ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಒತ್ತು: ಕೆ.ಎಸ್. ಆನಂದ್

KannadaprabhaNewsNetwork |  
Published : Jul 07, 2025, 11:48 PM IST
7ಕೆಕೆಡಿಯು1. | Kannada Prabha

ಸಾರಾಂಶ

ಕಡೂರು ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣದ ಜೊತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಸೋಮವಾರ ಕಡೂರು ಕ್ಷೇತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯಲ್ಲಿ ಸೇತುವೆ,ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ,ಕಡೂರು

ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣದ ಜೊತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಸೋಮವಾರ ಕಡೂರು ಕ್ಷೇತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯ ಬರಹಳ್ಳಕ್ಕೆ ಪ್ರಾಂಸರಿ ಯೋಜನೆಯಲ್ಲಿ ₹495 ಲಕ್ಷ ವೆಚ್ಚದ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾಕಷ್ಟು ಅಫಘಾತಗಳು ಈ ಸೇತುವೆ ಬಳಿ ನಡೆದಿರುವುದನ್ನು ಮನಗಂಡು ₹495 ಲಕ್ಷನಲ್ಲಿ ಈ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. 2.ಕಿ.ಮೀ. ರಸ್ತೆಕೂಡ ಮಾಡಲಾಗುವುದು. ಜನರು ಕೇಳದೇ ಇದ್ದರೂ ಕೂಡ ನಾನೇ ಈ ಸೇತುವೆ ನಿರ್ಮಾಣಕ್ಕೆ ಅದ್ಯತೆ ನೀಡಿ ಚಾಲನೆ ನೀಡಲಾಗುತ್ತಿದೆ ಎಂದರು.

ಶಾಸಕರ ನಿಧಿಯಿಂದ ಗ್ರಾಮದ ಒಳಗಿನ ರಸ್ತೆಗಳನ್ನೂ ಮಾಡುವ ಜೊತೆಗೆ ಗ್ರಾಮೀಣ ಸಂಪರ್ಕರಸ್ತೆಗಳಿಗೂ ಒತ್ತು ನೀಡಲಾಗುತ್ತಿದೆ. 9ನೇ ಮೈಲಿ ಕಲ್ಲಿನಿಂದ ಸಿಂಗಟಗೆರೆವರೆಗೆ ರಸ್ತೆ ಆಗಬೇಕಿದೆ. ಏಕಕಾಲದಲ್ಲಿ ಒಂದೇ ರಸ್ತೆಗೆ ಮೊದಲ ಭಾರಿ ₹22 ಕೋಟಿ ಹಾಕುವ ಮೂಲಕ ಪಂಚನಹಳ್ಳಿ- ಸಿಂಗಟಗೆರೆ ರಸ್ತೆ ಮಾಡುತ್ತಿದ್ದೇವೆ. ಅಲ್ಲದೆ ದೊಣ್ಣೆಕೋರನ ಹಳ್ಳಿಯಿಂದ ಚೌಳಹಿರಿ ಯೂರಿನವರೆಗೆ ರಸ್ತೆ ಆಗಲಿದೆ. ಉತ್ತಮ ರಸ್ತೆಗಳ ಅಭಿವೃದ್ಧಿಗೆ ಶಾಸಕನಿಗೆ ಇರುವ ಬದ್ಧತೆ ಆಗಿದೆ ಎಂದರೆ ತಪ್ಪಾಗಲಾರದು ಎಂದರು.

ಮುಖ್ಯವಾಗಿ ದೇವಾಲಯಗಳು ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೂ ಆದ್ಯತೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಠು ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು.

ಬಿಜೆಪಿ ಸರರ್ಕಾದ 5 ವರ್ಷಗಳ ಅವಧಿಯಲ್ಲಿ ಹಿಂದುತ್ವವನ್ನು ಹೇಳಿತೇ ಹೊರತು ಅನುದಾನ ನೀಡಲಿಲ್ಲ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಕೇವಲ 2 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ನೀಡಲಾಗಿದೆ ಎಂದರು.

ಇನ್ನು ಬಹು ದಿನಗಳ ಬೇಡಿಕೆಯಾಗಿರುವ ಕರೇಕಲ್ಲಿನಿಂದ- ಸೀತಾಪುರ ತಾಂಡ್ಯ ಮತ್ತು ಪರ್ವತನಹಳ್ಲಿ ಗೇಟಿನವರೆಗೆ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.

ಮಾಜಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಡಿ.ಎಸ್. ಉಮೇಶ್ ಮಾತನಾಡಿ, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ನಿರ್ಮಾಣಕ್ಕೆ ನಮ್ಮ ಶಾಸಕ ಕೆ.ಎಸ್. ಆನಂದ್ ಈ ಭಾಗದ ರೈತರಿಗೆ ಬೇಕಾಗಿದ್ದ ಬರಹಳ್ಳದ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ನಮಗೆ ಸಂತಸದ ಸಂಗತಿ . ಈ ಭಾಗದಿಂದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತಿದ್ದಾರೆ ಅವರಿಗೆ ಈ ಭಾಗದ ಜನರ ಪರವಾಗಿ ಅಬಿನಂದಿಸುತ್ತೇನೆ ಎಂದರು.

ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ್ ನಾಯ್ಕ ಮಾತನಾಡಿ, ಹಿಂದೆ ಈ ಜಾಗದಲ್ಲಿ ಅನೇಕ ಅಫಘಾತಗಳು ಸಂಭವಿಸಿ ಅನೇಕರು ಸಾವನ್ನಪ್ಪಿರುವುದನ್ನು ಅರಿತಿರುವ ಶಾಸಕರು ಆಸಕ್ತಿ ವಹಿಸಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ಈ ನೂತನ ಸೇತುವೆಯನ್ನು 40 ಮೀಟರ್ ವಿಸ್ತರಿಸುವುದರಿಂದ ಈ ಭಾಗದ ರೈತರು ಮತ್ತು ಜನರಿಗೆ ಸಂಚರಿಸಲು ಅನುಕೂಲ ವಾಗಲಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ಯಗಟಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಈಶ್ವರಪ್ಪ, ಹಾಲಪ್ಪ , ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಗುರುಮೂರ್ತಿ, ಸಿದ್ಪಪ್ಪ, ಗೋವಿಂದಪ್ಪ, ರವಿ ಎರೆಬಳ್ಳಪ್ಪ, ಈಶ್ವರಪ್ಪ, ಸಿದ್ದಪ್ಪಪ, ಶಿವಣ್ಣ ಸೇರಿದಂತೆ ಪುರ ,ಯಗಟಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಜನರು ಹಾಜರಿದ್ದರು.

7ಕೆಕೆಡಿಯು1.

ಕಡೂರು ಕ್ಷೇ್ತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯ ಬರಹಳ್ಳಕ್ಕೆ ಪ್ರಾಂಸರಿ ಯೋಜನೆಯಲ್ಲಿ 495 ಲಕ್ಷರೂ ವೆಚ್ಚದ ಸೇತುವೆ ಮತ್ತು ರಸ್ತೆ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ರವರು ಚಾಲನೆ ನೀಡಿದರು.

PREV