ಸುಸ್ಥಿರ ವಾಣಿಜ್ಯ ಯೋಜನೆ: ಬ್ಯಾರೀಸ್ ಗ್ರೂಪ್‌ಗೆ ಕ್ರೆಡಾಯಿ ರಾಷ್ಟ್ರೀಯ ಪ್ರಶಸ್ತಿ

KannadaprabhaNewsNetwork |  
Published : Dec 25, 2025, 03:00 AM IST
ಬ್ಯಾರೀಸ್‌ ಗ್ರೂಪ್‌ಗೆ ಕ್ರೆಡಾಯಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ  | Kannada Prabha

ಸಾರಾಂಶ

ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಾಗಿ ಬ್ಯಾರೀಸ್ ಗ್ರೂಪ್ ಕ್ರೆಡಾಯಿ ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಪಾತ್ರವಾಗಿದೆ.

ಮಂಗಳೂರು: ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಾಗಿ ಬ್ಯಾರೀಸ್ ಗ್ರೂಪ್ ಕ್ರೆಡಾಯಿ ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಪಾತ್ರವಾಗಿದೆ. ಇತ್ತೀಚೆಗೆ ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ನಡೆದ ಕ್ರೆಡಾಯಿ ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ದೇಶದಾದ್ಯಂತ ೫೦೦ಕ್ಕೂ ಹೆಚ್ಚು ಖ್ಯಾತ ಡೆವಲಪರ್‌ಗಳು ಭಾಗವಹಿಸಿದ್ದು, ೮೦೦ಕ್ಕೂ ಹೆಚ್ಚು ಯೋಜನೆಗಳನ್ನು ಪರಿಗಣನೆಗೆ ಸಲ್ಲಿಸಲಾಗಿತ್ತು. ಮೌಲ್ಯಮಾಪನದ ಬಳಿಕ ೧೭೫ ಯೋಜನೆಗಳನ್ನು ಶಾರ್ಟ್‌ಲೀಸ್ಟ್ ಮಾಡಲಾಗಿದ್ದು, ಅವುಗಳಲ್ಲಿ ೨೫ ಯೋಜನೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ.

ಬ್ಯಾರೀಸ್ ಗ್ರೂಪ್ ಪರವಾಗಿ ಸಂಸ್ಥೆಯ ಉಪ ಆಡಳಿತ ನಿರ್ದೇಶಕ ಸಿದ್ದೀಕ್ ಬ್ಯಾರೀಸ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಬ್ಯಾರೀಸ್ ಗ್ರೂಪ್ ಅನುಷ್ಠಾನಗೊಳಿಸಿದ ಸುಸ್ಥಿರ ಕ್ರಮಗಳು, ಅತ್ಯುನ್ನತ ಸುರಕ್ಷತ ಮಾನದಂಡಗಳು ಮತ್ತು ತಂತ್ರಜ್ನಾನಗಳನ್ನು ಅಳವಡಿಸಿಕೊಂಡ ದೇಶದಲ್ಲೇ ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ಡೇಟಾ ಸೆಂಟರ್ ಯೋಜನೆಗಳ ವಿನ್ಯಾಸ ಮತ್ತು ನಿರ್ಮಾಣಕ್ಕೆ ಈ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಉಪ ಆಡಳಿತ ನಿರ್ದೇಶಕ ಸಿದ್ದೀಕ್ ಬ್ಯಾರಿ, ಕ್ರೆಡಾಯಿ ರಾಷ್ಟ್ರೀಯ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲೇ ತೀವ್ರ ಸ್ಪರ್ಧೆಯಲ್ಲಿ ಲಭಿಸಿದ ಈ ಗೌರವ ಬ್ಯಾರೀಸ್ ಗ್ರೂಪ್‌ಗೆ ಮಹತ್ವದ ಮೈಲಿಗಲ್ಲು. ಸುಸ್ಥಿರ ಅಭಿವೃದ್ಧಿ ಹಾಗೂ ಶ್ರೇಷ್ಠ ಇಂಜಿನಿಯರಿಂಗ್ ಹಾಗೂ ಜವಾಬ್ದಾರಿಯುತ ನಿರ್ಮಾಣಕ್ಕೆ ಸಂಸ್ಥೆ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಮನ್ನಣೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ