ಸೋತ ನಂತರ ಎಲ್ಲರೂ ಮಾತಾಡ್ತಾರೆ: ಸಂಸದೆ ಪ್ರಭಾ

KannadaprabhaNewsNetwork |  
Published : Jul 12, 2025, 12:32 AM IST
11ಕೆಡಿವಿಜಿ3-ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. | Kannada Prabha

ಸಾರಾಂಶ

ಚುನಾವಣೆಯಲ್ಲಿ ಸೋತ ನಂತರ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಾರೆ. ಈಗ ಕೆಲವರು ಅದನ್ನೇ ಮಾಡುತ್ತಿದ್ದಾರಷ್ಟೇ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಚುನಾವಣೆಯಲ್ಲಿ ಸೋತ ನಂತರ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಾರೆ. ಈಗ ಕೆಲವರು ಅದನ್ನೇ ಮಾಡುತ್ತಿದ್ದಾರಷ್ಟೇ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹಗೆ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನಮಗೆ ಕೊಡುವಂತೆ ಡೇ ಒನ್‌ನಿಂದಲೂ ಶಾಸಕರಾದ ಶಾಮನೂರು ಶಿವಶಂಕರಪ್ಪನವರಾಗಲೀ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರಾಗಲೀ ಕೇಳಿದವರಲ್ಲ. ಆದರೂ, ನಮ್ಮ ಹೈಕಮಾಂಡ್ ಟಿಕೆಟ್ ನೀಡಿದ್ದು, ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಗೆದ್ದಿತು ಎಂದರು.

ಬಿಜೆಪಿಯವರು ಯಾರೇ ಅಭ್ಯರ್ಥಿಯಾಗಿದ್ದರೂ ಒಬ್ಬರೇ ವ್ಯಕ್ತಿಯ ಹೆಸರನ್ನು ಹೇಳುತ್ತಾರೆ. ನರೇಂದ್ರ ಮೋದಿಗಾಗಿ ಓಟು ಕೊಡಿ, ದೇಶಕ್ಕಾಗಿ ಓಟು ಕೊಡಿ ಅಂತಾರೆ. ಆದರೆ, ಬಿಜೆಪಿಯವರಾರೂ ತಮಗೆ ಓಟು ಕೊಡಿ ಎಂದು ಕೇಳುವುದಿಲ್ಲ. ತಮ್ಮ ವೈಯಕ್ತಿಕ ಸಾಧನೆಯನ್ನು ಹೇಳಿಕೊಂಡು, ಮತ ಕೇಳುವುದಿಲ್ಲ. ಸೋತ ನಂತರ ಈಗ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಿದ್ದಾರಷ್ಟೇ ಎಂದು ಅವರು ಹೇಳಿದರು.

ವಿಪಕ್ಷದ ಓರ್ವ ಸದಸ್ಯೆಯಾಗಿ, ನನ್ನ ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮಾಡಿರುವ ಕೆಲಸ ನಾನು ಹೇಳಿದ್ದೇನೆ. ಜನರು ತೀರ್ಮಾನ ಮಾಡಲಿ ಎಂದು ಹೇಳಿದರು.

ಕೇಂದ್ರ ಸರ್ಕಾರ ವಾಷಿಂಗ್ ಮಷಿನ್ ಇಟ್ಟುಕೊಂಡಿದೆಯಲ್ಲ. ಅದರ ಬಗ್ಗೆ ಯಾಕೆ ಇಂತಹವರು ಮಾತನಾಡುವುದಿಲ್ಲ? ಯಾವುದೇ ಪಕ್ಷದವರು ಬಿಜೆಪಿಗೆ ಹೋದರೆ ಕ್ರಿಮಿನಲ್‌ ಕೇಸ್‌ ಹೋಗುತ್ತವೆ. ಐಟಿ, ಇಡಿ ಕೇಸ್ ಎಲ್ಲವೂ ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಸ್ವಚ್ಛವಾದ ರೀತಿಯಲ್ಲಿ ಸ್ವಚ್ಛವಾಗುತ್ತಾರಲ್ಲವೇ? ಅಂತಹ ವಿಷಯದ ಬಗ್ಗೆ ಯಾಕೆ ಚಕಾರವನ್ನು ಎತ್ತುವುದಿಲ್ಲ ಎಂದು ಅಡ್ಜೆಸ್‌ಮೆಂಟ್ ರಾಜಕಾರಣ ಮಾಡಿದ್ದಾರೆಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿಯ ಕೆಲವರು ಕಾಂಗ್ರೆಸ್ ಜೊತೆಗೆ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿದ್ದಾರೆಂಬ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ ಬಗ್ಗೆ ಅವರನ್ನೇ ಕೇಳಿ.

ಡಾ.ಪ್ರಭಾ ಮಲ್ಲಿಕಾರ್ಜುನ್‌, ದಾವಣಗೆರೆ ಸಂಸದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ