ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಸೋಮವಾರ ಪಟ್ಟಣದ ಹೋಟೆಲೊಂದರಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಗನಿಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪನವರು ಬಂಡಾಯ ಅಭ್ಯರ್ಥಿಯಾಗಿಲ್ಲ. ಕಾಂತೇಶಗೆ ಹಾವೇರಿಯಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಕೊನೆಗೆ ಕೊರಳು ಕೊಯ್ದಿದ್ದಾರೆ ಎಂದು ಆರೋಪಿಸಿದರು.ಹಿಂದುತ್ವ ಮತ್ತು ಹಿಂದುಳಿದವರ ಹಿತಕ್ಕಾಗಿ ಕೆ.ಎಸ್.ಈಶ್ವರಪ್ಪನವರ ನಾಯಕತ್ವದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಸ್ಥಾಪನೆಯಾಗಿರುವ ನಮ್ಮದೇ ಒರಿಜಿನಲ್ ಬಿಜೆಪಿ. ಈಗಲೂ ಕಾಲ ಮಿಂಚಿಲ್ಲ, ಬಿ.ವೈ.ರಾಘವೇಂದ್ರ ನಿವೃತ್ತಿಯಾಗಿ ಈಶ್ವರಪ್ಪನವರಿಗೆ ಅವಕಾಶ ಮಾಡಿಕೊಟ್ಟು ಬಿ.ವೈ,ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಎಲ್ಲವೂ ಸರಿಹೋಗುತ್ತದೆ ಎಂದೂ ಆಗ್ರಹಿಸಿದರು.
ಹಿಂದುತ್ವವಾದಿಗಳಾದ ಸಿ.ಟಿ.ರವಿ, ಕಟೀಲು ಮತ್ತು ಹಿಂದುತ್ವದ ಫೈರ್ ಬ್ರಾಂಡ್ ಆಗಿರುವ ಅನಂತಕುಮಾರರನ್ನು ಕಡೆಗಣಿಸಿರುವ ಬಿಜೆಪಿ ಮೈಸೂರಿನಲ್ಲಿ ಪ್ರತಾಪಸಿಂಹರನ್ನು ಬಿಟ್ಟು ಮಹಾರಾಜರಿಗೆ ಮಣೆ ಹಾಕುವ ಅಗತ್ಯವೇ ಇರಲಿಲ್ಲ. ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮ ಮಕ್ಕಳಿಗೆ ಆದ್ಯತೆ ನೀಡಿರುವುದು ಮಾತ್ರವಲ್ಲ. ಕಾರ್ಯಕರ್ತರಿಂದ ಗೋ ಬ್ಯಾಕ್ ಎಂದು ಕಡೆಗಣಿಸಿದ್ದ ಶೋಭಾ ಕರಂದ್ಲಾಜೆಯವರಿಗೆ ಬೆಂಗಳೂರಿನಲ್ಲಿ ಟಿಕೆಟ್ ಕೊಡಿಸಿಲ್ಲವೇ ಎಂದೂ ಪತ್ರಕರ್ತರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ಹಿಂದೂ ಸಂಘಟನೆ ಮದನ್ ಗೋರ್ಕುಡೆ, ಕವಲೇದುರ್ಗ ಗ್ರಾಪಂ ಸದಸ್ಯ ರಾಘವೇಂದ್ರ, ಶಶಿಕುಂದರ್, ಪ್ರದೀಪ್ ಕೋಡೂರು, ಸಚಿನ್ ಗೌಡ ಗರ್ತಿಕೆರೆ ಸೇರಿ ಸುಮಾರು 25 ರಿಂದ 30 ಮಂದಿ ಯುವಕರಿದ್ದರು.