ಸ್ವಯಂ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಿ

KannadaprabhaNewsNetwork |  
Published : Oct 21, 2023, 12:30 AM IST
ಮಮ | Kannada Prabha

ಸಾರಾಂಶ

ವಿದ್ಯಾವಂತ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಉದ್ಯೋಗಾವಕಾಶ ವಿರಳವಾಗಿವೆ. ಸರ್ಕಾರಿ ಉದ್ಯೋಗದ ವ್ಯಾಮೋಹಕ್ಕೆ ಬಿದ್ದಿರುವ ಬಹುತೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದರೆ ವಿಶ್ವದ ನಂ.1 ಶ್ರೀಮಂತರೆಲ್ಲರೂ ತಮ್ಮ ವೃತ್ತಿ ಜೀವನದಲ್ಲಿ ಒಂದಿಲ್ಲೊಂದು ಸ್ವಯಂ-ಉದ್ಯೋಗ ಆರಂಭಿಸಿಯೇ ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ಇನ್ನಾದರೂ ದೇಶದ ಯುವಕರು ಯಾವುದಾದರೊಂದು ಸ್ವಯಂ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಬ್ಯಾಂಕ್ ಆಫ್ ಬರೋಡಾ ತರಬೇತಿ ಕೇಂದ್ರದ ಜಿಲ್ಲಾ ಸಂಘಟಕಿ ಮಂಜುಳಾ ಜಯಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ವಿದ್ಯಾವಂತ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಉದ್ಯೋಗಾವಕಾಶ ವಿರಳವಾಗಿವೆ. ಸರ್ಕಾರಿ ಉದ್ಯೋಗದ ವ್ಯಾಮೋಹಕ್ಕೆ ಬಿದ್ದಿರುವ ಬಹುತೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದರೆ ವಿಶ್ವದ ನಂ.1 ಶ್ರೀಮಂತರೆಲ್ಲರೂ ತಮ್ಮ ವೃತ್ತಿ ಜೀವನದಲ್ಲಿ ಒಂದಿಲ್ಲೊಂದು ಸ್ವಯಂ-ಉದ್ಯೋಗ ಆರಂಭಿಸಿಯೇ ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ಇನ್ನಾದರೂ ದೇಶದ ಯುವಕರು ಯಾವುದಾದರೊಂದು ಸ್ವಯಂ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಬ್ಯಾಂಕ್ ಆಫ್ ಬರೋಡಾ ತರಬೇತಿ ಕೇಂದ್ರದ ಜಿಲ್ಲಾ ಸಂಘಟಕಿ ಮಂಜುಳಾ ಜಯಪ್ಪ ಕರೆ ನೀಡಿದರು.

ಪಟ್ಟಣದ ಸ್ನೇಹಸದನ ಟ್ರಸ್ಟ್, ಸಮಗ್ರ ಸಮಾಜ ಕರ‍್ಯ ನಿರ್ವಹಣಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ-ಉದ್ಯೋಗದ ಕುರಿತು ಯುವಕರಿಗೆ ಏರ್ಪಡಿಸಿದ್ದ ವಿವಿಧ ತರಬೇತಿಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪಾಲಕರಿರಲಿ ಅಥವಾ ಸರ್ಕಾರವಿರಲಿ ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಗಳು ಉದ್ಯೋಗ ನೀಡುವ ಭರವಸೆ ಮೇಲೆ ಶಿಕ್ಷಣ ನೀಡುತ್ತಿರುವ ಉದಾಹರಣೆಗಳಿಲ್ಲ. ವಿದ್ಯೆ ಕೊಟ್ಟವರು ಉದ್ಯೋಗ ಕೊಡಬೇಕೆಂಬ ನಿಯಮಗಳಿಲ್ಲ. ಶಿಕ್ಷಣವಂತರನ್ನಾಗಿಸುವುದಷ್ಟೇ ಸರ್ಕಾರದ ಕೆಲಸ, ಸ್ನಾತಕೋತ್ತರ ಪದವೀಧರರಿಗೂ ಸಹ ಉದ್ಯೋಗ ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವವರು ಸ್ವಯಂ ಉದ್ಯೋಗದ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು.

ಬ್ಯಾಂಕ್‌ಗಳ ಹಣಕಾಸಿನ ಬೆಂಬಲದೊಂದಿಗೆ ಗ್ರಾಮೀಣ ಪ್ರದೇಶದಲ್ಲಿನ ಸ್ವ-ಸಹಾಯ ಗುಂಪುಗಳು ಇಂದು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿವೆ, ಇಂತಹ ಹತ್ತು ಹಲವು ಕ್ಷೇತ್ರಗಳಲ್ಲಿ ಬ್ಯಾಂಕ್‌ಗಳ ಸಹಕಾರದೊಂದಿಗೆ ವೇಗವಾಗಿ ಪ್ರಗತಿ ಕಾಣುತ್ತಿವೆ. ವಿದ್ಯಾವಂತ ಯುವಕರಿಗೆ ಉದ್ಯಮಗಳನ್ನು ಆರಂಭಿಸಲು ಬ್ಯಾಂಕ್‌ಗಳು ಸಾಲ ಸೌಲಭ್ಯ ಆರಂಭಿಸಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಸ್ವಯಂ ಉದ್ಯೋಗವು ಯುವಕರ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ನೀಡದಿರಬಹುದು. ಆದರೆ ಕೆಲಸವಿಲ್ಲದೇ ನಿರುದ್ಯೋಗಿಗಳು ಬೇಸರಗೊಳ್ಳದೇ ಉದ್ಯಮಿಗಳಾಗುವತ್ತ ಯೋಚಿಸಬೇಕು. ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆಗಳಿರಬಹುದು. ಅದನ್ನು ಕ್ರಮೇಣವಾಗಿ ನಿವಾರಿಸಿಕೊಳ್ಳಬೇಕು. ವ್ಯಾಪಾರ-ವಹಿವಾಟಿನಿಂದ ಬದಲಾದ ಯಶಸ್ವಿ ಉದ್ಯಮಿಗಳಿಗೇನು ಕೊರತೆಯಿಲ್ಲ. ಆದರೆ ನಾವು ಮಾಡುವ ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿರಬೇಕು ಎಂದರು.

ಯಾರಿಗೂ ಹೊರೆಯಾಗದಂತೆ ₹30 ಸಾವಿರದೊಳಗೆ ಮಾಡಬಹುದಾದ ಕೃಷಿ, ಹೈನುಗಾರಿಕೆ, ಎಲೆಕ್ಟ್ರಿಶಿಯನ್, ಮತ್ಸ್ಯೋದ್ಯಮ, ಜೇನು ಸಾಕಾಣಿಕೆ, ಗುಡಿ ಕೈಗಾರಿಕೆ ಇತರ ಸ್ವಯಂ ಉದ್ಯೋಗಗಳ ಕುರಿತು ಮಾಹಿತಿ ನೀಡಿ, ಆಸಕ್ತ ಯುವಕರು ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ರೂಪಾ, ನಿರ್ದೇಶಕಿ ಗ್ಲೋರಿಯಾ ತೆರೆಸಿಟಾ, ಆರೋಗ್ಯ ವಿಭಾಗದ ಸಂಯೋಜಕಿ ಅಚಲಾ, ಸಂಯೋಜಕರಾದ ಈರಣ್ಣ ಮಾಸಣಗಿ, ಎಲ್.ಶಿವಪ್ಪ, ಯುವಕರಾದ ಫಕ್ಕೀರಪ್ಪ ಮಾಳಪ್ಪನವರ, ಸೋಮೇಶ ನಾಯಕ, ಮಾಂತೇಶ ಕಳಕ್ಕನವರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 42 ಯುವಕರು ಉಪಸ್ಥಿತರಿದ್ದರು. ಕುಟೀರದ ಮಕ್ಕಳು ಪ್ರಾರ್ಥನೆ ನೆರವೇರಿಸಿದರು. ಸಂಯೋಜಕಿ ಸುವರ್ಣಾ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ