ ನಿರ್ವಹಿಸಲು ಎತ್ತುಗಳ ಕೊರತೆ ಆಗುತ್ತಿದ್ದುದನ್ನು ಗಮನಿಸಿ ಗೋಹತ್ಯೆ ನಿಷೇಧದಾಜ್ಞೆ ಜಾರಿಗೊಳಿಸಿದ್ದ ಎಂದು ಹೇಳಿದರು.ಇಂದು ಗೋ ರಕ್ಷಣೆ ರಾಜಕೀಕರಣ ಆಗಿದೆ. ಸುಳ್ಳುಗಳೇ ವಿಜೃಂಭಿಸುತ್ತಿವೆ. ಇದರಿಂದ ಈ ದೇಶದ ಸಂಸ್ಕೃತಿ, ಸಹಬಾಳ್ವೆ, ಸೌಹಾರ್ದತೆಗೆ ಪೆಟ್ಟು ಬೀಳುತ್ತಿದೆ. ವಾಸ್ತವತೆ, ಸತ್ಯದ ಪರವಾಗಿ ಪ್ರಾಜ್ಞರು ನಿಲ್ಲದೇ ಹೋದರೆ ಮುಂದಿನ ಪೀಳಿಗೆ ಅರ್ಥಾತ್ ಭಾರತದ ಭವಿಷ್ಯಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ ಎಂದು ಮುಕುಂದರಾಜ್ ಕಳವಳ ವ್ಯಕ್ತಪಡಿಸಿದರು.ಕ್ರೌರ್ಯವೇ ಶೌರ್ಯವಾದಾಗ?
ವೇದ ವೈದಿಕರಿಗೆ, ಕುರಾನ್ ಮುಸ್ಲಿಂರಿಗೆ, ಬೈಬಲ್ ಕ್ರಿಶ್ಚಿಯನ್ನರಿಗೆ ಹೇಗೆ ಬದುಕಬೇಕು ಎಂದು ಹೇಳುತ್ತವೆ. ಆದರೆ, ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಭಾರತೀಯರೆಲ್ಲ ಸೌಹಾರ್ದತೆಯಿಂದ ಕೂಡಿ ಬಾಳುವುದನ್ನು ಹೇಳುತ್ತದೆ. ಇಂಥ ಸಂವಿಧಾನ ಬದಲಿಸುವ, ಅಶಕ್ತಗೊಳಿಸುವ ಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸಂವಿಧಾನದ ಪಾಲನೆಯಿಂದ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ ಎನ್ನುವುದನ್ನು ಯುವ ಜನಾಂಗ ಗಟ್ಟಿಯಾಗಿ ನಂಬಿ ಬಹುತ್ವ ವಿರೋಧಿಸುವ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಅನಿಯಾಗಬೇಕು ಎಂದು ಅವರು ಕರೆನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಅರ್ಜುನ ಗೊಳಸಂಗಿ, ಇದೊಂದು ವೈಚಾರಿಕ ಕಮ್ಮಟ. ಬುದ್ಧನ ಕರುಣೆ, ಬಸವನ ಕಾಯಕ, ಗಾಂಧೀಜಿಯ ಅಹಿಂಸೆ, ಕುವೆಂಪು ವೈಚಾರಿಕತೆ ಮತ್ತು ಅಂಬೇಡ್ಕರರ ಸಮಾನತೆ ಪ್ರಜ್ಞೆಗಳನ್ನು ಇಂದಿನ ಯುವಕರಿಗೆ ಮನದಟ್ಟು ಮಾಡುವ ಬಹು ದೊಡ್ಡ ಹೆಜ್ಜೆ ಇದು. ಹೀಗೆ ಯುವ ಮನಸುಗಳನ್ನು ಕಟ್ಟುವ ಮೂಲಕ ಬಹುತ್ವ ಮತ್ತು ಸೌಹಾರ್ದ ಭಾರತದ ಕಟ್ಟುವ ಕನಸು ಇದಾಗಿ ಎಂದರು.
ಅಕಾಡೆಮಿಯ ರಜಿಸ್ಟ್ರಾರ್ ಕರಿಯಪ್ಪ ಎನ್, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಸ್ವಾಗತಿಸಿದರು. ಸಿದ್ದರಾಮ ಹಿಪ್ಪರಗಿ ವಂದಿಸಿದರು. ಡಾ.ಅಪ್ಪಗೆರೆ ಸೋಮಶೇಖರ್, ಬಿ.ಆರ್.ಕೃಷ್ಣಪ್ಪ, ಎನ್.ಎನ್.ಗಾಳೆಮ್ಮನವರ ಮತ್ತಿತರರು ಇದ್ದರು. ರಾಜ್ಯದ ವಿವಿಧ ಜಿಲ್ಲೆ, ವಿವಿಧ ವಿವಿಗಳಿಂದ ನೂರಾರು ಶಿಭಿರಾರ್ಥಿಗಳು ಈ ಕಮ್ಮಟದಲ್ಲಿ ಭಾಗಿಯಾಗಿದ್ದಾರೆ.
ಸನಾತನ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳೂ ಪ್ರೀತಿ, ಶಾಂತಿ, ಸೌಹಾರ್ದತೆಯನ್ನು ಹೇಳಿವೆ. ಆದರೆ, ಕೆಲವರು ಫೆ.14 ಪ್ರೇಮಿಗಳ ದಿನದಂದು ಪ್ರೀತಿಸುವ ಯುವಕ-ಯುವತಿಯರನ್ನು ಹಿಡಿದು ಹಿಂಸಿಸುವ ಶೌರ್ಯ ತೋರುತ್ತಿದ್ದಾರೆ. ಅದುವೇ ಧರ್ಮ ಪಾಲನೆ ಎಂದು ಅವರು ಭಾವಿಸಿದ್ದಾರೆ. ಹೀಗೆ ಪ್ರೀತಿಸುವುದರಿಂದ ಧರ್ಮ ಹಾಳಾಗುತ್ತದೆ ಎನ್ನುವುದು ಅವರ ವಾದ. ಇಂಥ ಧರ್ಮಾಂಧರ ಬಗ್ಗೆ ಯುವ ಸಮೂಹ ಎಚ್ಚರದಿಂದ ಇರಬೇಕು ಎಂದು ಡಾ.ಸಿದ್ಧನಗೌಡ ಪಾಟೀಲ್ ಕರೆನೀಡಿದರು.