​ಸರ್ಕಾರಿ ಸೌಲಭ್ಯ ಅರ್ಹರಿಗೆ ಮಾತ್ರ ತಲುಪಿಸಿ: ಸಂಸದೆ

KannadaprabhaNewsNetwork |  
Published : Sep 18, 2026, 03:30 AM IST
  17 ಜೆ.ಜಿ.ಎಲ್.ಆರ್  ಚಿತ್ರ-1)‌ ಹೆಮ್ಮನಬೇತೂರು ಗ್ರಾಮದಲ್ಲಿ   ಅಹವಾಲುಗಳನ್ನು ಸ್ವೀಕರಿಸುತ್ತಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ.17 ಜೆ.ಜಿ.ಎಲ್.ಆರ್  ಚಿತ್ರ-2)‌ ಹೆಮ್ಮನಬೇತೂರು ಗ್ರಾಮದಲ್ಲಿ   ನಿವಾಸಿ ಎ.ಕೆ. ಮಹಾಂತೇಶ ಎಂಬುವವರು ತಮ್ಮ ಶೋಚನೀಯ ಸ್ಥಿತಿಯಲ್ಲಿರುವ ಮನೆಯ ಭಾವಚಿತ್ರವನ್ನು ತೋರಿಸಿದ ಮನೆಗೆ ಸಂಸದರು ಖುದ್ದಾಗಿ ಮಹಾಂತೇಶ ಅವರ ಮನೆಗೆ ತೆರಳಿ ವಾಸ್ತವ ಸ್ಥಿತಿಯನ್ನು ವೀಕ್ಷಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ. | Kannada Prabha

ಸಾರಾಂಶ

ಜನಸಾಮಾನ್ಯರು ಮತ್ತು ಅಧಿಕಾರಿಗಳ ನಡುವಿನ ಆಡಳಿತಾತ್ಮಕ ಅಂತರವನ್ನು ಕಡಿಮೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನಾ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸುವ ಉದ್ದೇಶದಿಂದ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

- ಹೆಮ್ಮನಬೇತೂರು, ಹುಲಿಕಟ್ಟೆಯಲ್ಲಿ ''''ಸಂಸದರ ನಡೆ ಗ್ರಾಮಗಳ ಕಡೆ'''', ಪ್ರಜಾಸ್ಪಂದನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಜಗಳೂರು

ಜನಸಾಮಾನ್ಯರು ಮತ್ತು ಅಧಿಕಾರಿಗಳ ನಡುವಿನ ಆಡಳಿತಾತ್ಮಕ ಅಂತರವನ್ನು ಕಡಿಮೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನಾ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸುವ ಉದ್ದೇಶದಿಂದ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ಮಾಯಕೊಂಡ ಕ್ಷೇತ್ರದ ಹೆಮ್ಮನಬೇತೂರು ಹಾಗೂ ಹುಲಿಕಟ್ಟೆ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ''''ಸಂಸದರ ನಡೆ ಗ್ರಾಮಗಳ ಕಡೆ'''' ಹಾಗೂ ‘ಪ್ರಜಾ ಸ್ಪಂದನ’ ಕಾರ್ಯಕ್ರಮವನ್ನು ದಾವಣಗೆರೆ ತಾಲೂಕಿನ ಕಡೆಯ ಹಾಗೂ ಜಗಳೂರು ತಾಲೂಕಿನ ಗಡಿಗ್ರಾಮ ಹೆಮ್ಮನಬೇತೂರಿನಲ್ಲಿ ಉದ್ಪಾಟಿಸಿ ಅವರು ಮಾತನಾಡಿದರು.

ಮನೆ ಬಾಗಿಲಿಗೆ ಸೇವೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಜಾಸೇವಾ ಕಾರ್ಯಕ್ರಮದ ಮಾದರಿಯಲ್ಲಿ, ಗ್ರಾಮೀಣ ಬಡವರು ಹಾಗೂ ವಿಕಲಚೇತನರಿಗೆ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಿಪಿಎಲ್ ಕಾರ್ಡ್, ಪಿಂಚಣಿ, ಅಂಗವಿಕಲರ ಮಾಶಾಸನ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಸಾಧ್ಯವಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗುವುದು. ಕಾಲಾವಕಾಶ ಬೇಕಾಗುವ ಕೆಲಸಗಳಿಗೆ ನಿಗದಿತ ಗಡುವು ನೀಡಿ ಅಧಿಕಾರಿಗಳಿಂದ ಕೆಲಸ ಮಾಡಿಸಲಾಗುವುದು ಎಂದರು.

ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ವ್ಯವಸ್ಥೆ ಮತ್ತು ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಅಭಾವ, ಪಿಂಚಣಿ ವಿಳಂಬ, ಆಶ್ರಯ ಮನೆಗಳು, ಖಾತೆ ಬದಲಾವಣೆ ಹಾಗೂ ಇ-ಸ್ವತ್ತು ಸಮಸ್ಯೆಯ ಕುರಿತು ಅಧಿಕಾರಿಗಳು ಕ್ರಮವಹಿಸುವರು ಎಂದರು.

ಬಡ ನಿವಾಸಿ ಮನೆಗೆ ಭೇಟಿ:

ಕಾರ್ಯಕ್ರಮದ ವೇಳೆ ಸ್ಥಳೀಯ ನಿವಾಸಿ ಎ.ಕೆ.ಮಹಾಂತೇಶ ತಮ್ಮ ಶೋಚನೀಯ ಸ್ಥಿತಿಯಲ್ಲಿರುವ ಮನೆ ಭಾವಚಿತ್ರ ತೋರಿಸಿ, ಹೊಸ ಮನೆ ನಿರ್ಮಾಣಕ್ಕೆ ಅನುದಾನ ಕೋರಿದರು. ಈ ವೇಳೆ ಸಂಸದರು ಖುದ್ದಾಗಿ ಮಹಾಂತೇಶ ಅವರ ಮನೆಗೆ ತೆರಳಿ ವಾಸ್ತವ ಸ್ಥಿತಿ ವೀಕ್ಷಿಸಿದರು. ಕುಟುಂಬದ ಕಷ್ಟಕ್ಕೆ ಮಿಡಿದ ಡಾ.ಪ್ರಭಾ ಮಲ್ಲಿಕಾರ್ಜುನ್, ಸರ್ಕಾರದ ವಸತಿ ಯೋಜನೆಯಡಿ ತಕ್ಷಣವೇ ಮನೆ ಮಂಜೂರು ಮಾಡಿಸುವುದಲ್ಲದೇ, ಮನೆ ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಹಣಕಾಸಿನ ಸಹಾಯವನ್ನೂ ನೀಡುವುದಾಗಿ ಭರವಸೆ ನೀಡಿ, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.

ಪಿಎಂ ಫಂಡ್‌ನಿಂದ ಈಗಾಗಲೇ ₹1.25 ಕೋಟಿಯನ್ನು ಸುಮಾರು 60 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗಿದೆ. ಎಸ್‌ಎಸ್‌ ಕೇರ್ ಟ್ರಸ್ಟ್ ವತಿಯಿಂದ ಉಚಿತ ಡಯಾಲಿಸಿಸ್ ಹಾಗೂ ಕಣ್ಣಿನ ಪರೀಕ್ಷೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಎಸ್‌ಎಸ್‌ ಜನಕಲ್ಯಾಣ ಟ್ರಸ್ಟ್ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್, ಪಿಂಚಣಿ, ಅಂಗವಿಕಲರ ಮಾಶಾಸನ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಸಾಧ್ಯವಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗುವುದು ಎಂದರು.

​ಸಣ್ಣ ಮಕ್ಕಳ ಆಧಾರ್ ವಿವರ ತಿದ್ದುಪಡಿಗೆ ಕೇಂದ್ರಮಟ್ಟದ ಪ್ರಕ್ರಿಯೆಗಳ ಅಗತ್ಯವಿದೆ. ಇಂತಹ ತೊಡಕುಗಳನ್ನು ರಾಜ್ಯ ಮಟ್ಟದಲ್ಲೇ ವಿಕೇಂದ್ರೀಕರಣಗೊಳಿಸಿ ಪರಿಹರಿಸುವ ಬಗ್ಗೆ ಚರ್ಚಿಸಲಾಗುವುದು. ಅಧಿಕಾರಿಗಳು ಸರ್ಕಾರದ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಿ, ನಿಗದಿಪಡಿಸಿದ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲುಗಳನ್ನು ಇತ್ಯರ್ಥಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಹೆಮ್ಮನಬೇತೂರು ಗ್ರಾಮ ಪಂಚಾಯಿತಿಯ ವಿವಿಧ ಹಳ್ಳಿಗಳ ನೂರಾರು ಮಹಿಳೆಯರು, ಪುರುಷರು, ಮನೆ ಇಲ್ಲಾ, ಬಿಪಿಎಲ್‌ ಕಾರ್ಡ ಇಲ್ಲಾ, ನಕಾಶೆ ದಾರಿ ಇದ್ದರೂ ಹೊಲಗಳಿಗೆ ಸಂಚರಿಸಲು ಬಿಡುತ್ತಿಲ್ಲ, ವಿದ್ಯುತ್‌ ಸಂಪರ್ಕ ಕಲಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸಂಸದರು 1 ಗಂಟೆ ಆಲಿಸಿ, ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಆಲದಕಟ್ಟಿ, ದಾವಣಗೆರೆ ತಹಸೀಲ್ದಾರ್‌ ರಾಜೇಶ್‌, ಇ.ಒ. ರಾಮಬೋವಿ, ಕಾರ್ಯನಿರ್ವಾಹಕ ಎಂಜಿನಿಯರ್ ಶಿವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಎಡಿಎಲ್‌ಆರ್‌ ಕಸ್ತೂರಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಪ್ರಕಾಶ್, ಮಾಜಿ ಎಪಿಎಂಸಿ ಅಧ್ಯಕ್ಷ ಚಂದ್ರಣ್ಣ, ಹುಲಿಕಟ್ಟೆ ಶಿವರುದ್ರಪ್ಪ, ಗ್ರಾಮದ ಮುಖಂಡರಾದ ಗೌಡ್ರು ಬಸವರಾಜು, ಬಕ್ಕೇಶ್‌, ಎಸ್.ಎಸ್‌. ತಿಪ್ಪೇಸ್ವಾಮಿ, ಎಸ್‌.ಎಸ್‌. ಬಕ್ಕೇಶ್‌, ಬಿ.ಎಂ. ಶಿವಕುಮಾರಯ್ಯ, ಜಿ.ಟಿ.ಶಿವಕುವಕುಮಾರ್‌, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

- - -

-17ಜೆ.ಜಿ.ಎಲ್.ಆರ್‌ಚಿತ್ರ1: ಹೆಮ್ಮನಬೇತೂರಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿದರು.

-17ಜೆ.ಜಿ.ಎಲ್.ಆರ್ ಚಿತ್ರ2: ಹೆಮ್ಮನಬೇತೂರಲ್ಲಿ ನಿವಾಸಿ ಎ.ಕೆ. ಮಹಾಂತೇಶ ಮನೆಗೆ ಭೇಟಿ ನೀಡಿದ ಸಂಸದೆ ಡಾ.ಪ್ರಭಾ ವಾಸ್ತವ ಪರಿಸ್ಥಿತಿ ಪರಿಶೀಲಿಸಿ, ನೆರವು ಕಲ್ಪಿಸುವ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಿತಾಂಶದ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನಾ ಸಭೆ
ನಾಳೆ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ಸ್ಮರಣೆ: ಲಿಂಗರಾಜು