ಗಣೇಶ್ ತಮ್ಮಡಿಹಳ್ಳಿ
ಆಳುವ ಸರ್ಕಾರಗಳ ನಿಷ್ಕಾಳಜಿ ಹಾಗೂ ವಿಳಂಬ ಧೋರಣೆ ಫಲವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಫಲಾನುಭವಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ಕೈ ಸೇರಿಲ್ಲ.
ಬರಗಾಲದಲ್ಲಿ ಕೆಲಸ ಇಲ್ಲದೇ ಪರಿತಪಿಸುತ್ತಿದ್ದ ಮಂದಿಗೆ ನರೇಗಾ ಯೋಜನೆ ವರವಾಗಿದೆ. ಸರ್ಕಾರದ ಈ ಯೋಜನೆ ಕೂಲಿ ಕಾರ್ಮಿಕ ವರ್ಗದ ಕೈ ಹಿಡಿದಿದೆ. ಆದರೆ, ಎರಡು ತಿಂಗಳಿಂದಲೂ ವೇತನ ಬಿಡುಗಡೆಯಾಗಿಲ್ಲ. ಹೀಗಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದುಡಿದ ಕಾರ್ಮಿಕರ ಮಾನವ ದಿನಗಳಿಗೆ ತಕ್ಕಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯೋಜನೆ ಎಂಜಿನಿಯರ್ ಹಾಗೂ ತಾಲೂಕು ಪಂಚಾಯಿತಿ ಇಒ ಅವರ ಬಯೋಮೆಟ್ರಿಕ್ ನೀಡಿದ ಆಧಾರದಲ್ಲಿ ವೇತನ ಬಿಡುಗಡೆಯಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಗ್ರಾ.ಪಂ. ಮಟ್ಟದಲ್ಲೇ ಈ ಪ್ರಕ್ರಿಯೆ ವಿಳಂಬ ಆಗುವುದುಂಟು. ಹೀಗೆ ಸಹಿ ಸಹಿತ ಬಯೋಮೆಟ್ರಿಕ್ ನೀಡುವುದು ತಡವಾದರೂ ವೇತನ ಬಿಡುಗಡೆ ಕುಂಠಿತವಾಗುತ್ತದೆ. ಆದರೆ, ಈ ಬಾರಿ ಗ್ರಾ.ಪಂ.ಮಟ್ಟದಲ್ಲೇನು ಸಮಸ್ಯೆ ಆಗಿಲ್ಲ. ಬದಲಿಗೆ ಸರ್ಕಾರದ ಮಟ್ಟದಲ್ಲೇ ಸಮಸ್ಯೆ ತಲೆದೋರಿದೆ.
₹9.23 ಕೋಟಿ ಕೂಲಿ ಪಾವತಿ ಬಾಕಿ:
ಭದ್ರಾವತಿ ತಾಲೂಕಿನಲ್ಲಿ 1.42 ಕೋಟಿ, ಹೊಸನಗರದಲ್ಲಿ 54.23 ಲಕ್ಷ, ಸಾಗರದಲ್ಲಿ 1.66ಕೋಟಿ, ಶಿಕಾರಿಪುರದಲ್ಲಿ 2.1 ಕೋಟಿ, ಶಿವಮೊಗ್ಗದಲ್ಲಿ 1.33 ಕೋಟಿ, ಸೊರಬದಲ್ಲಿ 1.83 ಕೋಟಿ, ತೀರ್ಥಹಳ್ಳಿಯಲ್ಲಿ 42.92 ಲಕ್ಷ ಹಣ ಪಾವತಿಗೆ ಬಾಕಿ ಇದೆ. ಕೇಂದ್ರ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ, ಕೂಲಿ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.
32 ಲಕ್ಷ ಮಾನವ ದಿನದ ಗುರಿ
-ಸ್ನೇಹಲ್ ಸುಧಾಕರ್ ಲೋಖಂಡೆ, ಸಿಇಒ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ.