)
ಬಂಟ್ವಾಳ: ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ನಡೆಸುತ್ತಿರುವ ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವನ್ನು ಐಎಫ್ ಎ ಮತ್ತು ಟಾಟಾ ಸಂಸ್ಥೆ ಗುರುತಿಸಿರುವುದು ಶ್ಲಾಘನೀಯ ಕಾರ್ಯ ಎಂದು ಮಂಗಳೂರು ಸ್ವಸ್ತಿಕಾ ಬಿಸ್ ನೆಸ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ ಹೇಳಿದರು.
ತುಳುನಾಡಿನ ಪ್ರತೀ ವಸ್ತುಗಳು ಇತಿಹಾಸವನ್ನು ತಿಳಿಸುತ್ತದೆ, ಅದರಲ್ಲೂ ತೆಂಗಿನ ಗೆರಟೆ ಎನ್ನುವ ಚಿಕ್ಕವಸ್ತು ಮಾಡುವ ಇತಿಹಾಸದ ಪಾಠ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುವುದು ವಿಶೇಷ ಎಂದರು. ಐಎಫ್ ಎ ಕಾರ್ಯಕ್ರಮ ಸಂಯೋಜಕಿ ರುತ್ವಿಕಾ ಮಿಶ್ರಾ ಅವರು ಮಾತನಾಡಿದರು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ್ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಐಎಫ್ಎ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸ್ಪಷ್ಟ ನಿದರ್ಶನ ಎಂದ ಅವರು, ಕೇಂದ್ರದ ಸಹಯೋಗದಲ್ಲಿ ನಡೆಯವ ಮೂರು ಯೋಜನೆಗಳಿಗೆ ಐಎಫ್ ಎ ಅನುದಾನದ ನೆರವು ನೀಡುತ್ತಿದೆ ಎಂದರು.
ಐಎಫ್ಎ ಅನುದಾನದ ಮುಖೇನ ವಸ್ತುಪ್ರದರ್ಶನವನ್ನು ಆಯೋಜಿಸಿರುವ ಕ್ಯುರೇಟರ್ ಗಳಾದ ಮಧುಶ್ರೀ ಕಾಮಕ್ ಹಾಗೂ ಬ್ರಿಯನ್ ಡಿಸೋಜಾ ರವರು ಮಾತನಾಡಿ, ವಸ್ತುಪ್ರದರ್ಶನದ ಆಯೋಜನೆ ಕುರಿತಾದ ಹಿನ್ನೋಟ ಹಾಗೂ ಮುನ್ನೋಟಗಳನ್ನು ವಿವರಿಸಿದರು.ಶ್ರಿಯದಿತ್ ಪ್ರಾರ್ಥಿಸಿದರು. ಸಿಂಧೂರಾ ಟಿ.ಪಿ. ಸ್ವಾಗತಿಸಿ, ವಂದಿಸಿದರು. ಡಾ.ಆಶಾಲತಾ ಸುವರ್ಣ ಸಹಕರಿಸಿದರು.