ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿ: ಸುಭಾಷ ನಾರ್ವೇಕರ

KannadaprabhaNewsNetwork |  
Published : Jul 15, 2025, 11:46 PM IST
ಗೋಕರ್ಣದ ಲಯನ್ಸ್‌ ಕ್ಲಬ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಅಂಕೋಲಾದ ಸಮಾಜ ಸೇವಕ ಸುಭಾಷ ನಾರ್ವೇಕರ ಮಾತನಾಡಿದರು. | Kannada Prabha

ಸಾರಾಂಶ

ಗೋಕರ್ಣದ ಮಣಿಭದ್ರ ರಸ್ತೆಯಲ್ಲಿರುವ ನಿಮ್ಮು ಹೌಸ್‌ನ ನಿರ್ಮಲಾ ಗ್ರ್ಯಾಂಡ್‌ ಸಭಾಭವನದಲ್ಲಿ ಭಾನುವಾರ ಲಯನ್ಸ್‌ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಗೋಕರ್ಣ: ಮಾದಕ ಪದಾರ್ಥಗಳ ಬಳಕೆಯಿಂದಾಗುವ ದುಷ್ಪರಿಣಾಮ, ತಿಳಿವಳಿಕೆ ಹಾಗೂ ಜಾಗ್ರತೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಪುಣ್ಯ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಅಂಕೋಲಾದ ವಕೀಲ ಹಾಗೂ ಸಮಾಜ ಸೇವಕ ಸುಭಾಷ ನಾರ್ವೇಕರ ಹೇಳಿದರು.

ಇಲ್ಲಿನ ಮಣಿಭದ್ರ ರಸ್ತೆಯಲ್ಲಿರುವ ನಿಮ್ಮು ಹೌಸ್‌ನ ನಿರ್ಮಲಾ ಗ್ರ್ಯಾಂಡ್‌ ಸಭಾಭವನದಲ್ಲಿ ಭಾನುವಾರ ನಡೆದ ಲಯನ್ಸ್‌ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಯನ್ಸ್‌ ಕ್ಲಬ್ ಇಂತಹ ಕಾರ್ಯವನ್ನು ಹಮ್ಮಿಕೊಂಡು ಇದರಲ್ಲಿ ಇಲ್ಲಿನ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಲಯನ್ಸ್‌ ಜಿಲ್ಲಾ ಉಪ ಗವರ್ನರ್ ಗೋವಾದ ಸುದೇಶ ಬೋರ್ಕರ್ ಪ್ರತಿಜ್ಞಾವಿಧಿ ಬೋಧಿಸಿದರು. ಆನಂತರ ಮಾತನಾಡಿದ ಅವರು, ಆಯಾ ವರ್ಷದಲ್ಲಿ ಲಯನ್ಸ್‌ನಿಂದ ನಡೆಯುವ ಸಾಮಾಜಿಕ ಕಾರ್ಯದ ಪರಿಶೀಲನೆ ನಡೆದು, ಅಗತ್ಯವಿರುವ ಕಡೆ ತಲುಪಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ವರ್ಷದ ಚಟುವಟಿಕೆ ನಡೆಯಲಿ ಎಂದು ಆಶಿಸಿದರು.

ಲಯನ್ಸ್‌ ಸಂಸ್ಥಾಪಕ ಅಧ್ಯಕ್ಷ ಡಾ. ವಿನಾಯಕ ಮಲ್ಲನ್, ಜಿಲ್ಲಾ ಮಾಜಿ ಗವರ್ನರ್ ಪಿ.ಎಂ.ಇ.ಎಫ್. ಗಣಪತಿ ನಾಯಕ ಅವರು ಲಯನ್ಸ್‌ ಕ್ಲಬ್‌ ಗೋಕರ್ಣದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆ ಮೂಲಕ ಸುದೀರ್ಘವಾಗಿ ನಡೆದು ಬಂದ ಹಾದಿ ವಿವರಿಸಿದರು.

ಹಿಂದಿನ ಅಧ್ಯಕ್ಷ ರವೀಂದ್ರ ಕೊಡ್ಲೆಕೆರೆ ಅವರು ಒಂದು ವರ್ಷದ ಅವಧಿಯಲ್ಲಿ ನಡೆದ ಕಾರ್ಯಚಟುವಟಿಕೆ ವಿವರಿಸಿದರು. ನೂತನ ಅಧ್ಯಕ್ಷ ನಾಗರಾಜ ಹನೇಹಳ್ಳಿ ಅವರು ಈ ವರ್ಷ ಹಮ್ಮಿಕೊಳ್ಳುವ ಕಾರ್ಯಕ್ರಮ ವಿವರಿಸಿದರು.

ಲಯನ್ಸ್‌ ವಲಯ ಅಧ್ಯಕ್ಷ ಅನಿಲ ಶೇಟ್, ಲಯನ್ಸ್‌ ಮಾಜಿ ಪ್ರಾಂತೀಯ ಅಧ್ಯಕ್ಷ ಆರ್.ಎಚ್. ನಾಯಕ, ಲಯನ್ಸ್‌ನ ಬೀರಣ್ಣ ನಾಯಕ, ಗುರುಪ್ರಕಾಶ ಹೆಗಡೆ, ಮಂಜುನಾಥ ಜನ್ನು, ಶಶಾಂಕ ಶೆಟ್ಟಿ, ಡಾ. ಜಗದೀಶ ನಾಯ್ಕ, ಮಹೇಶ ನಾಯಕ, ಪ್ರೇಮಾ ನಾಯಕ, ಅಹಲ್ಯಾ ನಾಯಕ, ಭಾರತಿ ಲಮಾಣಿ, ಜ್ಯೋತಿ ಶೇಟ್, ಎನ್.ಎಸ್. ಲಮಾಣಿ, ಗಣೇಶ ಶೇಟ್, ಶೈಲಜಾ ನಾಯಕ ಉಪಸ್ಥಿತರಿದ್ದರು.ಲಯನ್ಸ್‌ ನೂತನ ಕಾರ್ಯದರ್ಶಿ ಡಾ. ರಾಮಚಂದ್ರ ಮಲ್ಲನ್ ಪರಿಚಯ ಹಾಗೂ ವಂದನಾರ್ಪಣೆಗೈದರು. ನೂತನ ಖಜಾಂಚಿ ಅಮಿತ್ ಗೋಕರ್ಣ ವರದಿ ವಾಚಿಸಿದರು. ರಾಮಮೂರ್ತಿ ನಾಯಕ, ಸತೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ