ಪ್ರತಿಯೊಬ್ಬರೂ ಸಂವಿಧಾನದ ಆಶಯ ಪಾಲಿಸಿ: ಸತೀಶ್

KannadaprabhaNewsNetwork |  
Published : Sep 21, 2025, 02:00 AM IST
20ಕೆಎಂಎನ್ ಡಿ17 | Kannada Prabha

ಸಾರಾಂಶ

ಕನ್ನಡ ಕಲಾ ಸಂಘ ಗ್ರಾಮದಲ್ಲಿ ಹಲವು ಜನಜಾಗೃತಿ ಸಮಾಜಮುಖಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮಾದರಿ ಸಂಘವಾಗಿ ಕನ್ನಡ ಕಟ್ಟುವ, ಉಳಿಸಿ, ಬಳಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅರ್ಪಣಾ ಮನೋಭಾವ ಮೂಡಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವಿಶ್ವವೇ ಮೆಚ್ಚುವಂತಹ ಸಂವಿಧಾನ ನಮ್ಮದು. ಇದರ ಆಶಯ ಅರಿತು ನೆಮ್ಮದಿ ಬದುಕು ಸಾಧಿಸಬಹುದು ಎಂದು ಸಮಾಜ ಸೇವಾಕರ್ತ ಸತೀಶ್‌ ಹೇಳಿದರು.

ಪಟ್ಟಣದ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್‌ ಏರ್ಪಡಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿ ದೇಶ, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆ, ಸಮಾನತೆ ಪಾಠ ಕಲಿಸಿದರೆ ವಿಶ್ವಮಾನ್ಯರಾಗಿ ಇಡೀ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕು ನಡೆಸಬಹುದು ಎಂದರು.

ಸಮಾಜ ಸೇವಕಿ ಕವಿತಾ ಮಾತನಾಡಿ, ಕನ್ನಡ ಕಲಾ ಸಂಘ ಗ್ರಾಮದಲ್ಲಿ ಹಲವು ಜನಜಾಗೃತಿ ಸಮಾಜಮುಖಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮಾದರಿ ಸಂಘವಾಗಿ ಕನ್ನಡ ಕಟ್ಟುವ, ಉಳಿಸಿ, ಬಳಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅರ್ಪಣಾ ಮನೋಭಾವ ಮೂಡಿಸಿಕೊಂಡಿದೆ ಎಂದು ನುಡಿದರು.

ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಮಾತನಾಡಿ, ಪ್ರಜಾಪ್ರಭುತ್ವ ಜನರಿಗಾಗಿ ಇದ್ದು, ಇದರ ಸಾರವನ್ನು ಅಂಬೇಡ್ಕರ್‌ ಆಶಯದಂತೆ ತಿಳಿದು ಬದುಕಬೇಕಿದೆ. ಒಕ್ಕೂಟ ವ್ಯವಸ್ಥೆಯ ಗಣತಂತ್ರ ನಾಡಿನಲ್ಲಿ ಪ್ರಜೆಗಳೇ ಸಾರ್ವಭೌಮ. ಆರ್ಥಿಕ, ಶೈಕ್ಷಣಿಕೆ, ಉದ್ಯೋಗದಲ್ಲಿ ಸಮಾನತೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗಲಿದೆ. ಎಲ್ಲರಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ. ಹುಟ್ಟು ಸಾವಿನ ನಡುವೆ ಸಮಾನತೆಯಿಂದ ಬದುಕಲು ಮಕ್ಕಳಲ್ಲಿ ಬೇಧ ಭಾವದತಾರತಮ್ಯ ಮೊದಲುದೂರ ಸರಿಸಬೇಕಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಸ್ವಾತಂತ್ರ್ಯದ ಹಕ್ಕಿದೆ. ಹುಟ್ಟಿನಿಂದ ಸಾವಿನವರೆಗೆ ಸಂವಿಧಾನದ ಕಾನೂನು ತಳಹದಿಯಲ್ಲಿ ಬದುಕಬೇಕಿದೆ. ಇಡೀ ವಿಶ್ವವೇ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನುಗೌರವಿಸುತ್ತಿದೆ. ಮತದಾನದ ಹಕ್ಕಿನಿಂದ ಉತ್ತಮ ನಾಯಕ, ದೇಶಕಟ್ಟ ಬೇಕಾಗಿದೆ. ಉತ್ತಮರ ಆಯ್ಕೆ ಉತ್ತಮ ದೇಶ, ಆರ್ಥಿಕ ಸಮೃದ್ಧತೆಗೆ ನಾಂದಿಯಾಗಲಿದೆ ಎಂದರು.

ಮಕ್ಕಳು ಪ್ರಜಾಪ್ರಭುತ್ವದ ಮಹತ್ವ, ಮತದಾನ ಹಕ್ಕನ್ನು ಹಿರಿಯರು ಸದ್ಭಳಕೆ ಮಾಡಲು ಜಾಗೃತಿ ಮೂಡಿಸುವುದಾಗಿ ಪ್ರತಿಜ್ಞೆ ಮಾಡಿದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌