ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಬೇಕಿದೆ: ಪಂಡಿತಾರಾಧ್ಯ ಶ್ರೀ

KannadaprabhaNewsNetwork |  
Published : Feb 15, 2025, 12:31 AM IST
ಪೋಟೋ, 15ಎಚ್‌ಎಸ್‌ಡಿ4: ಸರ್ವೋದಯದೆಡೆಗೆ ಜಾಥಾ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಕೃತಜ್ಞತಾ ಹಾಗೂ ಲೆಕ್ಕಪತ್ರಗಳ ಪರಿಶೀಲನಾ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ  ದಿವ್ಯ ಸಾನ್ನಿಧ್ಯ  ಮಾತನಾಡಿದರು. | Kannada Prabha

ಸಾರಾಂಶ

ಸರ್ವೋದಯದೆಡೆಗೆ ಜಾಥಾ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಕೃತಜ್ಞತಾ ಹಾಗೂ ಲೆಕ್ಕಪತ್ರಗಳ ಪರಿಶೀಲನಾ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಕಡಿಮೆಯಾಗಿದ್ದು, ಬ್ಯಾನರ್ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ನಿರ್ಮಲ ಪರಿಸರ ನಾಶವಾಗುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಎಸ್.ಎಸ್. ರಂಗಮಂದಿರದಲ್ಲಿ ಜ.27ರಿಂದ 30 ರವರೆಗೆ ನಡೆದ ನಮ್ಮ ನಡೆಗೆ ಸರ್ವೋದಯದೆಡೆಗೆ ಜಾಥಾ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಕೃತಜ್ಞತಾ ಹಾಗೂ ಲೆಕ್ಕಪತ್ರಗಳ ಪರಿಶೀಲನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ, ರಾಜಕೀಯ ಕ್ಷೇತ್ರಗಳು ಯಶಸ್ಸಿಯಾದರೆ ಮಾತ್ರ ಸರ್ವೋದಯ ಜಾಥಾ ಯಶಸ್ವಿ ಕಾರ್ಯಕ್ರಮ ಆಗಲು ಸಾಧ್ಯ. ಯಾವುದೇ ಕಾರ್ಯಕ್ರಮ ಮಾಡಿದರೂ ಉಳಿತಾಯದ ದೃಷ್ಟಿಯನ್ನಿಟ್ಟುಕೊಂಡು ಕಾರ್ಯಕ್ರಮ ಸರಳ ಹಾಗೂ ಅರ್ಥಗರ್ಭಿತವಾಗಿ ನಡೆಯಬೇಕು. ಸರ್ವೋದಯ ಜಾಥಾ ಉದ್ದೇಶ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎನ್ನುವ ಆಶಯ ನಮ್ಮದಾಗಿತ್ತು. ಆದರೆ, ಜಾಥಾದ ದಾರಿಯುದ್ದಕ್ಕೂ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಮೊದಲ ಹೆಜ್ಜೆ ಇಡುವಾಗ ತಪ್ಪುಗಳಾಗುವುದು ಸಹಜ. ತಪ್ಪನ್ನು ತಿದ್ದುಕೊಂಡು ಸಂಘಟನೆ ಮಾಡಬೇಕಾಗಿದೆ ಎಂದರು.

ಯಾವುದೇ ಪ್ರಯೋಗಗಳು ಒಂದೇ ಸಾರಿ ಯಶಸ್ಸು ಕಾಣಲು ಅಸಾಧ್ಯ. ಮತ್ತೆ ಮತ್ತೆ ಆಗ್ತಾ ಹೋದಾಗ ಪರಿವರ್ತನೆ ಆಗಲು ಸಾಧ್ಯ. ಎಲ್ಲ ಊರುಗಳಲ್ಲೂ ಗುಟ್ಕಾ ಮುಕ್ತ, ಮದ್ಯಮುಕ್ತ ಊರುಗಳಾಗಬೇಕು. ಪ್ರತಿಯೊಬ್ಬ ರೈತರು ಸಾವಯವ ಕೃಷಿರಾಗಬೇಕು. ಈ ಪಾದಯಾತ್ರೆಯಲ್ಲಿ ಅನೇಕರು ಸಹಕಾರ ಮಾಡಿದ್ದೀರಿ ಅವರಿಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಸಂಘಟನೆ ಮಾಡಿದಾಗ ಮಾತ್ರ ಯಶಸ್ವಿ ಕಾರ್ಯಕ್ರಮ ಆಗಬಲ್ಲದು ಎಂದರು.

ಮಾಡಾಳ್‌ನ ರುದ್ರಮುನಿ ಸ್ವಾಮೀಜಿ ಮಾತನಾಡಿ, ಸರ್ವೋದಯದೆಡೆಗೆ ಪಾದಯಾತ್ರೆ ಪಂಚವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ತುಂಬಾ ಪರಿಣಾಮಕಾರಿಯಾಗಿತ್ತು. ರೈತರು ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ಊಟ ಮಾಡಿದಾಗ ಆರೋಗ್ಯ ಕಾಪಾಡಿದಂತಾಗುವುದು. ಕಳೆಯನ್ನೇ ಗೊಬ್ಬರವನ್ನಾಗಿ ಮಾಡಿಕೊಂಡಾಗ ಭೂಮಿ ಫಲವತ್ತತೆಯಾಗಲು ಸಾಧ್ಯ ಎಂದರು.

ಸೋಮಶೇಖರಪ್ಪ ಮಾತನಾಡಿ ಬದಲಾವಣೆಯ ಬೀಜಗಳು ಅಲ್ಲಲ್ಲೇ ಬಿತ್ತಬೇಕು. ಸಾವಯವ ಹಾಗೂ ಸಹಜ ಕೃಷಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಪ್ರತಿ ಗ್ರಾಮಗಳಲ್ಲೂ ಸರ್ವೋದಯದ ಘಟಕಗಳು ಪ್ರಾರಂಭ ಆಗಬೇಕು ಎಂದರು.

ಸಂತೇಬೆನ್ನೂರಿನ ಸಿರಾಜ್ ಅಹಮದ್ ಮಾತನಾಡಿ, ಇಂದು ಯಂತ್ರವೇ ನಮ್ಮನ್ನು ಆಳುತ್ತಿವೆ. ನಿಜಜೀವನವನ್ನು ಯಂತ್ರಗಳೇ ನಿಯಂತ್ರಿಸುವ ಕಾಲದಲ್ಲಿ ಬದುಕುತ್ತಿದ್ದೇವೆ. ಯಾಂತ್ರಿಕ ಜೀವನದಲ್ಲಿ ನಮ್ಮ ಧರ್ಮ, ಮಾನವೀಯ ಮೌಲ್ಯಗಳನ್ನು ಬಿಡಬಾರದು ಎಂದರು.

ಸಭೆಯಲ್ಲಿ ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಶಂಕರಲಿಂಗಪ್ಪ, ದೇವರಹಳ್ಳಿ ಬಸವರಾಜಪ್ಪ, ಗುಳ್ಳಿಹಳ್ಳಿ ಮಲ್ಲಿಕಾರ್ಜುನಪ್ಪ ಮಾತನಾಡಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?