ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು

KannadaprabhaNewsNetwork |  
Published : Oct 24, 2024, 12:46 AM ISTUpdated : Oct 24, 2024, 12:47 AM IST
22ಎಚ್ಎಸ್ಎನ್9 : ರಾಮನಾಥಪುರಕ್ಕೆ ಆಗಮಿಸಿದ ಕಾವೇರಿ ಜಾಗೃತಿ ರಥಯಾತ್ರೆ ಕಾವೇರಿ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿತು.  | Kannada Prabha

ಸಾರಾಂಶ

ಕಾವೇರಿ ನದಿ ತೀರದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ ನದಿಗಾಗಿ ಶುದ್ಧ ಮನಸ್ಸಿನಿಂದ ಎಲ್ಲರೂ ಸ್ವಚ್ಛತಾ ಬಗ್ಗೆ ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಕುಶಾಲನಗರ ಚಂದ್ರಮೋಹನ್ ಮನವಿ ಮಾಡಿದರು. ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ವಹ್ನಿಪುಕ್ಷರಣೆಯಲ್ಲಿ 132ನೇಯ ತಿಂಗಳ ಹುಣ್ಣಿಮೆಯ ಕಾವೇರಿ ಮಹಾ ಆರತಿಯನ್ನು ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಮತ್ತು ತಮಿಳುನಾಡು ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.

ರಾಮನಾಥಪುರ: ಕಾವೇರಿ ನದಿ ತೀರದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ ನದಿಗಾಗಿ ಶುದ್ಧ ಮನಸ್ಸಿನಿಂದ ಎಲ್ಲರೂ ಸ್ವಚ್ಛತಾ ಬಗ್ಗೆ ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಕುಶಾಲನಗರ ಚಂದ್ರಮೋಹನ್ ಮನವಿ ಮಾಡಿದರು.

ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ವಹ್ನಿಪುಕ್ಷರಣೆಯಲ್ಲಿ 132ನೇಯ ತಿಂಗಳ ಹುಣ್ಣಿಮೆಯ ಕಾವೇರಿ ಮಹಾ ಆರತಿಯನ್ನು ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಮತ್ತು ತಮಿಳುನಾಡು ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು. ಅಖಿಲ ಭಾರತ ಸನ್ಯಾಸಿ ಸಂಘ ಪ್ರಮುಖರಾದ ವೇದಾಂತನಂದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಯಾತ್ರೆಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ, ಹಾಸನ ಜಿಲ್ಲಾ ಕಾವೇರಿ ನದಿ ಸಮಿತಿ ಖಜಾಂಚಿ ರಘು, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!