ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರೂ ಪುಣ್ಯವಂತರು

KannadaprabhaNewsNetwork |  
Published : Oct 13, 2024, 01:01 AM IST
12ಕೆಡಿವಿಜಿ16-ದಾವಣಗೆರೆಯಲ್ಲಿ ಶನಿವಾರ ಸಾರ್ವಜನಿಕ ವಿಜಯ ದಶಮಿ, ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅಂಬು ಛೇದನ ನೆರವೇರಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. | Kannada Prabha

ಸಾರಾಂಶ

ಅನಾದಿಯಿಂದಲೂ ಭಾರತವು ತನ್ನ ಸಂಸ್ಕಾರ, ಪರಂಪರೆಯ ಕಾರಣದಿಂದಲೇ ವಿಶ್ವಗುರುವಾಗಿದೆ. ಇದೀಗ ಮತ್ತೆ ವಿಶ್ವಗುರು ಆಗುವತ್ತ ಸಾಗುತ್ತಿದೆ. ಅಂತಹ ಭೂಮಿಯಲ್ಲಿ ಜನಿಸಿದ ಎಲ್ಲರೂ ಪುಣ್ಯವಂತರು ಎಂದು ಕಣ್ವಕುಪ್ಪೆ ಗವಿ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಮತ್ತೆ ವಿಶ್ವಗುರು ಆಗುವತ್ತ ಭಾರತ-ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶ್ರೀಗಳು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅನಾದಿಯಿಂದಲೂ ಭಾರತವು ತನ್ನ ಸಂಸ್ಕಾರ, ಪರಂಪರೆಯ ಕಾರಣದಿಂದಲೇ ವಿಶ್ವಗುರುವಾಗಿದೆ. ಇದೀಗ ಮತ್ತೆ ವಿಶ್ವಗುರು ಆಗುವತ್ತ ಸಾಗುತ್ತಿದೆ. ಅಂತಹ ಭೂಮಿಯಲ್ಲಿ ಜನಿಸಿದ ಎಲ್ಲರೂ ಪುಣ್ಯವಂತರು ಎಂದು ಕಣ್ವಕುಪ್ಪೆ ಗವಿ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಹೈಸ್ಕೂಲ್ ಮೈದಾನದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಶನಿವಾರ ಸಂಜೆ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ, ವಿಶ್ವ ಹಿಂದು ಪರಿಷದ್‌ನಿಂದ ಹಮ್ಮಿಕೊಂಡಿದ್ದ ಅಂಬುಛೇದನ ಹಾಗೂ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ತಾಯಿಯು ದುಷ್ಕರನ್ನು ಸಂಹರಿಸಿ, ಪರಮ ಭಕ್ತರನ್ನು ಸಂರಕ್ಷಿಸಿದ ಪುಣ್ಯ ದಿನವೇ ವಿಜಯದಶಮಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಅಂಬುಛೇದನ ನೆರವೇರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸದಾ ವಿದ್ಯೆಯು ಹಣವಂತ, ಬುದ್ಧಿವಂತನಾಗಿದೆ. ಮಕ್ಕಳಿಗೆ ಮಾತೃಭಾಷೆಯ ಜೊತೆಗೆ ಇತರೆ ಭಾಷೆಗಳನ್ನೂ ಕಲಿಸಬೇಕು ಎಂದರು.

ವಿಹಿಂಪ ಹಿರಿಯ ಮುಖಂಡ ಕೆ.ಬಿ.ಶಂಕರ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಹಾರಿಕಾ ಮಂಜುನಾಥ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಮಲ್ಲಿಕಾರ್ಜುನ, ವಕೀಲರಾದ ಸಿ.ಪಿ.ಅನಿತಾ, ಚೇತನಾ ಶಿವಕುಮಾರ ಇತರರು ಇದ್ದರು.

- - - -12ಕೆಡಿವಿಜಿ16:

ದಾವಣಗೆರೆಯಲ್ಲಿ ಶನಿವಾರ ಸಾರ್ವಜನಿಕ ವಿಜಯ ದಶಮಿ, ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಂಬು ಛೇದನ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ತರಗತಿಯ ಪ್ರವೇಶಕ್ಕೆ ಇದ್ದ ವಯಸ್ಸು ಸಡಿಲ
ಅಕ್ರಮ ಸಂಬಂಧ ಕಾರಣ ಬಾಲಕನಿಂದ ಡಬಲ್‌ ಮರ್ಡರ್!