ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿ.ಮಾದೇಗೌಡ ಔಷಧ ವಿದ್ಯಾಲಯ ಕಿರುಗಾವಲು ಮತ್ತು ಭಾರತಿ ಔಷಧ ವಿದ್ಯಾಲಯ ಭಾರತೀನಗರ ವತಿಯಿಂದ ನಡೆದ ಕನ್ನಡ ಉತ್ಸವದಲ್ಲಿ ಮಾತನಾಡಿ, ರಾಜ್ಯದಲ್ಲೇ ಅತಿಹೆಚ್ಚು ಕನ್ನಡ ಮಾತನಾಡುವ ಜನತೆಯನ್ನು ಮಂಡ್ಯ ಜಿಲ್ಲೆ ಹೊಂದಿದೆ. ಬೇರೆ ಜಿಲ್ಲೆಗಳಿಗಿಂತ ಈ ಜಿಲ್ಲೆ ಕಲೆ, ಸಂಸ್ಕೃತಿಯಲ್ಲಿ ಮಾದರಿಯಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆ ರಾಮಾಯಾಣದಲ್ಲಿಯೂ ಕೂಡ ಸೇರ್ಪಡೆಯಾಗಿದ್ದು, ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದುವ ಮೂಲಕ ಶ್ರೀಮಂತ ಭಾಷೆಯಾಗಿ ಹೊರಹೊಮ್ಮುತ್ತಿದೆ ಎಂದರು.ನಿವೃತ್ತ ಮುಖ್ಯಶಿಕ್ಷಕ ಪ್ರೊ.ಎಂ.ಮಾಯಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆ ಪರಭಾಷೆ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡ ಭಾಷೆಯನ್ನು ಕ್ಷೀಣಿಸುವಂತೆ ಮಾಡುತ್ತಿದ್ದಾರೆ. ಕನ್ನಡ ಭಾಷೆ ಉಳಿಸಲು ಯುವ ಜನತೆ ನಾಡು- ನುಡಿ ಭಾಷೆಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಭಾರತೀ ಔಷಧ ವಿದ್ಯಾಲಯದ ಪ್ರಾಂಶುಪಾಲ ಡಾ.ಡಿ.ಬಾಲಸುಭ್ರಮಣ್ಯಂ, ಕಿರುಗಾವಲು ಜಿ.ಮಾದೇಗೌಡ ಔಷಧ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್.ಜಗದೀಶ್, ನರ್ಸಿಂಗ್ ಕಾಲೇಜಿನ ಮಹೇಶ್ಕುಮಾರ್ ಜಿ.ಲೋನಿ, ಡಾ.ಶಾಂತಕುಮಾರ್ ಸೇರಿದಂತೆ ಹಲವರಿದ್ದರು.