ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀರಂಗಪಟ್ಟಣ ಸೇತುವೆ ಪಕ್ಕ ಕಾವೇರಿ ನದಿಗೆ ಇಟಾಚಿಗಳನ್ನು ಇಳಿಸಿ ಗುಂಡಿಗಳನ್ನು ಮಾಡಿ ಮಣ್ಣನ್ನು ಬಗೆದು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಆ ಮಣ್ಣನ್ನು ಒತ್ತುವರಿ ಮಾಡಿಕೊಂಡು ಜಮೀನುಗಳ ಅಥವಾ ಕಟ್ಟಡ ಕಟ್ಟಲು ಬಳಕೆ ಮಾಡುತ್ತಿರುವುದನ್ನು ಖಂಡಿಸಿದರು.
ಕಾವೇರಿ ನದಿಯ ದಡ ಹಾಗೂ ಸೇತುವೆ ಆಸುಪಾಸಿನಲ್ಲಿ ಇಟಾಚಿ ನದಿ ಮಣ್ಣು ತೆಗೆದು ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಕಾವೇರಿ ನದಿ ಮುಚ್ಚುತ್ತಿದ್ದರೂ ತಹಸೀಲ್ದಾರ್ ಅವರಾಗಲೀ, ಸಂಬಂಧಪಟ್ಟ ಆರ್ಐ, ವಿ.ಐ.ಗಳಾಗಲಿ ಯಾವುದೇ ಕ್ರಮ ಜರುಗಿಸದೇ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದಿನನಿತ್ಯ ಅಧಿಕಾರಿಗಳು ಹೆದ್ದಾರಿ ಸೇತುವೆ ಪಕ್ಕದಲ್ಲೇ ಓಡಾಡುತ್ತಾರೆ. ನದಿಯಿಂದ ಮಣ್ಣು ಬಗೆದು ನದಿ ಮುಚ್ಚಿ ಒತ್ತುವರಿ ಮಾಡಿಕೊಂಡಿರುವುದು ಎದ್ದು ಕಾಣುತ್ತಿದೆ. ಈ ವಿಷಯಗಳು ಅಧಿಕಾರಿಗಳ ಗಮನಕ್ಕೆ ಬಂದರೂ ಚಕಾರ ಎತ್ತುತ್ತಿಲ್ಲ ಏಕೆ. ಇದಕ್ಕೂ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಲಾಢ್ಯರು ಇಟಾಚಿಯನ್ನೇ ಬಳಸಿ ಕಾವೇರಿ ನದಿಯನ್ನೇ ಗುಂಡಿಗಳನ್ನಾಗಿ ಮಾಡಿ ಒತ್ತುವರಿ ಮಾಡಿಕೊಂಡಿದ್ದರೂ ಕಾನೂನು ಕ್ರಮಕೈಗೊಳ್ಳದೇ ಉದಾಸೀನ, ಜಾಣ ಮೌನಕ್ಕೆ ಶರಣಾಗಿರುವ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಡೀಸಿ ಡಾ.ಕುಮಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಸ್ವಾರ್ಥ ಸಾಧನೆಗಾಗಿ ಕಾವೇರಿ ನದಿಯನ್ನೇ ಒತ್ತುವರಿ ಮಾಡಿಕೊಂಡು ದಿಕ್ಕನ್ನೇ ತಪ್ಪಿಸಿರುವವರ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಎಷ್ಟು ಬಫರ್ ಜೋನ್ಗಳಿವೆ ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ಹೋರಾಟ ರೂಪಿಸಲಾಗುವುದು ಎಂದು ಪಾಪು ಎಚ್ಚರಿಸಿದ್ದಾರೆ.