ಬ್ರೀಫ್‌...ಎಲ್ಲರ ಸಹಕಾರದಿಂದಉತ್ತಮ ಸೇವೆ: ಸಿಂಗ್

KannadaprabhaNewsNetwork |  
Published : Aug 09, 2026, 02:00 AM IST
ಚಿತ್ರ 7ಬಿಡಿಆರ್57 | Kannada Prabha

ಸಾರಾಂಶ

Birendra Singh Thakur, who assumed office as the new Executive Officer at the Taluk Panchayat office, was felicitated and honored by the Taluk Government Employees' Association on Friday.

ಭಾಲ್ಕಿ: ಇಲ್ಲಿಯ ತಾಲೂಕು ಪಂಚಾಯತಿ ಕಚೇರಿಯಲ್ಲಿ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬೀರೇಂದ್ರಸಿಂಗ್ ಠಾಕೂರ್ ಅವರನ್ಜು ತಾಲೂಕು ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ನೂತನ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್ ಮಾತನಾಡಿ, ಈ ಹಿಂದೆ ಬಸವಕಲ್ಯಾಣ, ಹುಮನಾಬಾದ್ ಮತ್ತು ಔರಾದ್ ತಾಲೂಕಿನಲ್ಲಿ ತಾ.ಪಂ ಅಧಿಕಾರಿ ಯಾಗಿ ಸೇವೆ ಸಲ್ಲಿಸು ವುದರ ಜತೆಗೆ ಜಿಪಂನಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಆಡಳಿತ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಅನುಭವನ್ನು ಧಾರೆಯೆರೆದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಕಾರ್ಯದರ್ಶಿ ರಾಜಪ್ಪ ಪಾಟೀಲ್, ರಾಜ್ಯ ಪರಿಷತ್ ಸದಸ್ಯ ಬಸವರಾಜ ಬಂಗಾರೆ, ಖಜಾಂಚಿ ಸುನಿಲ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮಾರುತಿ ಜಬನೂರ, ಪ್ರಮುಖರಾದ ವಿಜಯಕುಮಾರ ಪಾಟೀಲ್, ನಂದಕುಮಾರ ಜಾಧವ, ಧನರಾಜ ಜಡಗೆ, ಯುವರಾಜ ರಾಜಾಪುರೆ ಸೇರಿದಂತೆ ಹಲವರು ಇದ್ದರು.

--

ಚಿತ್ರ 7ಬಿಡಿಆರ್57:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತಕ್ಕೆ ರಕ್ತನಾಳ ಸವೆತ ಕಾರಣ!
ಇಂದಿನಿಂದ 3 ದಿನ ಜೆಡಿಎಸ್‌ ‘ಬಿಡದಿ ಪಾದಯಾತ್ರೆ’