ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಎಲ್ಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್ಆರ್ಸಿ) ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಮಾಡಿರುವ ರೈತರ ಸಂಖ್ಯೆ, ಬೆಳೆ ಸಾಲ ಪಡೆದಿರುವವರ ಸಂಖ್ಯೆ ಹಾಗೂ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿರುವ ರೈತರ ಸಂಖ್ಯೆಯ ಕುರಿತು ತಾಲೂಕು ಹಾಗೂ ಬ್ಯಾಂಕ್ವಾರು ನಿಖರ ಅಂಕಿ-ಅಂಶಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಬೆಳೆ ಸಾಲ ಅಥವಾ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರು ಸಲ್ಲಿಸಿರುವ ಅರ್ಜಿಗಳಲ್ಲಿ ಯಾವುದೇ ಅರ್ಜಿ ತಾಂತ್ರಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ತಿರಸ್ಕೃತವಾಗಿದ್ದರೆ, ತಿರಸ್ಕಾರಕ್ಕೆ ನಿಖರ ಕಾರಣಗಳನ್ನು ಬ್ಯಾಂಕ್ವಾರು ಹಾಗೂ ಪ್ರಕರಣವಾರು ಪರಿಶೀಲಿಸಿ, ತಿರಸ್ಕಾರವು ನಿಯಮಾನುಸಾರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.ಸಾಮಾನ್ಯ ಪರಿಸ್ಥಿತಿಗಿಂತ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದ್ದು, ಬ್ಯಾಂಕುಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೇವಲ ರೈತರು ಅರ್ಜಿ ಸಲ್ಲಿಸುವುದನ್ನು ಕಾಯದೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮತ್ತು ನೋಂದಣಿ ಅಭಿಯಾನಗಳನ್ನು ನಡೆಸಿ ಅರ್ಹ ರೈತರನ್ನು ಸ್ವಯಂಪ್ರೇರಿತವಾಗಿ ತಲುಪಬೇಕು ಎಂದರು.
ಪಿಎಂಜೆಜೆವೈ, ಪಿಎಂಎಸ್ಬಿವೈ ಹಾಗೂ ಎಪಿವೈ ಯೋಜನೆಗಳ ಪ್ರಗತಿಯನ್ನು ವಿಶೇಷವಾಗಿ ಪರಿಶೀಲಿಸುವಂತೆ ಸೂಚಿಸಿದ ಅವರು, ಪ್ರತಿ ಬ್ಯಾಂಕ್ ಹಾಗೂ ಇಲಾಖೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಮಾಸಿಕ ಪ್ರಗತಿ ದಾಖಲಿಸಬೇಕು. ಗ್ರಾಪಂ ಮತ್ತು ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರನ್ನು ಯೋಜನೆಗಳಿಗೆ ನೋಂದಾಯಿಸುವುದು. ಎಪಿವೈ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗೈರಿನ ಬಗ್ಗೆ ಸಿಇಒ ಅಸಮಾಧಾನ