ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಂಕರಘಟ್ಟದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಡಿ.ಮಂಜುನಾಥ ಅವರು ನೀಡಿದ್ದ ದಿ.ಎಚ್.ಇಬ್ರಾಹಿಂ ಸ್ಮಾರಕ ದತ್ತಿ ನಿಧಿ ಕಾರ್ಯಕ್ರಮದ ಆಶಯದಂತೆ ಸಂವಿಧಾನ-ಭಾವೈಕ್ಯತೆ ವಿಚಾರವಾಗಿ ಉಪನ್ಯಾಸ ನೀಡಿದರು.
ಸಂವಿಧಾನ ವೈಯುಕ್ತಿಕ ಕಾನೂನುಗಳನ್ನು ಎಲ್ಲರಿಗೂ ನೀಡಿದೆ. ಹೆಣ್ಣು ಮಕ್ಕಳಿಗೆ ಸಮಾನತೆ ಅವಕಾಶ ನೀಡಿದೆ. ಸಾಮರಸ್ಯದ ಮೂಲಕ ಸರಿಪಡಿಸಿಕೊಳ್ಳಬೇಕು ಹಾಗೂ ಅಪರಾಧವನ್ನು ಮನ್ನಿಸಬಾರದು. ಒಡೆದಾಳುವ ನೀತಿ ಅನುಸರಿಸುವುದು ಸರಿಯಲ್ಲ. ಜಗತ್ತಿನಲ್ಲಿ ಹೆಣ್ಣು, ಗಂಡು ಸಮಾನ ಸಂಖ್ಯೆಯಲ್ಲಿದ್ದೇವೆ. ಜಗತ್ತು ಬದುಕಿದ್ದರೆ ಅದು ಹೆಂಗಸರಿಂದ. ವಿವೇಕ ಇಬ್ಬರಲ್ಲೂ ಇರಬೇಕು. ಇಬ್ಬರಲ್ಲಿರುವ ಹೆಣ್ಣುತನದಿಂದ ಸಹಬಾಳ್ವೆ, ಭಾವೈಕ್ಯತೆ ಉಳಿದಿದೆ ಎಂದು ವಿವರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿ ಹಾಗೂ ಡಿ.ದೇವರಾಜ ಅರಸು ಭೂ ಸುಧಾರಣೆ ಕಾನೂನು ತಂದು ಉಳುವವನೆ ಹೊಲದೊಡೆಯ ಎನ್ನುವ ನೀತಿ ಮೂಲಕ ಅನೇಕರಿಗೆ ಭೂಮಿ ಒಡೆತನ ದೊರೆಯಿತು ಎಂದು ಹೇಳಿದರು.
ಭದ್ರಾವತಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಡಿ.ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಲಯ ಪಾಲಕರಾದ ಸಿ.ಎಂ.ರಮೇಶ್, ದಾಕ್ಷಾಯಿಣಿ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಎನ್. ಚಂದ್ರಕಲಾ, ಅಸ್ಮತ್, ಎಂ.ಎಂ. ಸ್ವಾಮಿ, ಭೈರಾಪುರ ಶಿವಪ್ಪಗೌಡ, ಎಚ್.ತಿಮ್ಮಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪುಷ್ಪಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿ, ಯೋಗಿತಾ ನಿರೂಪಿಸಿ, ಮಮತಾ ವಂದಿಸಿದರು.