ಹುಬ್ಬಳ್ಳಿ:
ಅವರು ಹಳೇ ಹುಬ್ಬಳ್ಳಿಯ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ (ಜನಪದ ಪರಂಪರಾ ಉತ್ಸವ- 2024) ರಾಜ್ಯಮಟ್ಟದ ಏಕವ್ಯಕ್ತಿ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ದೂರದರ್ಶನ ಕಲಾವಿದರಾದ ವಿದುಷಿ ಶಶಿಕಲಾ ದಾನಿ-ಜಲ ತರಂಗ ವಾದನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ- ಶಹನಾಯಿ ವಾದನ, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಡಾ. ಸಹನಾ ಭಟ್-ಭರತನಾಟ್ಯ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಭಯ್ಯ ಹಿರೇಮಠ-ಜಾನಪದ ಗೀತೆ, ಅಂತಾರಾಷ್ಟ್ರೀಯ ಜನಪದ ನೃತ್ಯ ಕಲಾವಿದ ಅಮಿತಕುಮಾರ ಶಿಂಧೆ -ಜಾನಪದ ನೃತ್ಯ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಮಲ್ಲಾಪುರ-ತೈಲ ವರ್ಣ ಚಿತ್ರಕಲೆ, ಪಂ. ಮನುಕುಮಾರ ಹಿರೇಮಠ-ತಬಲಾ ವಾದನ, ಶಂಕರ ಕಬಾಡಿ-ಪಿಟಿಲು ವಾದನ, ಲಕ್ಷ್ಮೀಬಾಯಿ ಹರಿಜನ-ಗೀಗೀ ಪದ ಹಾಗೂ ಅರ್ಜುನ ಮಾದರ ಅವರಿಂದ ಹಲಗೆ ವಾದನ ಪ್ರದರ್ಶನ ನಡೆಯಿತು. ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಚೆನ್ನಯ್ಯ ವಸ್ತ್ರದ ಸ್ವಾಗತಿಸಿದರು. ಮನೀಶ ಹಿಂದೆ ವಂದಿಸಿದರು. ಡಾ. ಪ್ರಕಾಶ ಮಲ್ಲಿಗೆವಾಡ ಅಧ್ಯಕ್ಷತೆ ವಹಿಸಿದ್ದರು.