ಕನ್ನಡಪ್ರಭ ವಾರ್ತೆ ಇಳಕಲ್ಲಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಸರಣಿ ಕೊಲೆಗಳು ನಾಗರಿಕ ಸಮಾಜದಲ್ಲಿ ಭೀತಿ ಹುಟ್ಟಿಸಿದೆ. ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ದೃಶ್ಯ ಮಾಧ್ಯಮಗಳು ನೈಜ ವರದಿ ಮಾಡಬೇಕು ಎಂದು ಇಳಕಲ್ಲಿನ ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ ತಿಳಿಸಿದರು.
ಎಲ್ಲಾ ಜಾತಿ ಜನಾಂಗದ ಯುವತಿಯರೂ ಇದಕ್ಕೆ ಬಲಿಪಶುಯಾಗಿರುವುದು ಕಟು ಸತ್ಯವಾಗಿದ್ದು, ಆದರೆ ಮಾಧ್ಯಮಗಳು ಒಂದು ಸಮಾಜವನ್ನು ಗುರಿಯಾಗಿಸಿ ವರದಿ ಮಾಡುತ್ತಿರುವುದು ನೋವಾಗಿದೆ. ಕಾರಣ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಮತ್ತು ನೈಜ ಸುದ್ದಿ ಬಿತ್ತರಿಸುವಂತೆ ಸರ್ಕಾರ ಮಾಧ್ಯಮಗಳಿಗೆ ನಿರ್ದೆಶನ ಮಾಡಬೇಕು ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ, ಗುಲ್ನಾಜ್ ಬೇಪಾರಿ, ಆಯೀಶಾ ತಹಸೀಲ್ದಾರ್, ಜಿ.ಐ,ಓ ರಾಜ್ಯ ಹೊಣೆಗಾರ ಸೀಮಾ ಹುಮ್ನಾಬಾದ, ಜಮಾಅತೆ ಇಸ್ಲಾಮಿ ವಿಭಾಗೀಯ ಸಂಚಾಲಕ ಮೆಹಬೂಬ ಆಲಂ ಬಡಗನ್, ಸ್ಥಾನೀಯ ಅಧ್ಯಕ್ಷ ಸಯೀದ್ ಅಹ್ಮದ ಕೊತ್ವಾಲ್, ಎಸ್.ಐ.ಒ ರಾಜ್ಯ ಕಾರ್ಯಕಾರ್ಶಿ ಮುಹ್ಮದ ಪೀರ್ ಲಟಗೇರಿ, ಅಬ್ದುಲ್ ಗಫಾರ ತಹಶೀಲ್ದಾರ್, ಹಬಿಬುಲ್ಲಾಹ ತಾವರಗೇರಿ, ಹುಸೇನಬಾಷಾ ಸೂಳಿಭಾವಿ, ಮುಹ್ಮದ ಗೌಸ್ ಗಡಾದ, ಮುರ್ತುಜಾ ಕಾಕಬಾಳ ಮತ್ತಿತರು ಹಾಜರಿದ್ದರು.