ಕನ್ನಡಪ್ರಭ ವಾರ್ತೆ ಬಾದಾಮಿ
ಮುಖ್ಯಾಧಿಕಾರಿ ಬಂದೇನವಾಜ ಡಾಂಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ಬಿಪಿ, ಸಕ್ಕರೆ ಕಾಯಿಲೆ, ಕ್ಷಯ ರೋಗದ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ವೈದ್ಯರು ತಪಾಸಣೆ ಮಾಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಿರಿಯ ಆರೋಗ್ಯ ನಿರಿಕ್ಷಕರು ಪುರಸಭೆ ಬಾದಾಮಿ
ಮಹೇಶ ಹಿರೇಮಠ ಮಾತನಾಡಿ, ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎಂದು ಹೇಳಿದರು. ಪುಲಿಕೇಶಿ ಆಸ್ಪತ್ರೆಯ ವೈದ್ಯ ಡಾ. ಸೋಮಶೇಖರ ಬಿರಾದಾರ ಮಾತನಾಡಿ, ಆರೋಗ್ಯ ಬಗ್ಗೆ ಮತ್ತು ಸ್ವಚ್ಛತೆ ಬಗ್ಗೆ ಮಾತನಾಡಿದರು. ಕೆ.ಎಚ್.ಪಿ.ಟಿ. ಸಮುದಾಯ ಸಂಯೋಜಕಿ ಭುವನೇಶ್ವರಿ ಕುಲಕರ್ಣಿ ಅವರು ಮಾತನಾಡಿ, ಟಿಬಿ ಸಾಂಕ್ರಾಮಿಕ ರೋಗವನ್ನು ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯ ಮೂಲಕ ೨೦೨೫ರ ವೇಳೆಗೆ ಟಿಬಿ ಮುಕ್ತ ಕರ್ನಾಟಕ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಉಚಿತ ಔಷಧಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಾಗರಾಜ್ ಕಾಚಟ್ಟಿ, ರೆಹಮಾನ್ ಕೆರಕಲಮಟ್ಟಿ, ಮುಕ್ತುಂ ತಾಂಬೂಳೆ, ಬಸವರಾಜ ತೀರ್ಥಪ್ಪನ್ನವರ. ವೀರಪುಲಿಕೇಶಿ ಆಯುರ್ವೇದ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ರಾಜೇಶ್ವರಿ ಮಸಗಿ, ತಾಲೂಕಾ ಒಕ್ಕೂಟದ ಅಧ್ಯಕ್ಷೆ ಇಮಾಂಬು ಚಂದನವರ, ಎಸ್.ಎಸ್. ಶಿರಶಿ ಹಾಗೂ ಪುರಸಭೆಯ ಸಿಬ್ಬಂದಿಗಳು, ಕಾರ್ಮಿಕರು ಭಾಗವಿಸಿದ್ದರು.
--೧೪ಬಿಡಿಎಂ೨